ಬಿತ್ತನೆ ಮಾಡಿದ ಒಂದು ತಿಂಗಳಲ್ಲಿ ಕಳೆ ತೆಗೆದುಹಾಕುವುದು ಸುಲಭ. ಆದರೆ ಈ ವರ್ಷ ಬಿಟ್ಟುಬಿಡದೆ ಮಳೆ ಬೀಳುತ್ತಿದೆ. ಭೂಮಿಯಲ್ಲಿ ಹಸಿ ಕಾಯಂ ಉಳಿದುಕೊಂಡಿದ್ದು, ಕಳೆ ಕಿತ್ತಲು ಆಗುತ್ತಿಲ್ಲ. ಮಳೆ ಬಿಡುವು ನೀಡಿದಾಗ ಸರಿಯಾದ ಸಮಯಕ್ಕೆ ಕೃಷಿ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಇಂಥ ಇಕ್ಕಟ್ಟಿನಿಂದ ಬೇಸತ್ತಿದ್ದ ರಾಯಚೂರು ತಾಲ್ಲೂಕಿನ ಹುಣಸಿಹಾಳಹುಡಾ ಗ್ರಾಮದ ರೈತರೊಬ್ಬರು ಐದು ಎಕರೆಯಲ್ಲಿ ಬೆಳೆದಿದ್ದ ಹತ್ತಿಯನ್ನು ಕಳೆ ಸಹಿತ ಕಿತ್ತುಹಾಕಿದ್ದಾರೆ.