ಇದರಲ್ಲಿ ಕನಕಪುರ 82, ಮಾಗಡಿ 127, ಚನ್ನಪಟ್ಟಣ 56 ಮತ್ತು ರಾಮನಗರದ 90 ಪ್ರಕರಣಗಳು ಸೇರಿವೆ. ಶುಕ್ರವಾರ ಆಸ್ಪತ್ರೆಯಿಂದ 29 ಮಂದಿ ಗುಣಮುಖರಾಗಿ ಹೊರ ಬಂದಿದ್ದಾರೆ. ಒಟ್ಟಾರೆ 186 ಜನರು ಗುಣಮುಖರಾಗಿದ್ದರೆ, ಇನ್ನೂ 161 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಮನಗರದ ಎಂ.ಜಿ. ರಸ್ತೆಯ ನಿವಾಸಿಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಒಂದು ಬೀದಿಯನ್ನು ಸೀಲ್ಡೌನ್ ಮಾಡಲಾಗಿದೆ. ಸ್ಟೇಷನ್ ರಸ್ತೆಯ ಕೆಲವು ಅಂಗಡಿ ಹಾಗೂ ಹೋಟೆಲ್ ಸಹ ಬಂದ್ ಆಗಿದೆ.