<p><strong>ಕವಿತಾಳ</strong>: ಮಸ್ಕಿ ತಾಲ್ಲೂಕಿನ ತುಪ್ಪದೂರು ಮತ್ತು ಲಿಂಗಸುಗೂರು ತಾಲ್ಲೂಕಿನ ಚಿಕ್ಕಹೆಸರೂರು ಗ್ರಾಮಗಳ ನಡುವೆ ಇರುವ ‘ಮೊದಲೂಟಿ’ ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ ಆಕರ್ಷಕ ತಾಣ.</p>.<p>ಸುತ್ತಮುತ್ತ ಗುಡ್ಡಗಳು, ನಡುವೆ ಹರಿಯುವ ನೀರಿನ ಜರಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಗಿಡ ಮರಗಳು, ಹಸಿರು ವಾತಾವರಣ ಮತ್ತು ಪಕ್ಷಿಗಳ ಕಲರವ ಕೇಳಿ ಬರುವ ಈ ಸ್ಥಳದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿದ ಆದಯ್ಯ ಮತ್ತು ಅಮರಯ್ಯ ದೇವಸ್ಥಾನಗಳು ಭಕ್ತಿಯ ಪ್ರತೀಕವಾಗಿವೆ.</p>.<p>ಕಡು ಬೇಸಿಗೆ, ಮಳೆ ಬಾರದೆ ಬರಗಾಲ ಬಿದ್ದರೂ ವರ್ಷದ 365 ದಿನಗಳೂ ಇಲ್ಲಿ ನೀರು ಹರಿಯುವ ಕಾರಣಕ್ಕೆ ‘ಮೊದಲೂಟಿ’ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.</p>.<p>ಬೃಹತ್ ಗಾತ್ರದ ಅರಳಿ ಮರ, ನೆಲಬೇವು, ಮಯೂರ ಶಖೆ, ಎದುರು ಉತ್ತರಾಣಿ, ಸುಗಂಧಿ ಬೇರು, ಅಂಕಲಗಿ ಗಿಡ ಸೇರಿದಂತೆ ಹಲವು ಸಸ್ಯಗಳು ಹುಲುಸಾಗಿ ಬೆಳೆದಿವೆ. ನಿರಂತರ ಹರಿಯುವ ನೀರಿನಲ್ಲಿ ಔಷಧೀಯ ಗುಣ ಇದೆ ಎನ್ನುತ್ತಾರೆ ಸ್ಥಳೀಯರು. ಈ ನೀರು ಸೇವನೆಯಿಂದ ಹಲವರು ಗಂಭೀರ ಕಾಯಿಲೆಗಳಿಂದ ಗುಣ ಹೊಂದಿದ್ದಾರೆ ಎನ್ನುವುದು ಗ್ರಾಮಸ್ಥರ ನಂಬಿಕೆ.</p>.<p>‘ಆದಯ್ಯ, ಅಮರಯ್ಯ ದೇವಸ್ಥಾನದಲ್ಲಿನ ಉದ್ಭವ ಲಿಂಗಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಸಾಧಕರು ಆಧ್ಯಾತ್ಮಿಕ ಸಾಧನೆಗೆ ಇಲ್ಲಿ ಬರುತ್ತಾರೆ’ ಎಂದು ಕಳೆದ 15 ವರ್ಷಗಳಿಂದ ಇಲ್ಲಿ ನೆಲೆಯೂರಿದ ಭೀರಪ್ಪಜ್ಜ ತಿಳಿಸಿದರು.</p>.<p>ಈ ಪ್ರದೇಶದಲ್ಲಿ ಈಚೆಗೆ ಸ್ಥಾಪಿಸಿದ ಪವನ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು 1 ಕಿ.ಮೀ. ಅಂತರದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸ್ಥಳೀಯರಲ್ಲಿ ಆಶಾಭಾವನೆ ಮೂಡಿದೆ.</p>.<p>‘ಈ ಪ್ರದೇಶದಲ್ಲಿ ಕಳೆದ ವರ್ಷ ಸಿಡಿಲು ಬಡಿದು ಹತ್ತಕ್ಕೂ ಹೆಚ್ಚು ಕುರಿ ಸತ್ತರೂ ಕುರಿ ಹಿಂಡಿನ ನಡುವೆ ನಿಂತಿದ್ದ ತಮ್ಮ ಸೊಸೆ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸ್ಥಳದ ಮಹಿಮೆ ದೊಡ್ಡದು’ ಎಂದು ರಾಯಪ್ಪ ಹೇಳಿದರು.</p>.<p><strong>ಮಾರ್ಗಸೂಚಿ: </strong>ಮೊದಲೂಟಿಗೆ ತುಪ್ಪದೂರು ಗ್ರಾಮದ ಮೂಲಕ ಹೋಗುವುದಾದರೆ 1 ಕಿ.