<p><strong>ರಾಯಚೂರು: </strong>ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಹಾಗೂ ರೈತ ಮಾರುಕಟ್ಟೆಯಲ್ಲಿ ಮಂಗಳವಾರ ನಸುಕಿನ ನಾಲ್ಕು ಗಂಟೆಯಿಂದ ಮಧ್ಯಾಹ್ನದವರೆಗೂ ತರಹೇವಾರಿ ತರಕಾರಿ ಮತ್ತು ಸೊಪ್ಪುಗಳ ವಹಿವಾಟು ಭರಾಟೆ ಜೋರಾಗಿತ್ತು.</p>.<p>ತರಕಾರಿ ಮೂಟೆಗಳನ್ನು ಸಾಗಿಸುವ ಟಂಟಂ, ಆಟೋಗಳು, ತಳ್ಳುಬಂಡಿಗಳು, ಜೀಪ್ಗಳ ದಟ್ಟಣೆ ವಿಪರೀತವಾಗಿತ್ತು. ತಾಜಾ ತರಕಾರಿಗಳನ್ನು ಖರೀದಿಸಲು ಬೆಳಗಿನ ಜಾವ 5 ಗಂಟೆಯಿಂದಲೇ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರು. ಮಕರ ಸಂಕ್ರಮಣ ಹಬ್ಬದ ಮುನ್ನಾದಿನ ಬೋಗಿ ಆಚರಣೆ ದಿನವಾದ ಮಂಗಳವಾರ ತರಕಾರಿ ದರಗಳೆಲ್ಲವೂ ಗಗನಮುಖಿಯಾಗಿದ್ದವು.</p>.<p>ಸಂಕ್ರಮಣ ದಿನ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಇದರಿಂದ ದರಗಳೆಲ್ಲ ಏರಿಕೆಯಾಗುವುದು ನಿರೀಕ್ಷಿತ ಎಂಬುದನ್ನು ಅರಿತಿದ್ದ ಜನರು, ಚೌಕಾಸಿಯಿಲ್ಲದೆ ಖರೀದಿಸುತ್ತಿರುವುದು ಕಂಡುಬಂತು. ಎರಡು ದಿನಗಳ ಹಿಂದೆ ಪ್ರತಿ ಕೆಜಿಗೆ ₹60 ಕ್ಕೆ ಮಾರಾಟವಾಗುತ್ತಿದ್ದ ಚವಳೇಕಾಯಿ ದರ ದಿಢೀರ್ ₹120 ಕ್ಕೆ ಏರಿಕೆಯಾಗಿತ್ತು. ಎಳೆ ಚವಳೇಕಾಯಿ ದರ ಕೆಜಿಗೆ ₹160 ರಷ್ಟಿತ್ತು.</p>.<p>ಅವರೇಕಾಯಿ, ಗಜ್ಜರಿ, ಬದನೇಕಾಯಿ, ಹಿರೇಕಾಯಿಗಳ ದರವು ತಲಾ ಪ್ರತಿ ಕೆಜಿಗೆ ₹80 ರಿಂದ ₹100 ಕ್ಕೆ ಮಾರಾಟವಾದವು. ದಪ್ಪಮೆಣಸು, ಹೂಕೋಸು, ಎಲೆಕೋಸು, ಬೆಂಡೆಕಾಯಿ ತಲಾ ಪ್ರತಿ ಕೆಜಿಗೆ ₹80 ಕ್ಕೆ ಏರಿಕೆಯಾಗಿತ್ತು. ಎರಡು ದಿನಗಳ ಹಿಂದೆ ಇದ್ದ ತರಕಾರಿ ದರಗಳೆಲ್ಲವೂ ದುಪ್ಪಟ್ಟಾಗಿದ್ದವು. ಮಾರುಕಟ್ಟೆಯಲ್ಲಿ ಖರೀದಿಸುವವರ ದಟ್ಟಣೆ ಏರ್ಪಟ್ಟಿದ್ದರಿಂದ ವ್ಯಾಪಾರಿಗಳು, ಚೌಕಾಸಿಗೆ ನಿಂತಿದ್ದ ಗ್ರಾಹಕರತ್ತ ಮುಖ ಕೂಡಾ ಎತ್ತಿ ನೋಡದ ಸ್ಥಿತಿ ಇತ್ತು!</p>.<p>ಸೊಪ್ಪುಗಳು, ಟೊಮೆಟೊ, ಆಲೂಗಡ್ಡೆ ದರಗಳು ಮಾತ್ರ ಎಂದಿನಂತಿದ್ದವು. ಆಲೂಗಡ್ಡೆ ಕೆಜಿಗೆ ₹30. ಟೊಮೆಟೊ ದರ ಮಾತ್ರ ಸ್ವಲ್ಪವೂ ಏರಿಕೆಯಾಗಿರಲಿಲ್ಲ; ₹10 ಕ್ಕೆ ಕೆಜಿ ಇದ್ದುದರಿಂದ ಜನರು ಮುಗಿಬಿದ್ದು ಚೀಲ ತುಂಬಿಕೊಂಡರು. ಗ್ರಾಮೀಣ ಭಾಗದಿಂದ ಬಂದಿದ್ದ ರೈತ ಮಹಿಳೆಯರು ಮಾರಾಟ ಮಾಡುತ್ತಿದ್ದ ಮೆಂತೆ, ಕೊತ್ತಂಬರಿ, ರಾಜಗಿರಿ, ಸಪ್ಪನಪಲ್ಲೆ, ಪುಂಡಿಪಲ್ಲೆ, ಪಾಲಕ ಸೊಪ್ಪಿನ ಪಲ್ಲೆ ಕಟ್ಟುಗಳ ದರ ತುಂಬಾ ಅಗ್ಗವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಹಾಗೂ ರೈತ ಮಾರುಕಟ್ಟೆಯಲ್ಲಿ ಮಂಗಳವಾರ ನಸುಕಿನ ನಾಲ್ಕು ಗಂಟೆಯಿಂದ ಮಧ್ಯಾಹ್ನದವರೆಗೂ ತರಹೇವಾರಿ ತರಕಾರಿ ಮತ್ತು ಸೊಪ್ಪುಗಳ ವಹಿವಾಟು ಭರಾಟೆ ಜೋರಾಗಿತ್ತು.</p>.<p>ತರಕಾರಿ ಮೂಟೆಗಳನ್ನು ಸಾಗಿಸುವ ಟಂಟಂ, ಆಟೋಗಳು, ತಳ್ಳುಬಂಡಿಗಳು, ಜೀಪ್ಗಳ ದಟ್ಟಣೆ ವಿಪರೀತವಾಗಿತ್ತು. ತಾಜಾ ತರಕಾರಿಗಳನ್ನು ಖರೀದಿಸಲು ಬೆಳಗಿನ ಜಾವ 5 ಗಂಟೆಯಿಂದಲೇ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರು. ಮಕರ ಸಂಕ್ರಮಣ ಹಬ್ಬದ ಮುನ್ನಾದಿನ ಬೋಗಿ ಆಚರಣೆ ದಿನವಾದ ಮಂಗಳವಾರ ತರಕಾರಿ ದರಗಳೆಲ್ಲವೂ ಗಗನಮುಖಿಯಾಗಿದ್ದವು.</p>.<p>ಸಂಕ್ರಮಣ ದಿನ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಇದರಿಂದ ದರಗಳೆಲ್ಲ ಏರಿಕೆಯಾಗುವುದು ನಿರೀಕ್ಷಿತ ಎಂಬುದನ್ನು ಅರಿತಿದ್ದ ಜನರು, ಚೌಕಾಸಿಯಿಲ್ಲದೆ ಖರೀದಿಸುತ್ತಿರುವುದು ಕಂಡುಬಂತು. ಎರಡು ದಿನಗಳ ಹಿಂದೆ ಪ್ರತಿ ಕೆಜಿಗೆ ₹60 ಕ್ಕೆ ಮಾರಾಟವಾಗುತ್ತಿದ್ದ ಚವಳೇಕಾಯಿ ದರ ದಿಢೀರ್ ₹120 ಕ್ಕೆ ಏರಿಕೆಯಾಗಿತ್ತು. ಎಳೆ ಚವಳೇಕಾಯಿ ದರ ಕೆಜಿಗೆ ₹160 ರಷ್ಟಿತ್ತು.</p>.<p>ಅವರೇಕಾಯಿ, ಗಜ್ಜರಿ, ಬದನೇಕಾಯಿ, ಹಿರೇಕಾಯಿಗಳ ದರವು ತಲಾ ಪ್ರತಿ ಕೆಜಿಗೆ ₹80 ರಿಂದ ₹100 ಕ್ಕೆ ಮಾರಾಟವಾದವು. ದಪ್ಪಮೆಣಸು, ಹೂಕೋಸು, ಎಲೆಕೋಸು, ಬೆಂಡೆಕಾಯಿ ತಲಾ ಪ್ರತಿ ಕೆಜಿಗೆ ₹80 ಕ್ಕೆ ಏರಿಕೆಯಾಗಿತ್ತು. ಎರಡು ದಿನಗಳ ಹಿಂದೆ ಇದ್ದ ತರಕಾರಿ ದರಗಳೆಲ್ಲವೂ ದುಪ್ಪಟ್ಟಾಗಿದ್ದವು. ಮಾರುಕಟ್ಟೆಯಲ್ಲಿ ಖರೀದಿಸುವವರ ದಟ್ಟಣೆ ಏರ್ಪಟ್ಟಿದ್ದರಿಂದ ವ್ಯಾಪಾರಿಗಳು, ಚೌಕಾಸಿಗೆ ನಿಂತಿದ್ದ ಗ್ರಾಹಕರತ್ತ ಮುಖ ಕೂಡಾ ಎತ್ತಿ ನೋಡದ ಸ್ಥಿತಿ ಇತ್ತು!</p>.<p>ಸೊಪ್ಪುಗಳು, ಟೊಮೆಟೊ, ಆಲೂಗಡ್ಡೆ ದರಗಳು ಮಾತ್ರ ಎಂದಿನಂತಿದ್ದವು. ಆಲೂಗಡ್ಡೆ ಕೆಜಿಗೆ ₹30. ಟೊಮೆಟೊ ದರ ಮಾತ್ರ ಸ್ವಲ್ಪವೂ ಏರಿಕೆಯಾಗಿರಲಿಲ್ಲ; ₹10 ಕ್ಕೆ ಕೆಜಿ ಇದ್ದುದರಿಂದ ಜನರು ಮುಗಿಬಿದ್ದು ಚೀಲ ತುಂಬಿಕೊಂಡರು. ಗ್ರಾಮೀಣ ಭಾಗದಿಂದ ಬಂದಿದ್ದ ರೈತ ಮಹಿಳೆಯರು ಮಾರಾಟ ಮಾಡುತ್ತಿದ್ದ ಮೆಂತೆ, ಕೊತ್ತಂಬರಿ, ರಾಜಗಿರಿ, ಸಪ್ಪನಪಲ್ಲೆ, ಪುಂಡಿಪಲ್ಲೆ, ಪಾಲಕ ಸೊಪ್ಪಿನ ಪಲ್ಲೆ ಕಟ್ಟುಗಳ ದರ ತುಂಬಾ ಅಗ್ಗವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>