ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರ ನಿವಾಸಿ ತಿಮ್ಮ ಅಲಿಯಾಸ್ ವೆಂಕಟರಾಮ (38) ಹಾಗೂ ಮಾಲೂರು ಪಟ್ಟಣದ ಮಾರುತಿ ಎಕ್ಸ್ಟೆನ್ಶನ್ ಬಡಾವಣೆ ನಿವಾಸಿ ಟಿ. ಮಂಜುನಾಥ (37) ಬಂಧಿತರು. ಇವರಿಂದ ವಿವಿಧ ಬ್ಯಾಂಕುಗಳ 20 ಎಟಿಎಂ ಕಾರ್ಡುಗಳು, ₹50 ಸಾವಿರ ನಗದು 2 ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿವಿಧ ಗ್ರಾಹಕರಿಗೆ ಹೀಗೆ ವಂಚಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.