<p><strong>ರಾಯಚೂರು:</strong>ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ವಹಿವಾಟಿನ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.</p>.<p>ಇದೇ ಮೊದಲಬಾರಿ ವ್ಯಾಪಾರಿಗಳು ಈರುಳ್ಳಿಯನ್ನು ಬೆಳ್ಳುಳ್ಳಿಯಂತೆ ಮಾರಾಟ ಮಾಡುತ್ತಿದ್ದಾರೆ. ಅಂಗೈಯಲ್ಲಿ ಒಂದು ಹಿಡಿಯಬಹುದಾದ ದೊಡ್ಡಗಾತ್ರದ ಈರುಳ್ಳಿ ದರ ಪ್ರತಿ ಕೆಜಿಗೆ ₹120 ಕ್ಕೆ ಏರಿಕೆಯಾಗಿದೆ. ಬಡವರು ಮತ್ತು ಕೆಳಮಧ್ಯಮವರ್ಗದವರು ಇಂತಹ ಈರುಳ್ಳಿ ಖರೀದಿಸುವುದು ಅಪರೂಪ. ಸದ್ಯ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯಷ್ಟೇ ದಪ್ಪಗಿರುವ (3ನೇ ಗುಣಮಟ್ಟದ) ಪಕಳೆಗಳು ಚದುರಿದ ಈರುಳ್ಳಿ ಪ್ರತಿ ಕೆಜಿಗೆ ₹80 ರ ದರದಲ್ಲಿ ಮಾರಾಟ ಆಗುತ್ತಿದೆ. ಮತ್ತೆ ದುಬಾರಿಯಾಗಬಹುದು ಎಂದರಿತು ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡುಬಂತು.</p>.<p>ಒಂದು ವಾರದ ಹಿಂದೆ ಬೆಳ್ಳುಳ್ಳಿ ಮತ್ತು ಈರುಳ್ಳಿ ದರಗಳ ಮಧ್ಯೆ ₹100 ವ್ಯತ್ಯಾಸ ಇತ್ತು. ಈಗ ಅಂತರ ಕಡಿಮೆಯಾಗುತ್ತಿದೆ. ಈರುಳ್ಳಿ ದರ ಸತತ ಏರಿಕೆಯಿಂದ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು ಒಂದು ಕೆಜಿ ಬೆಳ್ಳುಳ್ಳಿ ₹160 ರಿಂದ ₹200ಕ್ಕೆ ಏರಿಕೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ, ಇನ್ನುಳಿದ ತರಕಾರಿಗಳ ದರದಲ್ಲಿ ಬಹಳ ವ್ಯತ್ಯಾಸವಾಗಿಲ್ಲ. ಸ್ವಲ್ಪ ಅಗ್ಗವಾಗಿದ್ದು, ಟೊಮೆಟೊ ದರ ಕುಸಿತವಾಗುತ್ತಿದೆ.</p>.<p>ಹಸಿಮೆಣಸಿನಕಾಯಿ, ಟೊಮೆಟೊ, ಆಲೂಗಡ್ಡೆ, ಎಲೆಕೋಸು, ಬದನೆಕಾಯಿ, ಸವತೆಕಾಯಿ ಅಗ್ಗದ ತರಕಾರಿಗಳು. ಖಾನಾವಳಿಗೆ ಸಗಟು ರೂಪದಲ್ಲಿ ಇವುಗಳ ಖರೀದಿ ಯತೇಚ್ಛವಾಗಿದೆ. ಆಲೂಗಡ್ಡೆ ಮತ್ತು ಹೂಕೋಸು ಹೊರಜಿಲ್ಲೆಗಳಿಂದ ಬರುತ್ತಿದೆ. ಇನ್ನುಳಿದ ಸೊಪ್ಪು ಮತ್ತು ತರಕಾರಿಗಳು ಬಹುತೇಕ ರಾಯಚೂರು ಜಿಲ್ಲೆಯ ರೈತರು ಬೆಳೆದಿದ್ದಾರೆ. ಬೀನ್ಸ್, ಗಜ್ಜರಿ, ಹೂಕೋಸು, ಬೆಳ್ಳುಳ್ಳಿ ಬೆಳಗಾವಿಯಿಂದ ಬರುತ್ತಿವೆ.