ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ ನಿರಾಣಿ, 'ಮೊದಲ ಸಲ ಕಂಪನಿಗೆ ಭೇಟಿ ನೀಡುತ್ತಿದ್ದೇನೆ. ಕಾರ್ಮಿಕರು ಮಾತುಕತೆಗೆ ಸಮಯ ಕೇಳಿದರೆ, ಈಗಲೂ ಸ್ಪಂದಿಸುತ್ತೇನೆ. ಗೌರವ ಇಲ್ಲದೆ ಚೀರಾಡಿಕೊಂಡಿದ್ದರೆ, ಕೇಳುವುದಕ್ಕೆ ಆಗುವುದಿಲ್ಲ. ಕಾರ್ಮಿಕರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿ, ಇತ್ಯರ್ಥ ಮಾಡಿಯೇ ಹೋಗುತ್ತೇನೆ. ಅಗತ್ಯ ಬಿದ್ದರೆ ವಾಸ್ತವ್ಯ ಉಳಿಯುತ್ತೇನೆ' ಎಂದರು.