ನಾನು ಬರೆದರೆ ದಲಿತ ಸಾಹಿತಿ ಅಂತಾರೆ. ಅದೇ ಬೇರೆಯವರನ್ನು ಯಾಕೆ ಬ್ರಾಹ್ಮಣ ಲಿಂಗಾಯತ ಒಕ್ಕಲಿಗ ಸಾಹಿತಿ ಎಂದು ಕರೆಯುವುದಿಲ್ಲ? ಅವರಂತೆ ನಮ್ಮನ್ನೂ ಸಾಹಿತಿ ಅಂದುಕೊಂಡು ಓದಬೇಕು ಎಂದು ಮೊಗಳ್ಳಿ ಹೇಳುತ್ತಿದ್ದರು
ಡಾ. ನಟರಾಜ್ ಹುಳಿಯಾರ್ ಲೇಖಕ
ಮೊಗಳ್ಳಿ ಗಣೇಶ್ ಅವರ ಸಾವಿಗೆ ಸಮಾಜವೇ ಕಾರಣ. ಬಾಲ್ಯದಿಂದ ಸಾವಿನವರೆಗೆ ಅವರಲ್ಲಿ ಸಾಮಾಜಿಕ ನೋವು– ಸಂಕಟಗಳೇ ಇದ್ದವು. ಅನ್ಯಾಯವಾದಾಗ ಸಂಬಂಧಗಳು ಸೃಜನೆಯಾಗಬೇಕು. ಆದರೆ ಅವರ ಬದುಕಿನಲ್ಲಿ ಅದಾಗಲಿಲ್ಲ
ಡಾ. ಎನ್.ಕೆ. ಲೋಲಾಕ್ಷಿ ನಿರ್ದೇಶಕಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾಲಯ