<p><strong>ಹಟ್ಟಿ ಚಿನ್ನದ ಗಣಿ:</strong> ಸ್ಧಳೀಯ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಚುನಾವಣೆ ಜೂ.21ಕ್ಕೆ ನಿಗದಿಯಾಗಿದ್ದು, ಈ ಚುನಾವಣೆಗೆ ಗಣಿ ಕಂಪನಿ ಪರವಾಗಿರುವ ಪೆನಲ್ಗಳೇ ನಮ್ಮ ಎದುರಾಳಿಗಳಾಗಿವೆ. ಅವುಗಳನ್ನು ಎದುರಿಸಲು ಟಿಯುಸಿಐ ಸಂಘಟನೆ ಸಂಪೂರ್ಣ ಸಜ್ಜಾಗಿದೆ’ ಎಂದು ಟಿಯುಸಿಐ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.</p>.<p>ಪಟ್ಟಣದ ಪೈ ಭವನದಲ್ಲಿ ಶನಿವಾರ ಟಿಯುಸಿಐ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಗಣಿ ಆಡಳಿತ ವರ್ಗದ ಪರವಾಗಿರುವ ಪೆನಲ್ಗಳೇ ಚುನಾವಣೆಯ ಕಣಕ್ಕೆ ಬರಲಿವೆ. ಕಾರ್ಮಿಕರು ಅವುಗಳಿಗೆ ತಕ್ಕ ಉತ್ತರ ನೀಡಲು ತಯಾರಾಗಿದ್ದಾರೆ. ನಾವು ಭ್ರಷ್ಟರಲ್ಲ, ಜಾತಿವಾದಿಗಳಲ್ಲ, ಗುತ್ತಿಗೆದಾರರಲ್ಲ ಹೀಗಾಗಿ ಅಂಥವರಿಗೆ ನಮ್ಮಲ್ಲಿ ಜಾಗವಿಲ್ಲ’ ಎಂದರು.</p>.<p>‘ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಸರತ್ತು ನಡೆಸಿದ್ದು, ಅವರ ಆಸೆ ಆಮೀಷಗಳಿಗೆ ಕಾರ್ಮಿಕರು ಬಲಿಯಾಗಬಾರದು’ ಎಂದು ಹೇಳಿದರು.</p>.<p>ಟಿಯುಸಿಐ ರಾಜ್ಯ ಘಟಕದ ಅಧ್ಯಕ್ಷ ಮಹ್ಮದ ಅಮೀರ ಅಲಿ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದರೆ ಮೆಡಿಕಲ್ ಅನ್ಫಿಟ್ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತೇವೆ. ಗುತ್ತಿಗೆ ಪದ್ಧತಿಯನ್ನು ತೊಲಗಿಸಿ, ಕಾಯಂ ಸ್ವರೂಪದ ಕೆಲಸಗಳನ್ನು ಪಡೆಯಬೇಕಾದರೆ ಹೋರಾಟವೊಂದೇ ದಾರಿ’ ಎಂದು ಹೇಳಿದರು.</p>.<p>‘ಮಾಹಿತಿ ಹಕ್ಕಿನಲ್ಲಿ ಸಂಬಳ ಹಂಚಿಕೆ ಬಗ್ಗೆ ಅರ್ಜಿ ಹಾಕಿದರೂ ಆಡಳಿತ ವರ್ಗ ಇದುವರೆಗೂ ಉತ್ತರ ಕೊಡದೆ ಕಾಲಹರಣ ಮಾಡುತ್ತಿದೆ. ಇವೆಲ್ಲ ವಿಷಯಗಳನ್ನು ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡುತ್ತೇವೆ’ ಎಂದು ಹೇಳಿದರು.</p>.<p>ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ, ಸ್ಥಳೀಯ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಡಿ.ಕೆ. ಲಿಂಗಸುಗೂರು ಉಪಸ್ಧಿತರಿದ್ದರು. ನಾಗಭೂಷಣ ಪಾಟೀಲ, ಮಹಿಬೂಬ್ ಬೈಚ್ಬಾಳ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಸ್ಧಳೀಯ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಚುನಾವಣೆ ಜೂ.21ಕ್ಕೆ ನಿಗದಿಯಾಗಿದ್ದು, ಈ ಚುನಾವಣೆಗೆ ಗಣಿ ಕಂಪನಿ ಪರವಾಗಿರುವ ಪೆನಲ್ಗಳೇ ನಮ್ಮ ಎದುರಾಳಿಗಳಾಗಿವೆ. ಅವುಗಳನ್ನು ಎದುರಿಸಲು ಟಿಯುಸಿಐ ಸಂಘಟನೆ ಸಂಪೂರ್ಣ ಸಜ್ಜಾಗಿದೆ’ ಎಂದು ಟಿಯುಸಿಐ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.</p>.<p>ಪಟ್ಟಣದ ಪೈ ಭವನದಲ್ಲಿ ಶನಿವಾರ ಟಿಯುಸಿಐ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಗಣಿ ಆಡಳಿತ ವರ್ಗದ ಪರವಾಗಿರುವ ಪೆನಲ್ಗಳೇ ಚುನಾವಣೆಯ ಕಣಕ್ಕೆ ಬರಲಿವೆ. ಕಾರ್ಮಿಕರು ಅವುಗಳಿಗೆ ತಕ್ಕ ಉತ್ತರ ನೀಡಲು ತಯಾರಾಗಿದ್ದಾರೆ. ನಾವು ಭ್ರಷ್ಟರಲ್ಲ, ಜಾತಿವಾದಿಗಳಲ್ಲ, ಗುತ್ತಿಗೆದಾರರಲ್ಲ ಹೀಗಾಗಿ ಅಂಥವರಿಗೆ ನಮ್ಮಲ್ಲಿ ಜಾಗವಿಲ್ಲ’ ಎಂದರು.</p>.<p>‘ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಸರತ್ತು ನಡೆಸಿದ್ದು, ಅವರ ಆಸೆ ಆಮೀಷಗಳಿಗೆ ಕಾರ್ಮಿಕರು ಬಲಿಯಾಗಬಾರದು’ ಎಂದು ಹೇಳಿದರು.</p>.<p>ಟಿಯುಸಿಐ ರಾಜ್ಯ ಘಟಕದ ಅಧ್ಯಕ್ಷ ಮಹ್ಮದ ಅಮೀರ ಅಲಿ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದರೆ ಮೆಡಿಕಲ್ ಅನ್ಫಿಟ್ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತೇವೆ. ಗುತ್ತಿಗೆ ಪದ್ಧತಿಯನ್ನು ತೊಲಗಿಸಿ, ಕಾಯಂ ಸ್ವರೂಪದ ಕೆಲಸಗಳನ್ನು ಪಡೆಯಬೇಕಾದರೆ ಹೋರಾಟವೊಂದೇ ದಾರಿ’ ಎಂದು ಹೇಳಿದರು.</p>.<p>‘ಮಾಹಿತಿ ಹಕ್ಕಿನಲ್ಲಿ ಸಂಬಳ ಹಂಚಿಕೆ ಬಗ್ಗೆ ಅರ್ಜಿ ಹಾಕಿದರೂ ಆಡಳಿತ ವರ್ಗ ಇದುವರೆಗೂ ಉತ್ತರ ಕೊಡದೆ ಕಾಲಹರಣ ಮಾಡುತ್ತಿದೆ. ಇವೆಲ್ಲ ವಿಷಯಗಳನ್ನು ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡುತ್ತೇವೆ’ ಎಂದು ಹೇಳಿದರು.</p>.<p>ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ, ಸ್ಥಳೀಯ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಡಿ.ಕೆ. ಲಿಂಗಸುಗೂರು ಉಪಸ್ಧಿತರಿದ್ದರು. ನಾಗಭೂಷಣ ಪಾಟೀಲ, ಮಹಿಬೂಬ್ ಬೈಚ್ಬಾಳ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>