ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಎಸ್‌ಬಿಐ ಶಾಖೆ: ಅಸಮಾಧಾನ

Last Updated 14 ಮೇ 2019, 13:41 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದಲ್ಲಿ 2 ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶಾಖೆಗಳು ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದ್ದವು. ಏಕಾಏಕಿ ಒಂದು ಶಾಖೆಯನ್ನು ಮುಚ್ಚಿರುವುದರಿಂದ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ ಎಂದು ಕೃಷಿಕ ಸಮಾಜದ ನವದೆಹಲಿಯ ಪ್ರತಿನಿಧಿ ಬೆಳಗವಾಡಿ ಸತೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿದ್ದ ಎಸ್‌ಬಿಐ ಶಾಖೆಯನ್ನು ಮುಚ್ಚಿ ದಾಖಲಾತಿಗಳನ್ನು ಕೆಂಪೇಗೌಡ ಸರ್ಕಲ್‌ ಬಳಿ ಇರುವ ಮತ್ತೊಂದು ಶಾಖೆಗೆ ಸಾಗಿಸಲಾಗುತ್ತಿದೆ ಎಂದು ಅವರು ಆಕ್ಷೇಪ ಸೂಚಿಸಿದರು.

ಮೇಲಧಿಕಾರಿಗಳನ್ನು ಕಂಡು ಗ್ರಾಹಕರಿಗೆ ಆಗಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಮೊದಲಿದ್ದಂತೆ ಎರಡು ಶಾಖೆಗಳಲ್ಲಿ ಗ್ರಾಹಕರಿಗೆ, ರೈತರಿಗೆ ಸೇವೆ ಒದಗಿಸುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

‘ಬ್ಯಾಂಕಿನ ಶಾಖೆಯ ಒಳಗೆ ಚಿತ್ರ ತೆಗೆಯುವುದು ಅಪರಾಧ. ಮೇಲಧಿಕಾರಿಗಳ ಆದೇಶದಂತೆ 2 ಶಾಖೆಗಳ ಬದಲು ಒಂದೇ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲಾಗುವುದು’ ಎಂದು ಹೆಸರು ಹೇಳಲು ಇಚ್ಛಿಸದ ವ್ಯವಸ್ಥಾಪಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT