<p><strong>ಮುದಗಲ್:</strong> ಇಲ್ಲಿನ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ.</p>.<p>ಮೊಹರಂ ವೀಕ್ಷಣೆಗೆ ದೇಶ–ವಿದೇಶದಿಂದ ಜನರು ಆಗಮಿಸುತ್ತಿದ್ದಾರೆ. ಮೊಹರಂನ ಕೊನೆಯ ದಿನ ಹಸನ್-ಹುಸೇನ್ ಬೆಳ್ಳಿ ಪಾಂಜಾಗಳನ್ನು ಮುಖಾಬಿಲೆ ಮಾಡಿಸಲಾಗುತ್ತದೆ.</p>.<p>ಕೋಟೆಯ ಹೊರ ಭಾಗದಲ್ಲಿ ಸಹೋದರರಿಬ್ಬರ (ಭೇಟಿ) ಮುಖಾಬಿಲೆ ನೆರೆದ ಲಕ್ಷಾಂತರ ಜನರ ಕಣ್ಣಲ್ಲಿ ನೀರು ತರಿಸುತ್ತದೆ.</p>.<p>ಮುದಗಲ್ ಒಂದು ಕಾಲದಲ್ಲಿ ಸಂಘರ್ಷದ ನೆಲವಾಗಿತ್ತು. ಮೊಹರಂ ಆಚರಣೆಗೆ ಬಂದ ನಂತರ ಸಾಮರಸ್ಯದ ನೆಲವಾಗಿ ಗುರುತಿಸಿಕೊಂಡಿದೆ. ಹಸನ್-ಹುಸೇನರು ಮಹ್ಮದ್ ಪೈಗಂಬರರ ಮೊಮ್ಮಕ್ಕಳು. ಕರ್ಬಲಾ ನೆಲದಲ್ಲಿ ನಡೆದ ಘನಘೋರ ಸಂಗ್ರಾಮದಲ್ಲಿ ಹತರಾದ ವ್ಯಕ್ತಿಗಳಿವರು.</p>.<p>ಮುದಗಲ್ ಪಟ್ಟಣ ಒಂಬತ್ತು ದಿನಗಳಿಂದ ನವ ವಧುವಿನಂತೆ ಸಿಂಗಾರಗೊಂಡಿದೆ. ಕೋಟೆ ಒಳ ಮತ್ತು ಹೊರಭಾಗದ ಬಜಾರ್ ಜನ ಜಂಗುಳಿಯಿಂದ ಕಿಕ್ಕಿರಿದು ತುಂಬಿರುತ್ತದೆ. ಕೋಟೆ ಮುಂಭಾಗದಲ್ಲಿ ವಿವಿಧ ಅಂಗಡಿಗಳನ್ನು ಹಾಕಲಾಗಿದೆ. ಮಕ್ಕಳ ಆಟಕ್ಕೆ ಜೋಕಾಲಿಗಳನ್ನು ಅಳವಡಿಸಲಾಗಿದೆ.</p>.<p>ಅಮಾವಾಸ್ಯೆ ಆದ ಮೂರು ದಿನಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿಂದ ದಿನಕ್ಕೊಂದು ಬೆರಗು ಸೃಷ್ಟಿಸುತ್ತಾ ಹತ್ತು ದಿನ ನಡೆಯುವ ಮೊಹರಂಗೆ ಮೊದಲೆರಡು ದಿನ ಬೆಳ್ಳಿ ಪಾಂಜಾಗಳನ್ನು ಸಿಂಗರಿಸಿ ಮಸೀದಿ (ಮೊಹರಂ ದೇವರನ್ನು ಇಡುವ ದರ್ಗಾ)ಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.</p>.<p>ಪ್ರತಿ ದಿನ 10 ಗಂಟೆಗೆ ನವಾಬತ್ ನಗಾರಿ, ಬಾಜಾ–ಭಜಂತ್ರಿಗಳಿಂದ ದೇವರಿಗೆ(ಪೀರಾ)ದ ಹೂವು ಮುಡಿಸಲಾಗುತ್ತದೆ. ಐದನೇ ದಿನ ಸವಾರಿ. ಬಣ್ಣದ ಬಟ್ಟೆ, ಹೂಗಳಿಂದ ಅಲಂಕರಿಸಿದ ಪಾಂಜಾಗಳನ್ನು ಬೀದಿಗಳಲ್ಲಿ ರಾತ್ರಿಯೆಲ್ಲಾ ಮೆರವಣಿಗೆ ಮಾಡಿದರು.</p>.