ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕೊರವರ್, ಮನರೇಗಾ ಯೋಜನೆಯ ಅಡಿ ಇದಕ್ಕೂ ಮುಂಚೆ ಕೆರೆಯ ಹೂಳನ್ನು ಎತ್ತಿಸಲಾಗಿದೆ. ಕೆರೆಗೆ ನೀರಿನ ಮೂಲವಾಗಿರುವ ಹಳ್ಳ ಜಾಲಿ, ಕಳೆ ಗಿಡಗಳಿಂದ ತುಂಬಿ ನೀರು ಸರಾಗವಾಗಿ ಹರಿಯದಂತಾಗಿತ್ತು. ಗ್ರಾಮಸ್ಥರ ಮತ್ತು ರೈತರ ಮನವಿಯ ಮೇರೆಗೆ ಹಳ್ಳ ಸ್ವಚ್ಛಗೊಳಿಸುವ ಕೆಲಸ ಕೈಗೊಂಡಿದ್ದೇವೆ. ಸುಮಾರು 375ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಜಂಗಲ್ಕಟಿಂಗ್, ಹಳ್ಳದ ಹೂಳು ತೆಗೆಯುವಲ್ಲಿ ನಿರತರಾಗಿದ್ದಾರೆ ಎಂದರು.