ನಿಜಿಯಪ್ಪನದೊಡ್ಡಿ ರೈತ ರಾಮು (50) ಹಾಗೂ ರಾಮನಗರದ ಕೊತ್ತೀಪುರ ನಿವಾಸಿ ಚಂದ್ರು (40) ಮೃತರು. ಈ ಇಬ್ಬರು ಸೇರಿ ಗ್ರಾಮದ ಮಧ್ಯಾಹ್ನ 2.30ರ ವೇಳೆಗೆ ಹೊಲದಲ್ಲಿನ ಬೋರ್ ವೆಲ್ ಮೋಟಾರ್ ದುರಸ್ತಿ ಕಾಮಗಾರಿ ಕೈಗೊಂಡಿದ್ದರು. ಈ ಸಂದರ್ಭ ಕೊಳವೆ ಬಾವಿಯ ಪೈಪ್ಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ತಗುಲಿತು. ಮೋಟಾರ್ ದುರಸ್ತಿ ವಾಹನಕ್ಕೂ ವಿದ್ಯುತ್ ಪ್ರವಹಿಸಿದ್ದು, ಅದನ್ನು ಸ್ಪರ್ಶಿಸಿ ಇಬ್ಬರೂ ವಿದ್ಯುತ್ ಆಘಾತದಿಂದ ಮೃತಪಟ್ಟರು. ದುರಸ್ತಿ ವಾಹನಕ್ಕೂ ಬೆಂಕಿ ತಗುಲಿತು.