<p>ಮುದಗಲ್ ಕೋಟೆಯೊಳಗಿನ ದರ್ಗಾದಲ್ಲಿರುವ ಪೀರಾಗಳು ಸವಾರಿ ಏಳುವ ಸಂದರ್ಭದ ಮನಮೋಹಕ ದೃಶ್ಯವನ್ನು ಜನರು ಕಣ್ತುಂಬಿಕೊಂಡರು. ದರ್ಗಾದ ಮುಂದಿರುವ ಅಲಾಯಿ ಕುಣಿ ಮುಂದೆ ಯುವಕರ ಪಡೆ ಹೆಜ್ಜೆ ಹಾಕಿತು.</p>.<p>ಮೊಹರಂ ಪದಗಳನ್ನು ಮನಕರುಗುವಂತೆ ಹಾಡಿದರು. ಮೊಹರಂ ಪದಗಳ ಗಾಯಕರು, ನೆರೆದ ಜನರನ್ನು ಮೋಜು, ಮಸ್ತಿಯೊಂದಿಗೆ ಭಾವುಕರನ್ನಾಗಿ ಮಾಡಿದರು. ಕರ್ಬಲಾದ ಪದಗಳು ನೆರೆದವರ ಹೃದಯ ಕರಗಿಸಿಬಿಟ್ಟವು. ಹೆಣ್ಣು ಮಕ್ಕಳ ಕಣ್ಣಲ್ಲಿ ಹನಿಗಳುದುರಿದವು.</p>.<p>ಗುರುವಾರ ಇಮಾಮಿ ಖಾಸಿಂರ ಸವಾರಿ ನಡೆಯಿತು. ಶನಿವಾರ ಕತಲ್ ರಾತ್ರಿ (ಇಮಾಮಿ ಹುಸೇನರ ಸವಾರಿ) ಜರುಗಿತು. ಕರ್ಬಲಾ ಕಾಳಗದಲ್ಲಿ ಮಡಿದ ದಿನವನ್ನು ಕತಲ್ ರಾತ್ರಿ ಎಂದು ಆಚರಣೆ ಮಾಡಲಾಗುತ್ತದೆ.</p>.<p>ಮುದಗಲ್ ಮೊಹರಂ ಪ್ರಸಿದ್ಧಿ ಹೊಂದಲು ಕಾರಣರಾದವರು ಹಸನ್-ಹುಸೇನ್ ಸಹೋದರರು. ಇಂದು ಮೊಹರಂ ಕೊನೆ ದಿನ ಆ ಇಬ್ಬರನ್ನು ಮುಖಾಮುಖಿಯಾಗಿಸುವ ಆ ಗಳಿಗೆಗೆ ಲಕ್ಷಾಂತರ ಜನ ಕಾತುರರಾಗಿರುತ್ತಾರೆ. ಕೋಟೆಯ ಹೊರ ಭಾಗದಲ್ಲಿ ಈ ಎರಡು ಬೆಳ್ಳಿ ಪಂಜಾಗಳನ್ನು ಮುಖಾಬಿಲೆ ಮಾಡಿಸುವ ಆ ಕ್ಷಣ ಮದಗಲ್ ಮೊಹರಂನ ಆಕರ್ಷಕವೂ ಹೌದು.</p>.<div><blockquote>ಮೊಹರಂಗೆ ಪಟ್ಟಣದ ನಾಗರಿಕರು ಹುಸೇನಿ ಆಲಂ ದರ್ಗಾ ಸಮಿತಿ ಪೊಲೀಸ್ ಇಲಾಖೆ ಸೇರಿ ಇನ್ನಿತರರ ಸಹಕಾರದೊಂದಿಗೆ ಭಕ್ತರಿಗೆ ತೊಂದರೆಯಾಗದಂತೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ</blockquote><span class="attribution"> ಪ್ರವೀಣ ಬೋಗಾರ ಮುಖ್ಯಾಧಿಕಾರಿ ಪುರಸಭೆ ಮುದಗಲ್</span></div>.<div><blockquote>ಐತಿಹಾಸಿಕ ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇದಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ</blockquote><span class="attribution"> ಅಶೋಕಗೌಡ ಪಾಟೀಲ ಆದಾಪುರ ಮಾಜಿ ಅಧ್ಯಕ್ಷ ಪುರಸಭೆ ಮುದಗಲ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್:</strong> ಇಲ್ಲಿನ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ.