ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕಸಬಾಲಿಂಗಸುಗೂರು ಅಮೀನ ದರ್ಗಾ ಬಳಿಯ ಜಮೀನಿನಲ್ಲಿ ಆಕಳುಕರುವಿನ ಮೇಲೆ ಯುವಕನೋರ್ವ ಅತ್ಯಾಚಾರ ನಡೆದ ಘಟನೆ ಭಾನುವಾರ ಬೆಳಿಗ್ಗೆ ಜರುಗಿದೆ.
‘ಆರೋಪಿ ಇಮ್ತಿಯಾಜ್ ಹುಸೇನಮಿಯಾ ಎಂಬ ಯುವಕ ನಮ್ಮ ಹೊಲದಲ್ಲಿನ ಆಕಳು ಕರುವಿನ ಕಾಲು ಕಟ್ಟಿ ನೆಲಕ್ಕೆ ಹಾಕಿ ಹಿಂಸೆ ನೀಡುವ ಮೂಲಕ ಅತ್ಯಾಚಾರ ನಡೆಸಿದ್ದಾನೆ’ ಎಂದು ಅಮರೇಶ ಬಸಣ್ಣ ಮಡಿವಾಳ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ದೂರು ಆಧರಿಸಿ ಪಿಎಸ್ಐ ಹನುಮಂತಪ್ಪ ಪ್ರಕರಣ ದಾಖಲಿಸಿದ್ದಾರೆ.