<p><strong>ಕವಿತಾಳ</strong>: ಸಾರ್ವಜನಿಕರ ಅನುಕೂಲಕ್ಕಾಗಿ ಹಳ್ಳಿಗಳಲ್ಲಿ ನಿರ್ಮಿಸಿದ ಬಹುತೇಕ ಬಸ್ ಶೆಲ್ಟರ್ಗಳು ಕಿಡಿಗೇಡಿಗಳ ಕೈ ಚಳಕಕ್ಕೆ ಬಲಿಯಾಗಿ ವಿರೂಪಗೊಂಡಿವೆ. ಪ್ರಯಾಣಿಕರು, ವಾಹನ ಸವಾರರು ಮಳೆ, ಗಾಳಿಯಿಂದ ಆಶ್ರಯ ಪಡೆಯಲು ಪರದಾಡುವಂತಾಗಿದೆ.</p>.<p>ಶಾಸಕರು, ಸಂಸದರ ಅನುದಾನಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಆಕರ್ಷಕ ಶೆಲ್ಟರ್ಗಳು ಕೆಲ ವರ್ಷಗಳಲ್ಲೇ ಅಂದ ಕಳೆದುಕೊಂಡಿವೆ. ಎಲ್ಇಡಿ ವಾಲ್ಗಳು, ಆಸನ, ನೆಲಹಾಸು, ಸ್ಟೇನ್ ಲೆಸ್ ಸ್ಟೀಲ್ ಗ್ರಿಲ್ಸ್ಗಳನ್ನು ಕಿತ್ತು ಹಾಕಿರುವುದು ಕಂಡು ಬರುತ್ತದೆ.</p>.<p>ಸಮೀಪದ ಪಾಮನಕಲ್ಲೂರು ಸರ್ಕಾರಿ ಆಸ್ಪತ್ರೆ ಎದುರು ನಿರ್ಮಿಸಿದ ಶೆಲ್ಟರ್ ಬಹುತೇಕ ಹಾನಿಗೊಂಡಿದೆ, ಒಳಗೆ, ಎರಡೂ ಬದಿಯಲ್ಲಿಅಳವಡಿಸಿದ ಎಲ್ ಇ ಡಿ ವಾಲ್ ಗಳು ಮುರಿದಿವೆ. ಆಸನಗಳು ಮಾಯವಾಗಿವೆ, ಕಬ್ಬಿಣದ ಸರಳುಗಳನ್ನು ಹಾಳು ಮಾಡಲಾಗಿದೆ, ಸುತ್ತಲೂ ಗಿಡ, ಮರಗಳು ಬೆಳೆದು ಒಳ ನುಗ್ಗಿವೆ, ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ವಾಹನ ಸವಾರರು ಅದರಲ್ಲಿ ಹೋಗಿ ನಿಂತರೆ ರಕ್ಷಣೆ ಇಲ್ಲದಂತಾಗಿದೆ.</p>.<p>ವಟಗಲ್, ಬಸಾಪುರ ಮತ್ತು ಚಿಲ್ಕರಾಗಿ ಗ್ರಾಮದಲ್ಲಿ ನಿರ್ಮಿಸಿದ ಶೆಲ್ಟರ್ ಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಊರಿಗೆ ಹತ್ತಿರದಲ್ಲಿರುವ ಕಾರಣ ಅಮೀನಗಡದಲ್ಲಿ ಶೆಲ್ಟರ್ ಸುಸ್ಥಿಯಲ್ಲಿದೆ.</p>.<p>‘ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ಹಣದಲ್ಲಿ ನಿರ್ಮಿಸಿದ ಶೆಲ್ಟರ್ ರಕ್ಷಣೆಗೆ ಸ್ಥಳೀಯರು, ಸ್ಥಳೀಯ ಆಡಳಿತ, ಸಂಘ, ಸಂಸ್ಥೆಗಳು ಕಾಳಜಿ ವಹಿಸಬೇಕು, ಶೆಲ್ಟರ್ಗಳನ್ನು ಕಿತ್ತು ಹಾಳು ಮಾಡುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಂಡಲ್ಲಿ ಅಂತವರಲ್ಲಿ ಭಯ ಮೂಡುತ್ತದೆ, ಈ ಬಗ್ಗೆ ಅಧಿಕಾರಿಗಳೂ ನಿಗಾ ವಹಿಸಬೇಕು’ ಎಂದು ಕರವೇ ಮುಖಂಡ ವೆಂಕಟೇಶ ಶಂಕ್ರಿ ಹೇಳಿದರು.</p>.<div><blockquote>ಶೆಲ್ಟರ್ಗಳಲ್ಲಿದ್ದ ಶಾಸಕ ಸಂಸದರ ಭಾವಚಿತ್ರದ ಎಲ್ಇಡಿ ಫ್ರೇಮ್ಗಳನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಮತ್ತೆ ಅಳವಡಿಸುವ ಬಗ್ಗೆ ಅಧಿಕಾರಿಗಳು ಕಾಳಜಿ ತೋರಿಲ್ಲ </blockquote><span class="attribution"> ರಮೇಶ ಗಂಟ್ಲಿ ಪಾಮನಕಲ್ಲೂರು ಕರವೇ ಹೋಬಳಿ ಘಟಕದ ಅಧ್ಯಕ್ಷ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ಸಾರ್ವಜನಿಕರ ಅನುಕೂಲಕ್ಕಾಗಿ ಹಳ್ಳಿಗಳಲ್ಲಿ ನಿರ್ಮಿಸಿದ ಬಹುತೇಕ ಬಸ್ ಶೆಲ್ಟರ್ಗಳು ಕಿಡಿಗೇಡಿಗಳ ಕೈ ಚಳಕಕ್ಕೆ ಬಲಿಯಾಗಿ ವಿರೂಪಗೊಂಡಿವೆ. ಪ್ರಯಾಣಿಕರು, ವಾಹನ ಸವಾರರು ಮಳೆ, ಗಾಳಿಯಿಂದ ಆಶ್ರಯ ಪಡೆಯಲು ಪರದಾಡುವಂತಾಗಿದೆ.