<p><strong>ರಾಯಚೂರು:</strong> ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ನಿರ್ದೇಶನದಂತೆ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಗಣೇಶ ವಿಸರ್ಜನೆ ಮಾಡುವ ಖಾಸಬಾವಿಯಲ್ಲಿ ಹೂಳು ತೆಗೆಯುವ ಕಾರ್ಯವೂ ಆರಂಭವಾಗಿದೆ.</p>.<p>60 ಅಡಿ ಆಳದಲ್ಲಿನ ಹೂಳು ತೆಗೆಯಬಹುದಾದ ಯಂತ್ರಹೊಂದಿದ ಹಿಟಾಚಿಯಿಂದ ಬಾವಿ ಸ್ವಚ್ಛಗೊಳಿಸಲಾಯಿತು.</p>.<p>ಆಯುಕ್ತ ಜುಬಿನ್ ಅವರು, ಕೆಲ ಕಡೆ ಭೇಟಿ ನೀಡಿ ಯಂತ್ರಗಳಿಂದ ನಡೆದ ಶುಚಿತ್ವ ಕಾರ್ಯವನ್ನು ಖುದ್ದು ಪರಿಶೀಲಿಸಿದರು. ನಗರದ ಎಲ್ಲ ಜಲ ಮೂಲಗಳನ್ನು ಸಂರಕ್ಷಿಸಬೇಕು. ಕೆರೆ, ಕಟ್ಟೆ, ಬಾವಿ, ಗಟಾರಗಳನ್ನು ಪ್ಲಾಸ್ಟಿಕ್ ಮತ್ತು ಹೂಳು ಮುಕ್ತವಾಗಿಸಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ ಎಂದರು.</p>.<p>ನಗರದ ಸೌಂದರ್ಯೀಕರಣಕ್ಕೆ ಮಹಾನಗರಪಾಲಿಕೆ ಎಲ್ಲ ಬಗೆಯ ಪ್ರಯತ್ನ ಮುಂದುವರಿಸಿದೆ. ಪಾಲಿಕೆಯ ಎಂಜಿನಿಯರ್ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತಿನಿಂದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.<br> ಉಪ ಆಯುಕ್ತೆ ಸಂತೋಷ ರಾಣಿ ಹಾಗೂ ಇನ್ನೀತರ ಅಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ನಿರ್ದೇಶನದಂತೆ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಗಣೇಶ ವಿಸರ್ಜನೆ ಮಾಡುವ ಖಾಸಬಾವಿಯಲ್ಲಿ ಹೂಳು ತೆಗೆಯುವ ಕಾರ್ಯವೂ ಆರಂಭವಾಗಿದೆ.</p>.<p>60 ಅಡಿ ಆಳದಲ್ಲಿನ ಹೂಳು ತೆಗೆಯಬಹುದಾದ ಯಂತ್ರಹೊಂದಿದ ಹಿಟಾಚಿಯಿಂದ ಬಾವಿ ಸ್ವಚ್ಛಗೊಳಿಸಲಾಯಿತು.</p>.<p>ಆಯುಕ್ತ ಜುಬಿನ್ ಅವರು, ಕೆಲ ಕಡೆ ಭೇಟಿ ನೀಡಿ ಯಂತ್ರಗಳಿಂದ ನಡೆದ ಶುಚಿತ್ವ ಕಾರ್ಯವನ್ನು ಖುದ್ದು ಪರಿಶೀಲಿಸಿದರು. ನಗರದ ಎಲ್ಲ ಜಲ ಮೂಲಗಳನ್ನು ಸಂರಕ್ಷಿಸಬೇಕು. ಕೆರೆ, ಕಟ್ಟೆ, ಬಾವಿ, ಗಟಾರಗಳನ್ನು ಪ್ಲಾಸ್ಟಿಕ್ ಮತ್ತು ಹೂಳು ಮುಕ್ತವಾಗಿಸಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ ಎಂದರು.</p>.<p>ನಗರದ ಸೌಂದರ್ಯೀಕರಣಕ್ಕೆ ಮಹಾನಗರಪಾಲಿಕೆ ಎಲ್ಲ ಬಗೆಯ ಪ್ರಯತ್ನ ಮುಂದುವರಿಸಿದೆ. ಪಾಲಿಕೆಯ ಎಂಜಿನಿಯರ್ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತಿನಿಂದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.<br> ಉಪ ಆಯುಕ್ತೆ ಸಂತೋಷ ರಾಣಿ ಹಾಗೂ ಇನ್ನೀತರ ಅಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>