ತಾಲ್ಲೂಕಿನ ಮಿಟ್ಟಿಮಲ್ಕಾಪುರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಆರಂಭಿಸಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಬರೀ ಕುಮಾರಸ್ವಾಮಿ ಭಜನೆ ನಡೆದಿದೆ. ಜೆಡಿಎಸ್ 25 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಸುಳ್ಳಿನರಾಮಯ್ಯ ಹೇಳಿದ್ದಾರೆ. ಆದರೆ, ಚುನಾವಣೆ ಬಳಿಕ ಜೆಡಿಎಸ್ ದೇಶದ ಗಮನ ಸೆಳೆಯಲಿದೆ’ ಎಂದರು.