<p><strong>ಮಸ್ಕಿ (ರಾಯಚೂರು ಜಿಲ್ಲೆ):</strong> ತಾಲ್ಲೂಕಿನ ಸಂತೆಕಲ್ಲೂರಿನಲ್ಲಿ ಮೊಹರಂ ಹಬ್ಬ ಆಚರಿಸುವ ವೇಳೆ ವಿದ್ಯುತ್ ತಂತಿಗೆ ಪಂಜಾಸ್ಪರ್ಶವಾಗಿದ್ದರಿಂದ ಪಂಜಾ ಹಿಡಿದಿದ್ದ ವ್ಯಕ್ತಿ ಹಾಗೂ ಕಾಲಿಗೆ ನಮಸ್ಕರಿಸುತ್ತಿದ್ದ ಮಹಿಳೆ, ಇಬ್ಬರು ಮೃತಪಟ್ಟ ಮನಕಲಕುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.<br /><br />ಪಂಜಾ ಹಿಡಿದಿದ್ದ ಹುಸೇನಸಾಬ ದೇವರಮನಿ (50) ಹಾಗೂ ಹುಲಿಗೆಮ್ಮ (18) ಮೃತರಾದವರು.<br /><br />ಮೊಹರಂ ಕೊನೆಯ ದಿನದಂದು ಮೆರವಣಿಗೆ ನಡೆಯುತ್ತಿತ್ತು. 8 ಅಡಿ ಇರುವ ಪಂಜಾ ಎತ್ತಿಕೊಂಡು ಹುಸೇನಸಾಬ ಹೆಜ್ಜೆ ಹಾಕುತ್ತಿದ್ದರು. ಮಾರ್ಗದಲ್ಲಿದ್ದ ವಿದ್ಯುತ್ ಕಂಬದಿಂದ ಹಾಯ್ದು ಹೋಗಿದ್ದ ತಂತಿಗಳು ತಗುಲಿವೆ. ಕೂಡಲೇ ಇಬ್ಬರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿಕೊಂಡಿತು.<br /><br />ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಸ್ಕಿ ಪೊಲೀಸರು ಬೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ. <br />ಶಾಸಕ ಆರ್. ಬಸನಗೌಡ, ತಹಶೀಲ್ದಾರ್ ಕವಿತಾ ಆರ್. ಡಿಎಸ್ ಪಿ ಎಸ್. ಎಸ್. ಹುಲ್ಲೂರ, ಸರ್ಕಲ್ ಇನ್ ಸ್ಪೆಕ್ಟರ್ ದೀಪಕ್ ಬೂಸರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೇಟಿ ನೀಡಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/karnataka-cabinet-politics-coronavirus-covid-19-congress-bjp-859396.html" target="_blank">ಬಿಜೆಪಿಯ ಡಕೋಟಾ ಇಂಜಿನ್ ಸರ್ಕಾರ ಎಂದಿಗೂ ಟೇಕಾಫ್ ಆಗದು: ಕಾಂಗ್ರೆಸ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ (ರಾಯಚೂರು ಜಿಲ್ಲೆ):</strong> ತಾಲ್ಲೂಕಿನ ಸಂತೆಕಲ್ಲೂರಿನಲ್ಲಿ ಮೊಹರಂ ಹಬ್ಬ ಆಚರಿಸುವ ವೇಳೆ ವಿದ್ಯುತ್ ತಂತಿಗೆ ಪಂಜಾಸ್ಪರ್ಶವಾಗಿದ್ದರಿಂದ ಪಂಜಾ ಹಿಡಿದಿದ್ದ ವ್ಯಕ್ತಿ ಹಾಗೂ ಕಾಲಿಗೆ ನಮಸ್ಕರಿಸುತ್ತಿದ್ದ ಮಹಿಳೆ, ಇಬ್ಬರು ಮೃತಪಟ್ಟ ಮನಕಲಕುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.<br /><br />ಪಂಜಾ ಹಿಡಿದಿದ್ದ ಹುಸೇನಸಾಬ ದೇವರಮನಿ (50) ಹಾಗೂ ಹುಲಿಗೆಮ್ಮ (18) ಮೃತರಾದವರು.<br /><br />ಮೊಹರಂ ಕೊನೆಯ ದಿನದಂದು ಮೆರವಣಿಗೆ ನಡೆಯುತ್ತಿತ್ತು. 8 ಅಡಿ ಇರುವ ಪಂಜಾ ಎತ್ತಿಕೊಂಡು ಹುಸೇನಸಾಬ ಹೆಜ್ಜೆ ಹಾಕುತ್ತಿದ್ದರು. ಮಾರ್ಗದಲ್ಲಿದ್ದ ವಿದ್ಯುತ್ ಕಂಬದಿಂದ ಹಾಯ್ದು ಹೋಗಿದ್ದ ತಂತಿಗಳು ತಗುಲಿವೆ. ಕೂಡಲೇ ಇಬ್ಬರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿಕೊಂಡಿತು.<br /><br />ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಸ್ಕಿ ಪೊಲೀಸರು ಬೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ. <br />ಶಾಸಕ ಆರ್. ಬಸನಗೌಡ, ತಹಶೀಲ್ದಾರ್ ಕವಿತಾ ಆರ್. ಡಿಎಸ್ ಪಿ ಎಸ್. ಎಸ್. ಹುಲ್ಲೂರ, ಸರ್ಕಲ್ ಇನ್ ಸ್ಪೆಕ್ಟರ್ ದೀಪಕ್ ಬೂಸರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೇಟಿ ನೀಡಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/karnataka-cabinet-politics-coronavirus-covid-19-congress-bjp-859396.html" target="_blank">ಬಿಜೆಪಿಯ ಡಕೋಟಾ ಇಂಜಿನ್ ಸರ್ಕಾರ ಎಂದಿಗೂ ಟೇಕಾಫ್ ಆಗದು: ಕಾಂಗ್ರೆಸ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>