</p>.<p>ತಂಪು ಹವಾಮಾನ ಇರುವುದರಿಂದ ರೈತರು ಸೊಪ್ಪುಗಳನ್ನು ಸಾಕಷ್ಟು ಬೆಳೆದಿದ್ದು, ಪಾಲಕ್, ಸಬ್ಬಕ್ಕಿ, ಕೊತಂಬರಿ, ಸಪ್ಪನ ಪಲ್ಲೆ, ಮೇಂತೆ ಎಲ್ಲವೂ ಸಾಮಾನ್ಯ ದರದಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಅಪರೂಪವಾಗಿದೆ. ಒಂದು ದಂಟಿಗೆ ₹10 ದರದಲ್ಲಿ ಸಿಗುತ್ತಿದೆ.</p>.<p>ರಾಯಚೂರು ಉಸ್ಮಾನಿಯಾ ತರಕಾರಿ ಮಾರುಕಟ್ಟೆ</p>.<p>ತರಕಾರಿ; ಹಿಂದಿನವಾರ(₹); ಈವಾರ(₹)</p>.<p>ಈರುಳ್ಳಿ; 60; 100</p>.<p>ಬೆಳ್ಳುಳ್ಳಿ; 160; 200</p>.<p>ಟೊಮೆಟೊ; 25; 20</p>.<p>ಎಲೆಕೋಸು; 50; 60</p>.<p>ಬೀನ್ಸ್; 60; 60</p>.<p>ಸವತೆಕಾಯಿ; 40; 30</p>.<p>ಬೆಂಡಿಕಾಯಿ; 40; 40</p>.<p>ದಪ್ಪಮೆಣಸು; 60; 60</p>.<p>ಚವಳೆಕಾಯಿ; 40; 50</p>.<p>ಬದನೆಕಾಯಿ; 40; 40</p>.<p>ಆಲೂಗಡ್ಡೆ; 25; 20</p>.<p>* ಪ್ರತಿ ಕೆಜಿ ದರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong>ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ವಹಿವಾಟಿನ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.</p>.<p>ಇದೇ ಮೊದಲಬಾರಿ ವ್ಯಾಪಾರಿಗಳು ಈರುಳ್ಳಿಯನ್ನು ಬೆಳ್ಳುಳ್ಳಿಯಂತೆ ಮಾರಾಟ ಮಾಡುತ್ತಿದ್ದಾರೆ. ಅಂಗೈಯಲ್ಲಿ ಒಂದು ಹಿಡಿಯಬಹುದಾದ ದೊಡ್ಡಗಾತ್ರದ ಈರುಳ್ಳಿ ದರ ಪ್ರತಿ ಕೆಜಿಗೆ ₹120 ಕ್ಕೆ ಏರಿಕೆಯಾಗಿದೆ. ಬಡವರು ಮತ್ತು ಕೆಳಮಧ್ಯಮವರ್ಗದವರು ಇಂತಹ ಈರುಳ್ಳಿ ಖರೀದಿಸುವುದು ಅಪರೂಪ. ಸದ್ಯ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯಷ್ಟೇ ದಪ್ಪಗಿರುವ (3ನೇ ಗುಣಮಟ್ಟದ) ಪಕಳೆಗಳು ಚದುರಿದ ಈರುಳ್ಳಿ ಪ್ರತಿ ಕೆಜಿಗೆ ₹80 ರ ದರದಲ್ಲಿ ಮಾರಾಟ ಆಗುತ್ತಿದೆ. ಮತ್ತೆ ದುಬಾರಿಯಾಗಬಹುದು ಎಂದರಿತು ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡುಬಂತು.</p>.