</p>.<p>ಶಾಸಕರು, ಸಂಸದರ ಅನುದಾನಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಆಕರ್ಷಕ ಶೆಲ್ಟರ್ಗಳು ಕೆಲ ವರ್ಷಗಳಲ್ಲೇ ಅಂದ ಕಳೆದುಕೊಂಡಿವೆ. ಎಲ್ಇಡಿ ವಾಲ್ಗಳು, ಆಸನ, ನೆಲಹಾಸು, ಸ್ಟೇನ್ ಲೆಸ್ ಸ್ಟೀಲ್ ಗ್ರಿಲ್ಸ್ಗಳನ್ನು ಕಿತ್ತು ಹಾಕಿರುವುದು ಕಂಡು ಬರುತ್ತದೆ.</p>.<p>ಸಮೀಪದ ಪಾಮನಕಲ್ಲೂರು ಸರ್ಕಾರಿ ಆಸ್ಪತ್ರೆ ಎದುರು ನಿರ್ಮಿಸಿದ ಶೆಲ್ಟರ್ ಬಹುತೇಕ ಹಾನಿಗೊಂಡಿದೆ, ಒಳಗೆ, ಎರಡೂ ಬದಿಯಲ್ಲಿಅಳವಡಿಸಿದ ಎಲ್ ಇ ಡಿ ವಾಲ್ ಗಳು ಮುರಿದಿವೆ. ಆಸನಗಳು ಮಾಯವಾಗಿವೆ, ಕಬ್ಬಿಣದ ಸರಳುಗಳನ್ನು ಹಾಳು ಮಾಡಲಾಗಿದೆ, ಸುತ್ತಲೂ ಗಿಡ, ಮರಗಳು ಬೆಳೆದು ಒಳ ನುಗ್ಗಿವೆ, ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ವಾಹನ ಸವಾರರು ಅದರಲ್ಲಿ ಹೋಗಿ ನಿಂತರೆ ರಕ್ಷಣೆ ಇಲ್ಲದಂತಾಗಿದೆ.</p>.<p>ವಟಗಲ್, ಬಸಾಪುರ ಮತ್ತು ಚಿಲ್ಕರಾಗಿ ಗ್ರಾಮದಲ್ಲಿ ನಿರ್ಮಿಸಿದ ಶೆಲ್ಟರ್ ಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಊರಿಗೆ ಹತ್ತಿರದಲ್ಲಿರುವ ಕಾರಣ ಅಮೀನಗಡದಲ್ಲಿ ಶೆಲ್ಟರ್ ಸುಸ್ಥಿಯಲ್ಲಿದೆ.</p>.<p>‘ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ಹಣದಲ್ಲಿ ನಿರ್ಮಿಸಿದ ಶೆಲ್ಟರ್ ರಕ್ಷಣೆಗೆ ಸ್ಥಳೀಯರು, ಸ್ಥಳೀಯ ಆಡಳಿತ, ಸಂಘ, ಸಂಸ್ಥೆಗಳು ಕಾಳಜಿ ವಹಿಸಬೇಕು, ಶೆಲ್ಟರ್ಗಳನ್ನು ಕಿತ್ತು ಹಾಳು ಮಾಡುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಂಡಲ್ಲಿ ಅಂತವರಲ್ಲಿ ಭಯ ಮೂಡುತ್ತದೆ, ಈ ಬಗ್ಗೆ ಅಧಿಕಾರಿಗಳೂ ನಿಗಾ ವಹಿಸಬೇಕು’ ಎಂದು ಕರವೇ ಮುಖಂಡ ವೆಂಕಟೇಶ ಶಂಕ್ರಿ ಹೇಳಿದರು.</p>.<div><blockquote>ಶೆಲ್ಟರ್ಗಳಲ್ಲಿದ್ದ ಶಾಸಕ ಸಂಸದರ ಭಾವಚಿತ್ರದ ಎಲ್ಇಡಿ ಫ್ರೇಮ್ಗಳನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಮತ್ತೆ ಅಳವಡಿಸುವ ಬಗ್ಗೆ ಅಧಿಕಾರಿಗಳು ಕಾಳಜಿ ತೋರಿಲ್ಲ </blockquote><span class="attribution"> ರಮೇಶ ಗಂಟ್ಲಿ ಪಾಮನಕಲ್ಲೂರು ಕರವೇ ಹೋಬಳಿ ಘಟಕದ ಅಧ್ಯಕ್ಷ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>