ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ 6 ಸಾವಿರ ಕ್ಯುಸೆಕ್ಗೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಡಲಾಗುತ್ತಿದೆ. ಇದರಿಂದ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ನೀರಿನ ಸೆಳೆತದಿಂದಾಗಿ ಸೇತುವೆಯು ಏಕಾಏಕಿ ಕುಸಿಯಿತು. ಈ ಸಂದರ್ಭ ಸೇತುವೆ ಮೇಲಿದ್ದ ತಿಮ್ಮಸಂದ್ರ ಗ್ರಾಮದ ವ್ಯಕ್ತಿ ಕಂಡಾದಯ್ಯ ಎಂಬಾತ ಬೈಕ್ ಸಮೇತ ನೀರಿಗೆ ಬಿದ್ದರು. ಕೂಡಲೇ ಗ್ರಾಮಸ್ಥರು ಧಾವಿಸಿ ಅವರನ್ನು ಹಗ್ಗದ ಮೂಲಕ ರಕ್ಷಣೆ ಮಾಡಿದರು.