<p>ಒಂದು ವಾರದ ಹಿಂದೆ ಬೆಳ್ಳುಳ್ಳಿ ಮತ್ತು ಈರುಳ್ಳಿ ದರಗಳ ಮಧ್ಯೆ ₹100 ವ್ಯತ್ಯಾಸ ಇತ್ತು. ಈಗ ಅಂತರ ಕಡಿಮೆಯಾಗುತ್ತಿದೆ. ಈರುಳ್ಳಿ ದರ ಸತತ ಏರಿಕೆಯಿಂದ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು ಒಂದು ಕೆಜಿ ಬೆಳ್ಳುಳ್ಳಿ ₹160 ರಿಂದ ₹200ಕ್ಕೆ ಏರಿಕೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ, ಇನ್ನುಳಿದ ತರಕಾರಿಗಳ ದರದಲ್ಲಿ ಬಹಳ ವ್ಯತ್ಯಾಸವಾಗಿಲ್ಲ. ಸ್ವಲ್ಪ ಅಗ್ಗವಾಗಿದ್ದು, ಟೊಮೆಟೊ ದರ ಕುಸಿತವಾಗುತ್ತಿದೆ.</p>.<p>ಹಸಿಮೆಣಸಿನಕಾಯಿ, ಟೊಮೆಟೊ, ಆಲೂಗಡ್ಡೆ, ಎಲೆಕೋಸು, ಬದನೆಕಾಯಿ, ಸವತೆಕಾಯಿ ಅಗ್ಗದ ತರಕಾರಿಗಳು. ಖಾನಾವಳಿಗೆ ಸಗಟು ರೂಪದಲ್ಲಿ ಇವುಗಳ ಖರೀದಿ ಯತೇಚ್ಛವಾಗಿದೆ. ಆಲೂಗಡ್ಡೆ ಮತ್ತು ಹೂಕೋಸು ಹೊರಜಿಲ್ಲೆಗಳಿಂದ ಬರುತ್ತಿದೆ. ಇನ್ನುಳಿದ ಸೊಪ್ಪು ಮತ್ತು ತರಕಾರಿಗಳು ಬಹುತೇಕ ರಾಯಚೂರು ಜಿಲ್ಲೆಯ ರೈತರು ಬೆಳೆದಿದ್ದಾರೆ. ಬೀನ್ಸ್, ಗಜ್ಜರಿ, ಹೂಕೋಸು, ಬೆಳ್ಳುಳ್ಳಿ ಬೆಳಗಾವಿಯಿಂದ ಬರುತ್ತಿವೆ.</p>.<p>ತಂಪು ಹವಾಮಾನ ಇರುವುದರಿಂದ ರೈತರು ಸೊಪ್ಪುಗಳನ್ನು ಸಾಕಷ್ಟು ಬೆಳೆದಿದ್ದು, ಪಾಲಕ್, ಸಬ್ಬಕ್ಕಿ, ಕೊತಂಬರಿ, ಸಪ್ಪನ ಪಲ್ಲೆ, ಮೇಂತೆ ಎಲ್ಲವೂ ಸಾಮಾನ್ಯ ದರದಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಅಪರೂಪವಾಗಿದೆ. ಒಂದು ದಂಟಿಗೆ ₹10 ದರದಲ್ಲಿ ಸಿಗುತ್ತಿದೆ.</p>.<p>ರಾಯಚೂರು ಉಸ್ಮಾನಿಯಾ ತರಕಾರಿ ಮಾರುಕಟ್ಟೆ</p>.<p>ತರಕಾರಿ; ಹಿಂದಿನವಾರ(₹); ಈವಾರ(₹)</p>.<p>ಈರುಳ್ಳಿ; 60; 100</p>.<p>ಬೆಳ್ಳುಳ್ಳಿ; 160; 200</p>.<p>ಟೊಮೆಟೊ; 25; 20</p>.<p>ಎಲೆಕೋಸು; 50; 60</p>.<p>ಬೀನ್ಸ್; 60; 60</p>.<p>ಸವತೆಕಾಯಿ; 40; 30</p>.<p>ಬೆಂಡಿಕಾಯಿ; 40; 40</p>.<p>ದಪ್ಪಮೆಣಸು; 60; 60</p>.<p>ಚವಳೆಕಾಯಿ; 40; 50</p>.<p>ಬದನೆಕಾಯಿ; 40; 40</p>.<p>ಆಲೂಗಡ್ಡೆ; 25; 20</p>.<p>* ಪ್ರತಿ ಕೆಜಿ ದರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>