</p>.<p>ಮೊಹರಂ ವೀಕ್ಷಣೆಗೆ ದೇಶ–ವಿದೇಶದಿಂದ ಜನರು ಆಗಮಿಸುತ್ತಿದ್ದಾರೆ. ಮೊಹರಂನ ಕೊನೆಯ ದಿನ ಹಸನ್-ಹುಸೇನ್ ಬೆಳ್ಳಿ ಪಾಂಜಾಗಳನ್ನು ಮುಖಾಬಿಲೆ ಮಾಡಿಸಲಾಗುತ್ತದೆ.</p>.<p>ಕೋಟೆಯ ಹೊರ ಭಾಗದಲ್ಲಿ ಸಹೋದರರಿಬ್ಬರ (ಭೇಟಿ) ಮುಖಾಬಿಲೆ ನೆರೆದ ಲಕ್ಷಾಂತರ ಜನರ ಕಣ್ಣಲ್ಲಿ ನೀರು ತರಿಸುತ್ತದೆ.</p>.<p>ಮುದಗಲ್ ಒಂದು ಕಾಲದಲ್ಲಿ ಸಂಘರ್ಷದ ನೆಲವಾಗಿತ್ತು. ಮೊಹರಂ ಆಚರಣೆಗೆ ಬಂದ ನಂತರ ಸಾಮರಸ್ಯದ ನೆಲವಾಗಿ ಗುರುತಿಸಿಕೊಂಡಿದೆ. ಹಸನ್-ಹುಸೇನರು ಮಹ್ಮದ್ ಪೈಗಂಬರರ ಮೊಮ್ಮಕ್ಕಳು. ಕರ್ಬಲಾ ನೆಲದಲ್ಲಿ ನಡೆದ ಘನಘೋರ ಸಂಗ್ರಾಮದಲ್ಲಿ ಹತರಾದ ವ್ಯಕ್ತಿಗಳಿವರು.</p>.<p>ಮುದಗಲ್ ಪಟ್ಟಣ ಒಂಬತ್ತು ದಿನಗಳಿಂದ ನವ ವಧುವಿನಂತೆ ಸಿಂಗಾರಗೊಂಡಿದೆ. ಕೋಟೆ ಒಳ ಮತ್ತು ಹೊರಭಾಗದ ಬಜಾರ್ ಜನ ಜಂಗುಳಿಯಿಂದ ಕಿಕ್ಕಿರಿದು ತುಂಬಿರುತ್ತದೆ. ಕೋಟೆ ಮುಂಭಾಗದಲ್ಲಿ ವಿವಿಧ ಅಂಗಡಿಗಳನ್ನು ಹಾಕಲಾಗಿದೆ. ಮಕ್ಕಳ ಆಟಕ್ಕೆ ಜೋಕಾಲಿಗಳನ್ನು ಅಳವಡಿಸಲಾಗಿದೆ.</p>.<p>ಅಮಾವಾಸ್ಯೆ ಆದ ಮೂರು ದಿನಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿಂದ ದಿನಕ್ಕೊಂದು ಬೆರಗು ಸೃಷ್ಟಿಸುತ್ತಾ ಹತ್ತು ದಿನ ನಡೆಯುವ ಮೊಹರಂಗೆ ಮೊದಲೆರಡು ದಿನ ಬೆಳ್ಳಿ ಪಾಂಜಾಗಳನ್ನು ಸಿಂಗರಿಸಿ ಮಸೀದಿ (ಮೊಹರಂ ದೇವರನ್ನು ಇಡುವ ದರ್ಗಾ)ಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.</p>.<p>ಪ್ರತಿ ದಿನ 10 ಗಂಟೆಗೆ ನವಾಬತ್ ನಗಾರಿ, ಬಾಜಾ–ಭಜಂತ್ರಿಗಳಿಂದ ದೇವರಿಗೆ(ಪೀರಾ)ದ ಹೂವು ಮುಡಿಸಲಾಗುತ್ತದೆ. ಐದನೇ ದಿನ ಸವಾರಿ. ಬಣ್ಣದ ಬಟ್ಟೆ, ಹೂಗಳಿಂದ ಅಲಂಕರಿಸಿದ ಪಾಂಜಾಗಳನ್ನು ಬೀದಿಗಳಲ್ಲಿ ರಾತ್ರಿಯೆಲ್ಲಾ ಮೆರವಣಿಗೆ ಮಾಡಿದರು.</p>.