ಮೀ ಕಾಲ್ನಡಿಗೆ ಅನಿವಾರ್ಯ, ಚಿಕ್ಕಹೆಸರೂರು ಗ್ರಾಮದಿಂದ ಬೈಕ್, ಕಾರು ಮತ್ತಿತರ ವಾಹನ ಸಂಚರಿಸಲು ರಸ್ತೆ ಇದೆ.</p>.<div><blockquote>ಭಕ್ತರ ಸಮಿತಿ ರಚಿಸಿ ದೇವಸ್ಥಾನ ಅಭಿವೃದ್ಧಿಗೆ ಯೋಜಿಸಿದ್ದು ಸರ್ಕಾರದ ನೆರವು ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ. </blockquote><span class="attribution">ಬಸವರಾಜಪ್ಪಗೌಡ, ಹರ್ವಾಪುರ</span></div>.<div><blockquote>ಏಳು ನಾಲೆಗಳ ನೀರು ಸತತ ಹರಿಯುವ ಈ ಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ 15 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು. </blockquote><span class="attribution">ಗುರುಸಿದ್ದೇಶ ಮೇಟಿ, ಚಿಕ್ಕಹೆಸರೂರು</span></div>.<div><blockquote>ಬೆಂಗಳೂರು ಮೂಲದ ಎಂಜಿನಿಯರ್ ಮುಸ್ಲಿಂ ಸಮಾಜದ ಮುಷರಫ್ ಅವರು 9 ವರ್ಷ ದಸರಾ ಸಂದರ್ಭದಲ್ಲಿ ಇಲ್ಲಿ ದೇವಿ ಪುರಾಣ ಪ್ರವಚನ ನಡೆಸಿದ್ದಾರೆ </blockquote><span class="attribution">ಶಿವಕುಮಾರ ದಳಪತಿ, ತುಪ್ಪದೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ಮಸ್ಕಿ ತಾಲ್ಲೂಕಿನ ತುಪ್ಪದೂರು ಮತ್ತು ಲಿಂಗಸುಗೂರು ತಾಲ್ಲೂಕಿನ ಚಿಕ್ಕಹೆಸರೂರು ಗ್ರಾಮಗಳ ನಡುವೆ ಇರುವ ‘ಮೊದಲೂಟಿ’ ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ ಆಕರ್ಷಕ ತಾಣ.</p>.<p>ಸುತ್ತಮುತ್ತ ಗುಡ್ಡಗಳು, ನಡುವೆ ಹರಿಯುವ ನೀರಿನ ಜರಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಗಿಡ ಮರಗಳು, ಹಸಿರು ವಾತಾವರಣ ಮತ್ತು ಪಕ್ಷಿಗಳ ಕಲರವ ಕೇಳಿ ಬರುವ ಈ ಸ್ಥಳದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿದ ಆದಯ್ಯ ಮತ್ತು ಅಮರಯ್ಯ ದೇವಸ್ಥಾನಗಳು ಭಕ್ತಿಯ ಪ್ರತೀಕವಾಗಿವೆ.</p>.<p>ಕಡು ಬೇಸಿಗೆ, ಮಳೆ ಬಾರದೆ ಬರಗಾಲ ಬಿದ್ದರೂ ವರ್ಷದ 365 ದಿನಗಳೂ ಇಲ್ಲಿ ನೀರು ಹರಿಯುವ ಕಾರಣಕ್ಕೆ ‘ಮೊದಲೂಟಿ’ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.</p>.<p>ಬೃಹತ್ ಗಾತ್ರದ ಅರಳಿ ಮರ, ನೆಲಬೇವು, ಮಯೂರ ಶಖೆ, ಎದುರು ಉತ್ತರಾಣಿ, ಸುಗಂಧಿ ಬೇರು, ಅಂಕಲಗಿ ಗಿಡ ಸೇರಿದಂತೆ ಹಲವು ಸಸ್ಯಗಳು ಹುಲುಸಾಗಿ ಬೆಳೆದಿವೆ. ನಿರಂತರ ಹರಿಯುವ ನೀರಿನಲ್ಲಿ ಔಷಧೀಯ ಗುಣ ಇದೆ ಎನ್ನುತ್ತಾರೆ ಸ್ಥಳೀಯರು. ಈ ನೀರು ಸೇವನೆಯಿಂದ ಹಲವರು ಗಂಭೀರ ಕಾಯಿಲೆಗಳಿಂದ ಗುಣ ಹೊಂದಿದ್ದಾರೆ ಎನ್ನುವುದು ಗ್ರಾಮಸ್ಥರ ನಂಬಿಕೆ.