ಜನರು ಪುಣ್ಯಸ್ನಾನಕ್ಕಾಗಿ ರಾಜಲಬಂಡಾ ಅಣೆಕಟ್ಟು, ಚೀಕಲಪರ್ವಿ ಮತ್ತಿತರ ನದಿಪಾತ್ರದ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯ ಭರ್ತಿಯಾಗದ ಕಾರಣ ನದಿಯಲ್ಲಿ ನೀರು ಹರಿಯುತ್ತಿಲ್ಲ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ರಾಜಲಬಂಡಾ ಅಣೆಕಟ್ಟು ನೀರಿಲ್ಲದೆ ಭಣಗುಡುತ್ತಿದೆ.