<p>ಮಾನ್ವಿ: ನೆರೆಹಾವಳಿ ಸಂಭವಿಸಿ ಎರಡು ವರ್ಷಗಳು ಗತಿಸಿದರೂ ಸರ್ಕಾರ ನೆರೆಸಂತ್ರಸ್ತರಿಗೆ ಪೂರ್ಣಪ್ರಮಾಣದ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ತಾಲ್ಲೂಕಿನ ಕಾತರಕಿ ಗ್ರಾಮದ `ಪುನರ್ವಸತಿ ಗ್ರಾಮ~ದ ಮನೆಗಳು ಸಾಕ್ಷಿಯಾಗಿವೆ. ಶಾಶ್ವತ ನೆರೆಪೀಡಿತ ಕಾತರಕಿ ಗ್ರಾಮದಲ್ಲಿ 2009ರ ನೆರೆಹಾವಳಿ ನಂತರ ರಾಜ್ಯ ಸರ್ಕಾರ ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಸಂತ್ರಸ್ತರ ಪುನರ್ವಸತಿಗಾಗಿ `ಆಸರೆ~ ಯೋಜನೆ ಅಡಿಯಲ್ಲಿ 356 ಮನೆಗಳನ್ನು ನಿರ್ಮಿಸಲಾಗಿದೆ.<br /> <br /> ಈ `ಆಸರೆ~ ಮನೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸುವಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ `ನಿರ್ಮಿತಿ ಕೇಂದ್ರ~ದ ಗುಣಮಟ್ಟದ ಕುರಿತು ಈ ಕಾಲೊನಿಯ ಮನೆಗಳನ್ನು ಒಮ್ಮೆ ವೀಕ್ಷಿಸಿದರೆ ಬಹಿರಂಗವಾಗಿ ಗೋಚರವಾಗುತ್ತದೆ.<br /> <br /> ಸಂತ್ರಸ್ತರಿಗೆ ಹಸ್ತಾಂತರವಾಗುವ ಮುನ್ನವೇ ಇಲ್ಲಿನ ಕೆಲವು ಮನೆಗಳು ಬಿರುಕು ಬಿಡುವ ಮೂಲಕ ದುಸ್ಥಿತಿ ತಲುಪಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಸಂತ್ರಸ್ತರು ಪ್ರಶ್ನಿಸುವಂತಾಗಿದೆ. ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಶೌಚಾಲಯಗಳ ನಿರ್ಮಾಣ ಇನ್ನೂ ಪ್ರಗತಿಯಲ್ಲಿರುವುದು ಆಮೆಗತಿಯ ಕಾಮಗಾರಿಗೆ ಸಾಕ್ಷಿಯಾಗಿದೆ.<br /> <br /> <strong>ಮೂಲಸೌಲಭ್ಯ:</strong> ಈ ಪುನರ್ವಸತಿ ಕಾಲೊನಿಗೆ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ 92.35 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಹಾಗೂ ಸಿಡಿ ನಿರ್ಮಾಣ ಮತ್ತಿತರ ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನೂ ಸುಮಾರು 18 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ಈ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಮೂಲಗಳು ತಿಳಿಸಿವೆ. <br /> <br /> ಒಳರಸ್ತೆ ಬದಿಯಲ್ಲಿ ನಿರ್ಮಿಸಲಾದ ಚರಂಡಿಯ ಬಂಡೆಗಳು ಅನೇಕ ಕಡೆ ಒಡೆದು ಚೆಲ್ಲಾಪಿಲ್ಲಿಯಾಗಿವೆ. ಕೆಲವು ಕಡೆ ಚರಂಡಿಗೆ ಅಳವಡಿಸಲಾದ ಬಂಡೆಗಳನ್ನು ಕದ್ದೊಯ್ಯಲಾಗಿದೆ. `ಆಸರೆ~ ಮನೆಗಳ ಹಸ್ತಾಂತರದಲ್ಲಿನ ವಿಳಂಬವೂ ಕೂಡ ಇಲ್ಲಿ ನಿರ್ಮಾಣಗೊಂಡ ರಸ್ತೆ ಹಾಗೂ ಚರಂಡಿಗಳು ಹಾಳಾಗಲು ಕಾರಣವಾಗಿದೆ. <br /> <br /> ಇಷ್ಟೆಲ್ಲಾ ಅವಾಂತರಗಳಿದ್ದರೂ ಕಳೆದ ನವೆಂಬರ್ 2ರಂದು ಮನೆಗಳನ್ನು ಹಸ್ತಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಅಪೂರ್ಣಗೊಂಡಿರುವ ಮನೆಗಳ ಹಸ್ತಾಂತರಕ್ಕೆ ಸ್ಥಳೀಯ ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿ ಕೇವಲ ದದ್ದಲ ಗ್ರಾಮದ `ಆಸರೆ~ ಮನೆಗಳನ್ನು ಮಾತ್ರ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿತ್ತು. <br /> <br /> <strong>ಒತ್ತಾಯ:</strong> ಕಾತರಕಿ ಗ್ರಾಮದಲ್ಲಿ ಮನೆಗಳ ನಿರ್ಮಾಣ ಪ್ರಕ್ರಿಯೆ ಆರಂಭವಾಗಿ ಎರಡು ವರ್ಷ ಗತಿಸಿದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಯದಿರುವುದು ಸಂತ್ರಸ್ತರಲ್ಲಿ ನಿರಾಸೆಗೆ ಕಾರಣವಾಗಿದೆ. ಕಾತರಕಿ ಗ್ರಾಮದ `ಆಸರೆ~ ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಬೇಕು. ಬಿರುಕು ಬಿಟ್ಟ ಕೆಲವು ಮನೆಗಳನ್ನು ದುರಸ್ತಿಗೊಳಿಸಬೇಕು. ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾನ್ವಿ: ನೆರೆಹಾವಳಿ ಸಂಭವಿಸಿ ಎರಡು ವರ್ಷಗಳು ಗತಿಸಿದರೂ ಸರ್ಕಾರ ನೆರೆಸಂತ್ರಸ್ತರಿಗೆ ಪೂರ್ಣಪ್ರಮಾಣದ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ತಾಲ್ಲೂಕಿನ ಕಾತರಕಿ ಗ್ರಾಮದ `ಪುನರ್ವಸತಿ ಗ್ರಾಮ~ದ ಮನೆಗಳು ಸಾಕ್ಷಿಯಾಗಿವೆ. ಶಾಶ್ವತ ನೆರೆಪೀಡಿತ ಕಾತರಕಿ ಗ್ರಾಮದಲ್ಲಿ 2009ರ ನೆರೆಹಾವಳಿ ನಂತರ ರಾಜ್ಯ ಸರ್ಕಾರ ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಸಂತ್ರಸ್ತರ ಪುನರ್ವಸತಿಗಾಗಿ `ಆಸರೆ~ ಯೋಜನೆ ಅಡಿಯಲ್ಲಿ 356 ಮನೆಗಳನ್ನು ನಿರ್ಮಿಸಲಾಗಿದೆ.<br /> <br /> ಈ `ಆಸರೆ~ ಮನೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸುವಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ `ನಿರ್ಮಿತಿ ಕೇಂದ್ರ~ದ ಗುಣಮಟ್ಟದ ಕುರಿತು ಈ ಕಾಲೊನಿಯ ಮನೆಗಳನ್ನು ಒಮ್ಮೆ ವೀಕ್ಷಿಸಿದರೆ ಬಹಿರಂಗವಾಗಿ ಗೋಚರವಾಗುತ್ತದೆ.<br /> <br /> ಸಂತ್ರಸ್ತರಿಗೆ ಹಸ್ತಾಂತರವಾಗುವ ಮುನ್ನವೇ ಇಲ್ಲಿನ ಕೆಲವು ಮನೆಗಳು ಬಿರುಕು ಬಿಡುವ ಮೂಲಕ ದುಸ್ಥಿತಿ ತಲುಪಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಸಂತ್ರಸ್ತರು ಪ್ರಶ್ನಿಸುವಂತಾಗಿದೆ. ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಶೌಚಾಲಯಗಳ ನಿರ್ಮಾಣ ಇನ್ನೂ ಪ್ರಗತಿಯಲ್ಲಿರುವುದು ಆಮೆಗತಿಯ ಕಾಮಗಾರಿಗೆ ಸಾಕ್ಷಿಯಾಗಿದೆ.<br /> <br /> <strong>ಮೂಲಸೌಲಭ್ಯ:</strong> ಈ ಪುನರ್ವಸತಿ ಕಾಲೊನಿಗೆ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ 92.35 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಹಾಗೂ ಸಿಡಿ ನಿರ್ಮಾಣ ಮತ್ತಿತರ ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನೂ ಸುಮಾರು 18 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ಈ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಮೂಲಗಳು ತಿಳಿಸಿವೆ. <br /> <br /> ಒಳರಸ್ತೆ ಬದಿಯಲ್ಲಿ ನಿರ್ಮಿಸಲಾದ ಚರಂಡಿಯ ಬಂಡೆಗಳು ಅನೇಕ ಕಡೆ ಒಡೆದು ಚೆಲ್ಲಾಪಿಲ್ಲಿಯಾಗಿವೆ. ಕೆಲವು ಕಡೆ ಚರಂಡಿಗೆ ಅಳವಡಿಸಲಾದ ಬಂಡೆಗಳನ್ನು ಕದ್ದೊಯ್ಯಲಾಗಿದೆ. `ಆಸರೆ~ ಮನೆಗಳ ಹಸ್ತಾಂತರದಲ್ಲಿನ ವಿಳಂಬವೂ ಕೂಡ ಇಲ್ಲಿ ನಿರ್ಮಾಣಗೊಂಡ ರಸ್ತೆ ಹಾಗೂ ಚರಂಡಿಗಳು ಹಾಳಾಗಲು ಕಾರಣವಾಗಿದೆ. <br /> <br /> ಇಷ್ಟೆಲ್ಲಾ ಅವಾಂತರಗಳಿದ್ದರೂ ಕಳೆದ ನವೆಂಬರ್ 2ರಂದು ಮನೆಗಳನ್ನು ಹಸ್ತಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಅಪೂರ್ಣಗೊಂಡಿರುವ ಮನೆಗಳ ಹಸ್ತಾಂತರಕ್ಕೆ ಸ್ಥಳೀಯ ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿ ಕೇವಲ ದದ್ದಲ ಗ್ರಾಮದ `ಆಸರೆ~ ಮನೆಗಳನ್ನು ಮಾತ್ರ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿತ್ತು. <br /> <br /> <strong>ಒತ್ತಾಯ:</strong> ಕಾತರಕಿ ಗ್ರಾಮದಲ್ಲಿ ಮನೆಗಳ ನಿರ್ಮಾಣ ಪ್ರಕ್ರಿಯೆ ಆರಂಭವಾಗಿ ಎರಡು ವರ್ಷ ಗತಿಸಿದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಯದಿರುವುದು ಸಂತ್ರಸ್ತರಲ್ಲಿ ನಿರಾಸೆಗೆ ಕಾರಣವಾಗಿದೆ. ಕಾತರಕಿ ಗ್ರಾಮದ `ಆಸರೆ~ ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಬೇಕು. ಬಿರುಕು ಬಿಟ್ಟ ಕೆಲವು ಮನೆಗಳನ್ನು ದುರಸ್ತಿಗೊಳಿಸಬೇಕು. ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>