ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ' ಸದ್ಯ ನಡೆದಿರುವ ಪಾದಯಾತ್ರೆಯು ಡಿಕೆಶಿ ಡ್ರಾಮಾ ಡ್ಯಾನ್ಸ್. ಇದಕ್ಕೆ ಗಂಭೀರತೆ ಎನ್ನುವುದೇ ಇಲ್ಲ. ಸರ್ಕಾರ ಇಂದೇ ಇದಕ್ಕೆ ತಡೆ ಒಡ್ಡದೇ ಹೋದರೆ ನಮ್ಮದು ದುರ್ಬಲ ಸರ್ಕಾರ ಎಂಬ ಅಭಿಪ್ರಾಯ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಕೂಡಲೇ ಪಾದಯಾತ್ರೆ ತಡೆಯಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರೇ ರಸ್ತೆಗೆ ಇಳಿದು ಪಾದಯಾತ್ರೆ ತಡೆಯುತ್ತೇವೆ ಎಂದರು.