ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮನೆಯವರು, ಜಮೀನು ಸಂತ್ರಸ್ತರು, ಪೋಸ್ಟ್ ಆಫೀಸ್ಗೆ ಬರುವ ನಾಗರಿಕರು, ಪಂಚಾಯಿತಿಗೆ, ವಿ.ಎಸ್.ಎನ್.ಎನ್.ಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹಾಲಿನ ಡೈರಿಗೆ ದಿನನಿತ್ಯ ಎರಡು ಬಾರಿ ಹಾಲು ಹಾಕಲು ಬರುವ ರೈತರಿಗೆ ಕೂಡ ರಸ್ತೆ ದಾಟುವುದು ಕಷ್ಟವಾಗಿದೆ. ಈ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತೆ ಸೇತುವೆ ನಿರ್ಮಾಣ ಮಾಡಲು ಈಗಾಗಲೇ ಹೈಕೋರ್ಟ್ ಆದೇಶವಿದ್ದರೂ ಸೇತುವೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.