<p><strong>ಸಾತನೂರು (ಕನಕಪುರ):</strong> ಕಟಾವಿಗೆ ಬಂದಿದ್ದ ಬಾಳೆತೋಟ ಮತ್ತು ಮಾವಿನ ಸಸಿಗಳನ್ನು ದ್ವೇಷದ ಕಾರಣಕ್ಕೆ ಕತ್ತರಿಸಿ ನಾಶಪಡಿಸಲಾಗಿದೆ. ತಾಲ್ಲೂಕಿನ ಸಾತನೂರು ಹೋಬಳಿ ಗೇರಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಗ್ರಾಮದ ಚಿಕ್ಕಪುಟ್ಟೇಗೌಡ ಎಂಬುವರಿಗೆ ಸೇರಿದ ತೋಟ ಇದ್ದಾಗಿದ್ದು, 5 ಎಕರೆಯಲ್ಲಿ 250 ಮಾವಿನ ಗಿಡಗಳನ್ನು ನೆಡಲಾಗಿತ್ತು. ಅದೇ ಜಮೀನಿನಲ್ಲಿ 1200 ಬಾಳೆಗಿಡಗಳನ್ನು 10 ತಿಂಗಳ ಹಿಂದೆಯಷ್ಟೇ ನೆಡಲಾಗಿತ್ತು. ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿತ್ತು.</p>.<p>ಗುರವಾರ ರಾತ್ರಿ ತೋಟದಲ್ಲಿನ ಎಲ್ಲ ಬಾಳೆ ಗಿಡ ಹಾಗೂ ಮಾವಿನ ಸಸಿಗಳನ್ನು ಹರಿತವಾದ ಆಯುಧದಿಂದ ಕತ್ತರಿಸಲಾಗಿದೆ. ಪಕ್ಕದ ಜಮೀನಿನ ಕರಿಯಪ್ಪ ಬೆಳಿಗ್ಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.</p>.<p>ಜಮೀನು ಮಾಲೀಕ ಚಿಕ್ಕಪುಟ್ಟೇಗೌಡ ಅವರ ಪುತ್ರ ಅನಿಲ್ ಮಾತನಾಡಿ, ಬೇಸಾಯವೇ ಇಡೀ ಕುಟುಂಬಕ್ಕೆ ಆಧಾರ. ಈಗ ದ್ವೇಷಕ್ಕೆ ತೋಟ ಬಲಿ ಆಗಿದೆ. ತಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.</p>.<p>ಬಾಳೆ ಮತ್ತು ಮಾವು ಗಿಡಗಳ ನಾಶದಿಂದ ₹15ಲಕ್ಷದಷ್ಟು ನಷ್ಟವಾಗಿದೆ. ದ್ವೇಷದ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಸ್.ಐ ಮುರಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾತನೂರು (ಕನಕಪುರ):</strong> ಕಟಾವಿಗೆ ಬಂದಿದ್ದ ಬಾಳೆತೋಟ ಮತ್ತು ಮಾವಿನ ಸಸಿಗಳನ್ನು ದ್ವೇಷದ ಕಾರಣಕ್ಕೆ ಕತ್ತರಿಸಿ ನಾಶಪಡಿಸಲಾಗಿದೆ. ತಾಲ್ಲೂಕಿನ ಸಾತನೂರು ಹೋಬಳಿ ಗೇರಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಗ್ರಾಮದ ಚಿಕ್ಕಪುಟ್ಟೇಗೌಡ ಎಂಬುವರಿಗೆ ಸೇರಿದ ತೋಟ ಇದ್ದಾಗಿದ್ದು, 5 ಎಕರೆಯಲ್ಲಿ 250 ಮಾವಿನ ಗಿಡಗಳನ್ನು ನೆಡಲಾಗಿತ್ತು. ಅದೇ ಜಮೀನಿನಲ್ಲಿ 1200 ಬಾಳೆಗಿಡಗಳನ್ನು 10 ತಿಂಗಳ ಹಿಂದೆಯಷ್ಟೇ ನೆಡಲಾಗಿತ್ತು. ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿತ್ತು.</p>.<p>ಗುರವಾರ ರಾತ್ರಿ ತೋಟದಲ್ಲಿನ ಎಲ್ಲ ಬಾಳೆ ಗಿಡ ಹಾಗೂ ಮಾವಿನ ಸಸಿಗಳನ್ನು ಹರಿತವಾದ ಆಯುಧದಿಂದ ಕತ್ತರಿಸಲಾಗಿದೆ. ಪಕ್ಕದ ಜಮೀನಿನ ಕರಿಯಪ್ಪ ಬೆಳಿಗ್ಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.</p>.<p>ಜಮೀನು ಮಾಲೀಕ ಚಿಕ್ಕಪುಟ್ಟೇಗೌಡ ಅವರ ಪುತ್ರ ಅನಿಲ್ ಮಾತನಾಡಿ, ಬೇಸಾಯವೇ ಇಡೀ ಕುಟುಂಬಕ್ಕೆ ಆಧಾರ. ಈಗ ದ್ವೇಷಕ್ಕೆ ತೋಟ ಬಲಿ ಆಗಿದೆ. ತಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.</p>.<p>ಬಾಳೆ ಮತ್ತು ಮಾವು ಗಿಡಗಳ ನಾಶದಿಂದ ₹15ಲಕ್ಷದಷ್ಟು ನಷ್ಟವಾಗಿದೆ. ದ್ವೇಷದ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಸ್.ಐ ಮುರಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>