ಎನ್ಇಎಸ್ ಬಡಾವಣೆ, ನಟರಾಜ ಬಡಾವಣೆ, ಬಾಗೇಗೌಡ ಲೇಔಟ್, ಚನ್ನಪ್ಪ ಬಡಾವಣೆ, ಬೈಚಾಪುರ, ಗದ್ದೆಬಯಲು ಇತರ ಕಡೆ ಮಂಚನಬೆಲೆ ಜಲಾಶಯದ ನೀರು ಸರಬರಾಜು ಮಾಡಬೇಕು. ಎಂಟು ವರ್ಷದ ಹಿಂದೆ ಬಹುಕೋಟಿ ವೆಚ್ಚದಲ್ಲಿ 24X7 ಶುದ್ದ ಕುಡಿಯುವ ನೀರು ಒದಗಿಸಲು ಯೋಜನೆ ಆರಂಭಿಸಲಾಯಿತು. ಹಣ ಖರ್ಚಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಬಡಾವಣೆಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.