<p>ಮುದಗಲ್ ಕೋಟೆಯೊಳಗಿನ ದರ್ಗಾದಲ್ಲಿರುವ ಪೀರಾಗಳು ಸವಾರಿ ಏಳುವ ಸಂದರ್ಭದ ಮನಮೋಹಕ ದೃಶ್ಯವನ್ನು ಜನರು ಕಣ್ತುಂಬಿಕೊಂಡರು. ದರ್ಗಾದ ಮುಂದಿರುವ ಅಲಾಯಿ ಕುಣಿ ಮುಂದೆ ಯುವಕರ ಪಡೆ ಹೆಜ್ಜೆ ಹಾಕಿತು.</p>.<p>ಮೊಹರಂ ಪದಗಳನ್ನು ಮನಕರುಗುವಂತೆ ಹಾಡಿದರು. ಮೊಹರಂ ಪದಗಳ ಗಾಯಕರು, ನೆರೆದ ಜನರನ್ನು ಮೋಜು, ಮಸ್ತಿಯೊಂದಿಗೆ ಭಾವುಕರನ್ನಾಗಿ ಮಾಡಿದರು. ಕರ್ಬಲಾದ ಪದಗಳು ನೆರೆದವರ ಹೃದಯ ಕರಗಿಸಿಬಿಟ್ಟವು. ಹೆಣ್ಣು ಮಕ್ಕಳ ಕಣ್ಣಲ್ಲಿ ಹನಿಗಳುದುರಿದವು.</p>.<p>ಗುರುವಾರ ಇಮಾಮಿ ಖಾಸಿಂರ ಸವಾರಿ ನಡೆಯಿತು. ಶನಿವಾರ ಕತಲ್ ರಾತ್ರಿ (ಇಮಾಮಿ ಹುಸೇನರ ಸವಾರಿ) ಜರುಗಿತು. ಕರ್ಬಲಾ ಕಾಳಗದಲ್ಲಿ ಮಡಿದ ದಿನವನ್ನು ಕತಲ್ ರಾತ್ರಿ ಎಂದು ಆಚರಣೆ ಮಾಡಲಾಗುತ್ತದೆ.</p>.<p>ಮುದಗಲ್ ಮೊಹರಂ ಪ್ರಸಿದ್ಧಿ ಹೊಂದಲು ಕಾರಣರಾದವರು ಹಸನ್-ಹುಸೇನ್ ಸಹೋದರರು. ಇಂದು ಮೊಹರಂ ಕೊನೆ ದಿನ ಆ ಇಬ್ಬರನ್ನು ಮುಖಾಮುಖಿಯಾಗಿಸುವ ಆ ಗಳಿಗೆಗೆ ಲಕ್ಷಾಂತರ ಜನ ಕಾತುರರಾಗಿರುತ್ತಾರೆ. ಕೋಟೆಯ ಹೊರ ಭಾಗದಲ್ಲಿ ಈ ಎರಡು ಬೆಳ್ಳಿ ಪಂಜಾಗಳನ್ನು ಮುಖಾಬಿಲೆ ಮಾಡಿಸುವ ಆ ಕ್ಷಣ ಮದಗಲ್ ಮೊಹರಂನ ಆಕರ್ಷಕವೂ ಹೌದು.</p>.<div><blockquote>ಮೊಹರಂಗೆ ಪಟ್ಟಣದ ನಾಗರಿಕರು ಹುಸೇನಿ ಆಲಂ ದರ್ಗಾ ಸಮಿತಿ ಪೊಲೀಸ್ ಇಲಾಖೆ ಸೇರಿ ಇನ್ನಿತರರ ಸಹಕಾರದೊಂದಿಗೆ ಭಕ್ತರಿಗೆ ತೊಂದರೆಯಾಗದಂತೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ</blockquote><span class="attribution"> ಪ್ರವೀಣ ಬೋಗಾರ ಮುಖ್ಯಾಧಿಕಾರಿ ಪುರಸಭೆ ಮುದಗಲ್</span></div>.<div><blockquote>ಐತಿಹಾಸಿಕ ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇದಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ</blockquote><span class="attribution"> ಅಶೋಕಗೌಡ ಪಾಟೀಲ ಆದಾಪುರ ಮಾಜಿ ಅಧ್ಯಕ್ಷ ಪುರಸಭೆ ಮುದಗಲ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>