<p><strong>ಜಾಲಹಳ್ಳಿ (ರಾಯಚೂರು ಜಿಲ್ಲೆ):</strong> ದೇವದುರ್ಗ ತಾಲ್ಲೂಕಿನ ಬೋಮನಗುಂಡ ಗ್ರಾಮ ವ್ಯಾಪ್ತಿಯ ಕಾಲಂಗೇರ ದೊಡ್ಡಿ ವ್ಯಕ್ತಿಯನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ.</p><p>ಕಾಲಂಗೇರ ದೊಡ್ಡಿಯ ಬಸವರಾಜ ತಿಮ್ಮಯ್ಯ (35) ಕೊಲೆಯಾದವರು. ಭಾನುವಾರ ರಾತ್ರಿ ತಿಮ್ಮಯ್ಯ ಹಾಗೂ ಸಂಬಂಧಿಕರ ಮಧ್ಯೆ ಜಗಳ ಆರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಬಡಿದಾಡಿದ್ದಾರೆ. ಬಸವರಾಜ ತಿಮ್ಮಯ್ಯ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ್ದಾರೆ..</p><p>ಬಸವರಾಜ ತಿಮ್ಮಯ್ಯ ಅವರದ್ದು ಅವಿಭಕ್ತ ಕುಟುಂಬ. ಕೆಲ ವರ್ಷಗಳ ಹಿಂದೆ ಕುಟುಂಬದ ಸದಸ್ಯರು 3 ಎಕರೆ ಜಮೀನು ಖರೀದಿಸಿ ಚಿಕ್ಕಪ್ಪನ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಚಿಕ್ಕಪ್ಪ ಸಾವಿಗೀಡಾದ ನಂತರ ಅವರ ಪತ್ನಿಯ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ. ಬಸವರಾಜ ಅವರೇ ಜಮೀನು ಉಳುಮೆ ಮಾಡುತ್ತಿದ್ದರು. ಜಮೀನು ವಿಷಯವಾಗಿಯೇ ಎರಡು ಕುಟುಂಬಗಳ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು. </p><p>ಬಸವರಾಜ ಅವರು ಭಾನುವಾರ ರಾತ್ರಿ ಬೋಮನಗುಂಡ ಗ್ರಾಮದಿಂದ ಕಾಲಂಗೇರ ದೊಡ್ಡಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸೋದರ ಸಂಬಂಧಿಗಳೇ ಜಗಳ ತೆಗೆದು ಹಲ್ಲೆ ಮಾಡಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಬಸವರಾಜ ಅವರ ಸಂಬಂಧಿಕರು ದೂರಿದ್ದಾರೆ.</p><p>ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಲಹಳ್ಳಿ (ರಾಯಚೂರು ಜಿಲ್ಲೆ):</strong> ದೇವದುರ್ಗ ತಾಲ್ಲೂಕಿನ ಬೋಮನಗುಂಡ ಗ್ರಾಮ ವ್ಯಾಪ್ತಿಯ ಕಾಲಂಗೇರ ದೊಡ್ಡಿ ವ್ಯಕ್ತಿಯನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ.</p><p>ಕಾಲಂಗೇರ ದೊಡ್ಡಿಯ ಬಸವರಾಜ ತಿಮ್ಮಯ್ಯ (35) ಕೊಲೆಯಾದವರು. ಭಾನುವಾರ ರಾತ್ರಿ ತಿಮ್ಮಯ್ಯ ಹಾಗೂ ಸಂಬಂಧಿಕರ ಮಧ್ಯೆ ಜಗಳ ಆರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಬಡಿದಾಡಿದ್ದಾರೆ. ಬಸವರಾಜ ತಿಮ್ಮಯ್ಯ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ್ದಾರೆ..</p><p>ಬಸವರಾಜ ತಿಮ್ಮಯ್ಯ ಅವರದ್ದು ಅವಿಭಕ್ತ ಕುಟುಂಬ. ಕೆಲ ವರ್ಷಗಳ ಹಿಂದೆ ಕುಟುಂಬದ ಸದಸ್ಯರು 3 ಎಕರೆ ಜಮೀನು ಖರೀದಿಸಿ ಚಿಕ್ಕಪ್ಪನ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಚಿಕ್ಕಪ್ಪ ಸಾವಿಗೀಡಾದ ನಂತರ ಅವರ ಪತ್ನಿಯ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ. ಬಸವರಾಜ ಅವರೇ ಜಮೀನು ಉಳುಮೆ ಮಾಡುತ್ತಿದ್ದರು. ಜಮೀನು ವಿಷಯವಾಗಿಯೇ ಎರಡು ಕುಟುಂಬಗಳ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು. </p><p>ಬಸವರಾಜ ಅವರು ಭಾನುವಾರ ರಾತ್ರಿ ಬೋಮನಗುಂಡ ಗ್ರಾಮದಿಂದ ಕಾಲಂಗೇರ ದೊಡ್ಡಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸೋದರ ಸಂಬಂಧಿಗಳೇ ಜಗಳ ತೆಗೆದು ಹಲ್ಲೆ ಮಾಡಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಬಸವರಾಜ ಅವರ ಸಂಬಂಧಿಕರು ದೂರಿದ್ದಾರೆ.</p><p>ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>