<p><strong>ಮಸ್ಕಿ (ರಾಯಚೂರು ಜಿಲ್ಲೆ):</strong> ಡಾ.ಅಬ್ದುಲ್ ಕಲಾಂ ಫೌಂಡೇಷನ್ ಹೆಸರಿನಲ್ಲಿ ಪಟ್ಟಣದಲ್ಲಿ ರಾಷ್ಟ್ರಮಟದ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸುಳ್ಳು ಪ್ರಚಾರ ನಡೆಸಿ ಕ್ರೀಡಾಪಟುಗಳನ್ನು ವಂಚಿಸಲಾಗಿದೆ. </p>.<p>ಸೆ.25ರಂದು ಮಸ್ಕಿ ಪಟ್ಟಣದಲ್ಲಿ ರಾಷ್ಟ್ರಮಟ್ಟದ ಓಟದ ಸರ್ಧೆ ಏರ್ಪಡಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಪ್ರವೇಶ ಶುಲ್ಕ ₹5,000 ಅನ್ನು ಮೊಬೈಲ್ 9359435107 ಸಂಖ್ಯೆಗೆ ಫೋನ್ ಪೇ ಮಾಡಬೇಕು ಎಂದು ತಿಳಿಸಿದ್ದಾರೆ.</p>.<p>ಡಾ.ಅಬ್ದುಲ್ ಕಲಾಂ ಫೌಂಡೇಷನ್ ಹೆಸರಿನ ಭಿತ್ತಿಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ರಾಜ್ಯದ ಓಟಗಾರ್ತಿಯೊಬ್ಬರು, ಎರಡು ದಿನಗಳ ಹಿಂದೆ ಭಿತ್ತಿಪತ್ರದಲ್ಲಿ ಹಾಕಿದ ಮೊಬೈಲ್ 9620515140/ 8383691009ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಫೋನ್ ಪೇ ಮಾಡಿ ಸೆ.24ರಂದು ರಾಯಚೂರಿನ ರಂಗಮಂದಿರದಲ್ಲಿ ಭೇಟಿಯಾಗಿ ಎಂದು ಸೂಚಿಸಿದ್ದಾರೆ.</p>.<p>ಅದರಂತೆ ಸೆ.24ರಂದು ಬೆಂಗಳೂರಿನಿಂದ ರಾಯಚೂರಿಗೆ ಬಂದ ಓಟಗಾರ್ತಿ, ಫೋನ್ ಪೇ ಮಾಡದೆ ನೆರವಾಗಿ ರಂಗಮಂದಿರಕ್ಕೆ ಬಂದು ವಿಚಾರಿಸಿದಾಗ ಯಾವುದೇ ಓಟದ ಸ್ಪರ್ಧೆ ಆಯೋಜಿಸಿಲ್ಲ ಎಂಬುದು ಗೊತ್ತಾಗಿದೆ. ಭಿತ್ತಿಪತ್ರದಲ್ಲಿ ಕೊಟ್ಟ ಮೂರು ಮೊಬೈಲ್ ನಂಬರ್ಗಳು ಸ್ವಿಚ್ ಆಫ್ ಆಗಿವೆ.</p>.<p>ಮಸ್ಕಿಯಲ್ಲಿ ಡಾ.ಅಬ್ದಲ್ ಕಲಾಂ ಫೌಂಡೇಷನ್ ಹೆಸರಿನಲ್ಲಿ ಯಾವುದೇ ಸಂಸ್ಥೆ ಇಲ್ಲ. ಆದರೂ ಈ ಫೌಂಡೇಷನ್ನ ಹೆಸರಿನಲ್ಲಿ ಭಿತ್ತಿಪತ್ರ ಹಾಕಿ ಭಾರತಿ ಸಿಮೆಂಟ್ನ ವಿಶಾಲರೆಡ್ಡಿ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಹಾಕಿ ಸಂಪರ್ಕಿಸುವಂತೆ ಹೇಳಲಾಗಿದೆ.</p>.<p>‘ಮಸ್ಕಿ ಪಟ್ಟಣದಲ್ಲಿ ಡಾ.ಅಬ್ದುಲ್ ಕಲಾಂ ಫೌಂಡೇಷನ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ಓಟದ ಸ್ಪರ್ಧೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪಿಎಸ್ಐ ಕೆ.ರಂಗಯ್ಯ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ (ರಾಯಚೂರು ಜಿಲ್ಲೆ):</strong> ಡಾ.