<p><strong>ಕನಕಪುರ</strong>: ಮಂಡ್ಯ ಹೆದ್ದಾರಿನಲ್ಲಿ ಕಾರು ಡಿವೈಡರ್ಗೆ ಹೊಡೆದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶಿವನಹಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ನಾಗೇಶ್ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ, ಮಗಳು ಹಾಗೂ ಜತೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.</p>.<p>ನಾಗೇಶ್ ಅವರು ಭಾನುವಾರ ಮೇಲುಕೋಟೆಯಲ್ಲಿದ್ದ ಸಂಬಂಧಿಕರ ಮದುವೆಗೆ ಹೋಗಿ ಕನಕಪುರಕ್ಕೆ ಹಿಂತಿರುಗುವಾಗ ಮಂಡ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.</p>.<p>ನಾಗೇಶಗ ಪತ್ನಿ ನೀಲಮ್ಮ ಈ ಘಟನೆಯಿಂದ ಪ್ರಜ್ಞೆ ಕಳೆದುಕೊಂಡಿದ್ದು, ಕೋಮಾದಲ್ಲಿದ್ದಾರೆ. ನಾಗೇಶ್ ಮಗಳು ಹಾಗೂ ಇಬ್ಬರೂ ಸ್ನೇಹಿತರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. </p>.<p>ನಾಗೇಶ್ ಮೃತಪಟ್ಟಿರುವ ವಿಚಾರ ತಿಳಿದ ಅವರ ಚಿಕ್ಕಮ್ಮ ಶಿವನಹಳ್ಳಿ ಶಿವರುದ್ರಮ್ಮ (63) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. </p>.<p>ನಾಗೇಶ್ ಮತ್ತು ಶಿವರುದ್ರಮ್ಮ ಅವರ ಅಂತ್ಯಸಂಸ್ಕಾರ ಶಿವನಹಳ್ಳಿ ಗ್ರಾಮದಲ್ಲಿ ಸೋಮವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಮಂಡ್ಯ ಹೆದ್ದಾರಿನಲ್ಲಿ ಕಾರು ಡಿವೈಡರ್ಗೆ ಹೊಡೆದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶಿವನಹಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ನಾಗೇಶ್ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ, ಮಗಳು ಹಾಗೂ ಜತೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.</p>.<p>ನಾಗೇಶ್ ಅವರು ಭಾನುವಾರ ಮೇಲುಕೋಟೆಯಲ್ಲಿದ್ದ ಸಂಬಂಧಿಕರ ಮದುವೆಗೆ ಹೋಗಿ ಕನಕಪುರಕ್ಕೆ ಹಿಂತಿರುಗುವಾಗ ಮಂಡ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.</p>.<p>ನಾಗೇಶಗ ಪತ್ನಿ ನೀಲಮ್ಮ ಈ ಘಟನೆಯಿಂದ ಪ್ರಜ್ಞೆ ಕಳೆದುಕೊಂಡಿದ್ದು, ಕೋಮಾದಲ್ಲಿದ್ದಾರೆ. ನಾಗೇಶ್ ಮಗಳು ಹಾಗೂ ಇಬ್ಬರೂ ಸ್ನೇಹಿತರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. </p>.<p>ನಾಗೇಶ್ ಮೃತಪಟ್ಟಿರುವ ವಿಚಾರ ತಿಳಿದ ಅವರ ಚಿಕ್ಕಮ್ಮ ಶಿವನಹಳ್ಳಿ ಶಿವರುದ್ರಮ್ಮ (63) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. </p>.<p>ನಾಗೇಶ್ ಮತ್ತು ಶಿವರುದ್ರಮ್ಮ ಅವರ ಅಂತ್ಯಸಂಸ್ಕಾರ ಶಿವನಹಳ್ಳಿ ಗ್ರಾಮದಲ್ಲಿ ಸೋಮವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>