</p>.<p>‘ಆದಯ್ಯ, ಅಮರಯ್ಯ ದೇವಸ್ಥಾನದಲ್ಲಿನ ಉದ್ಭವ ಲಿಂಗಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಸಾಧಕರು ಆಧ್ಯಾತ್ಮಿಕ ಸಾಧನೆಗೆ ಇಲ್ಲಿ ಬರುತ್ತಾರೆ’ ಎಂದು ಕಳೆದ 15 ವರ್ಷಗಳಿಂದ ಇಲ್ಲಿ ನೆಲೆಯೂರಿದ ಭೀರಪ್ಪಜ್ಜ ತಿಳಿಸಿದರು.</p>.<p>ಈ ಪ್ರದೇಶದಲ್ಲಿ ಈಚೆಗೆ ಸ್ಥಾಪಿಸಿದ ಪವನ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು 1 ಕಿ.ಮೀ. ಅಂತರದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸ್ಥಳೀಯರಲ್ಲಿ ಆಶಾಭಾವನೆ ಮೂಡಿದೆ.</p>.<p>‘ಈ ಪ್ರದೇಶದಲ್ಲಿ ಕಳೆದ ವರ್ಷ ಸಿಡಿಲು ಬಡಿದು ಹತ್ತಕ್ಕೂ ಹೆಚ್ಚು ಕುರಿ ಸತ್ತರೂ ಕುರಿ ಹಿಂಡಿನ ನಡುವೆ ನಿಂತಿದ್ದ ತಮ್ಮ ಸೊಸೆ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸ್ಥಳದ ಮಹಿಮೆ ದೊಡ್ಡದು’ ಎಂದು ರಾಯಪ್ಪ ಹೇಳಿದರು.</p>.<p><strong>ಮಾರ್ಗಸೂಚಿ: </strong>ಮೊದಲೂಟಿಗೆ ತುಪ್ಪದೂರು ಗ್ರಾಮದ ಮೂಲಕ ಹೋಗುವುದಾದರೆ 1 ಕಿ.ಮೀ ಕಾಲ್ನಡಿಗೆ ಅನಿವಾರ್ಯ, ಚಿಕ್ಕಹೆಸರೂರು ಗ್ರಾಮದಿಂದ ಬೈಕ್, ಕಾರು ಮತ್ತಿತರ ವಾಹನ ಸಂಚರಿಸಲು ರಸ್ತೆ ಇದೆ.</p>.<div><blockquote>ಭಕ್ತರ ಸಮಿತಿ ರಚಿಸಿ ದೇವಸ್ಥಾನ ಅಭಿವೃದ್ಧಿಗೆ ಯೋಜಿಸಿದ್ದು ಸರ್ಕಾರದ ನೆರವು ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ. </blockquote><span class="attribution">ಬಸವರಾಜಪ್ಪಗೌಡ, ಹರ್ವಾಪುರ</span></div>.<div><blockquote>ಏಳು ನಾಲೆಗಳ ನೀರು ಸತತ ಹರಿಯುವ ಈ ಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ 15 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು. </blockquote><span class="attribution">ಗುರುಸಿದ್ದೇಶ ಮೇಟಿ, ಚಿಕ್ಕಹೆಸರೂರು</span></div>.<div><blockquote>ಬೆಂಗಳೂರು ಮೂಲದ ಎಂಜಿನಿಯರ್ ಮುಸ್ಲಿಂ ಸಮಾಜದ ಮುಷರಫ್ ಅವರು 9 ವರ್ಷ ದಸರಾ ಸಂದರ್ಭದಲ್ಲಿ ಇಲ್ಲಿ ದೇವಿ ಪುರಾಣ ಪ್ರವಚನ ನಡೆಸಿದ್ದಾರೆ </blockquote><span class="attribution">ಶಿವಕುಮಾರ ದಳಪತಿ, ತುಪ್ಪದೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>