<p>ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸಂಸದರಾಗಿ ಉತ್ತಮ ಕೆಲಸ ಮಾಡಿ, ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೆ ಸಂಸದರನ್ನಾಗಲಿ ಮಾಡಲು ಸ್ವಕುಳಿಶಾಲಿ ಮತ್ತು ಪದ್ಮಶಾಲಿ ನೇಕಾರರು ಬೆಂಬಲ ನೀಡುತ್ತಿರುವುದಾಗಿ ಜೆ.ನಟರಾಜು ತಿಳಿಸಿದರು.</p>.<p>ಇಲ್ಲಿನ ಮೇಗಳಬೀದಿ ಜಿಹ್ನೇಶ್ವರಿ ಪ್ರಾರ್ಥನಾ ಮಂದಿರದಲ್ಲಿ ನೇಕಾರರ ಸಂಘದ ವತಿಯಿಂದ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>ಸುರೇಶ್ ಅವರು ದಿನದ 24ಗಂಟೆಯೂ ದಣಿವಿಲ್ಲದೆ ಕೆಲಸ ಮಾಡುವ ಯುವ ರಾಜಕಾರಣಿಯಾಗಿ, ಅತ್ಯುತ್ತಮ ಸಂಸದರಾಗಿದ್ದಾರೆ. ಅವರು ಸಂಸದರಾದ ಮೇಲೆ ಕನಕಪುರ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸಣ್ಣ ಸಮುದಾಯವಾಗಿರುವ ನೇಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.</p>.<p>ನೇಕಾರರು ಪ್ರಮುಖವಾಗಿ ಮಗ್ಗವನ್ನೇ ನಂಬಿ ಜೀವನ ಮಾಡುತ್ತಿರುವ ಸಮುದಾಯವಾಗಿದೆ. ವಿದ್ಯುತ್ ಅವಲಂಬಿಸಿರುವ ನೇಕಾರರಿಗೆ ವಿದ್ಯುತ್ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದಾರೆ. ಸಣ್ಣ ಪ್ರಮಾಣದಲ್ಲಿರುವ ನೇಕರಾರರಿಗೆ ಬೇರೆ ಸಮುದಾಯದವರಿಂದ ರಕ್ಷಣೆ ನೀಡಿದ್ದಾರೆ ಎಂದು ಹೇಳಿದರು.</p>.<p>ಸ್ವಕುಳಿಶಾಲಿ ಮತ್ತು ಪದ್ಮಶಾಲಿ ಸಂಘದ ಮುಖಂಡರಾದ ಆರ್.ವಿಜಯಕುಮಾರ್, ಡಿ.ಮನೋಹರ್, ಎ.ಮೋಹನ್, ಪರಮೇಶ್, ಎಸ್.ನಾರಾಯಣ್ರಾವ್, ಪೋಂದೆ ರಮೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸಂಸದರಾಗಿ ಉತ್ತಮ ಕೆಲಸ ಮಾಡಿ, ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೆ ಸಂಸದರನ್ನಾಗಲಿ ಮಾಡಲು ಸ್ವಕುಳಿಶಾಲಿ ಮತ್ತು ಪದ್ಮಶಾಲಿ ನೇಕಾರರು ಬೆಂಬಲ ನೀಡುತ್ತಿರುವುದಾಗಿ ಜೆ.ನಟರಾಜು ತಿಳಿಸಿದರು.</p>.<p>ಇಲ್ಲಿನ ಮೇಗಳಬೀದಿ ಜಿಹ್ನೇಶ್ವರಿ ಪ್ರಾರ್ಥನಾ ಮಂದಿರದಲ್ಲಿ ನೇಕಾರರ ಸಂಘದ ವತಿಯಿಂದ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>ಸುರೇಶ್ ಅವರು ದಿನದ 24ಗಂಟೆಯೂ ದಣಿವಿಲ್ಲದೆ ಕೆಲಸ ಮಾಡುವ ಯುವ ರಾಜಕಾರಣಿಯಾಗಿ, ಅತ್ಯುತ್ತಮ ಸಂಸದರಾಗಿದ್ದಾರೆ. ಅವರು ಸಂಸದರಾದ ಮೇಲೆ ಕನಕಪುರ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸಣ್ಣ ಸಮುದಾಯವಾಗಿರುವ ನೇಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.</p>.<p>ನೇಕಾರರು ಪ್ರಮುಖವಾಗಿ ಮಗ್ಗವನ್ನೇ ನಂಬಿ ಜೀವನ ಮಾಡುತ್ತಿರುವ ಸಮುದಾಯವಾಗಿದೆ. ವಿದ್ಯುತ್ ಅವಲಂಬಿಸಿರುವ ನೇಕಾರರಿಗೆ ವಿದ್ಯುತ್ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದಾರೆ. ಸಣ್ಣ ಪ್ರಮಾಣದಲ್ಲಿರುವ ನೇಕರಾರರಿಗೆ ಬೇರೆ ಸಮುದಾಯದವರಿಂದ ರಕ್ಷಣೆ ನೀಡಿದ್ದಾರೆ ಎಂದು ಹೇಳಿದರು.</p>.<p>ಸ್ವಕುಳಿಶಾಲಿ ಮತ್ತು ಪದ್ಮಶಾಲಿ ಸಂಘದ ಮುಖಂಡರಾದ ಆರ್.ವಿಜಯಕುಮಾರ್, ಡಿ.ಮನೋಹರ್, ಎ.ಮೋಹನ್, ಪರಮೇಶ್, ಎಸ್.ನಾರಾಯಣ್ರಾವ್, ಪೋಂದೆ ರಮೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>