ದೇವಸ್ಥಾನ, ಕಲ್ಯಾಣಿ, ಸಭಾಭವನ, ಅಶ್ವತ್ಥಕಟ್ಟೆ, ಸ್ನಾನಕಟ್ಟೆ, ನದಿ ತೀರಗಳು, ಮಸೀದಿಗಳು, ಚರ್ಚ್ಗಳು, ಬಸದಿಗಳು, ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ನಡೆಯಲಿದೆ. ಜಾತ್ರೆ, ವಿಶೇಷ ದಿನಗಳಲ್ಲಿ ವಿಶೇಷ ತಂಡ ರಚಿಸಿ ಸ್ವಚ್ಛಗೊಳಿಸಲಾಗುವುದು. ಪ್ಲಾಸ್ಟಿಕ್ ಬಳಸದಂತೆ ಹಾಗೂ ಬಟ್ಟೆ ಕೈ ಚೀಲವನ್ನು ಬಳಸುವಂತೆ ಜನ ಜಾಗೃತಿ ಮೂಡಿಸಲಾಗುವುದು ಎಂದರು.