ಅಬ್ದುಲ್ ಕಲಾಂ ಫೌಂಡೇಷನ್ ಹೆಸರಿನಲ್ಲಿ ಪಟ್ಟಣದಲ್ಲಿ ರಾಷ್ಟ್ರಮಟದ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸುಳ್ಳು ಪ್ರಚಾರ ನಡೆಸಿ ಕ್ರೀಡಾಪಟುಗಳನ್ನು ವಂಚಿಸಲಾಗಿದೆ. </p>.<p>ಸೆ.25ರಂದು ಮಸ್ಕಿ ಪಟ್ಟಣದಲ್ಲಿ ರಾಷ್ಟ್ರಮಟ್ಟದ ಓಟದ ಸರ್ಧೆ ಏರ್ಪಡಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಪ್ರವೇಶ ಶುಲ್ಕ ₹5,000 ಅನ್ನು ಮೊಬೈಲ್ 9359435107 ಸಂಖ್ಯೆಗೆ ಫೋನ್ ಪೇ ಮಾಡಬೇಕು ಎಂದು ತಿಳಿಸಿದ್ದಾರೆ.</p>.<p>ಡಾ.ಅಬ್ದುಲ್ ಕಲಾಂ ಫೌಂಡೇಷನ್ ಹೆಸರಿನ ಭಿತ್ತಿಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ರಾಜ್ಯದ ಓಟಗಾರ್ತಿಯೊಬ್ಬರು, ಎರಡು ದಿನಗಳ ಹಿಂದೆ ಭಿತ್ತಿಪತ್ರದಲ್ಲಿ ಹಾಕಿದ ಮೊಬೈಲ್ 9620515140/ 8383691009ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಫೋನ್ ಪೇ ಮಾಡಿ ಸೆ.24ರಂದು ರಾಯಚೂರಿನ ರಂಗಮಂದಿರದಲ್ಲಿ ಭೇಟಿಯಾಗಿ ಎಂದು ಸೂಚಿಸಿದ್ದಾರೆ.</p>.<p>ಅದರಂತೆ ಸೆ.24ರಂದು ಬೆಂಗಳೂರಿನಿಂದ ರಾಯಚೂರಿಗೆ ಬಂದ ಓಟಗಾರ್ತಿ, ಫೋನ್ ಪೇ ಮಾಡದೆ ನೆರವಾಗಿ ರಂಗಮಂದಿರಕ್ಕೆ ಬಂದು ವಿಚಾರಿಸಿದಾಗ ಯಾವುದೇ ಓಟದ ಸ್ಪರ್ಧೆ ಆಯೋಜಿಸಿಲ್ಲ ಎಂಬುದು ಗೊತ್ತಾಗಿದೆ. ಭಿತ್ತಿಪತ್ರದಲ್ಲಿ ಕೊಟ್ಟ ಮೂರು ಮೊಬೈಲ್ ನಂಬರ್ಗಳು ಸ್ವಿಚ್ ಆಫ್ ಆಗಿವೆ.</p>.<p>ಮಸ್ಕಿಯಲ್ಲಿ ಡಾ.ಅಬ್ದಲ್ ಕಲಾಂ ಫೌಂಡೇಷನ್ ಹೆಸರಿನಲ್ಲಿ ಯಾವುದೇ ಸಂಸ್ಥೆ ಇಲ್ಲ. ಆದರೂ ಈ ಫೌಂಡೇಷನ್ನ ಹೆಸರಿನಲ್ಲಿ ಭಿತ್ತಿಪತ್ರ ಹಾಕಿ ಭಾರತಿ ಸಿಮೆಂಟ್ನ ವಿಶಾಲರೆಡ್ಡಿ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಹಾಕಿ ಸಂಪರ್ಕಿಸುವಂತೆ ಹೇಳಲಾಗಿದೆ.</p>.<p>‘ಮಸ್ಕಿ ಪಟ್ಟಣದಲ್ಲಿ ಡಾ.ಅಬ್ದುಲ್ ಕಲಾಂ ಫೌಂಡೇಷನ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ಓಟದ ಸ್ಪರ್ಧೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪಿಎಸ್ಐ ಕೆ.ರಂಗಯ್ಯ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>