<p><strong>ಕನಕಪುರ</strong>: ತಹಶೀಲ್ದಾರ್ ನಿರ್ದೇಶನದಂತೆ ಸ್ಥಳ ಪರಿಶೀಲನೆಗೆ ಬಂದ ಕಂದಾಯ ಅಧಿಕಾರಿಗಳಿಗೆ ಪರಿಶೀಲನೆಗೆ ರೈತರೊಬ್ಬರು ಅವಕಾಶ ನೀಡದೆ ವಾಪಸ್ ಕಳಿಸಿದ ಪ್ರಸಂಗ ತಾಮಸಂದ್ರ ಸರ್ಕಲ್ ಬಳಿ ನಡೆಯಿತು.</p>.<p>ಕಸಬಾ ಹೋಬಳಿ ರಾಮನಗರ ರಸ್ತೆಯ ತಾಮಸಂದ್ರ ಸರ್ಕಲ್ ಬಳಿ ರೈತರ ಜಮೀನುಗಳಿಗೆ ಹೋಗುವ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿರುವ ರೈತರೊಬ್ಬರು, ಮುಂದಿನ ಜಮೀನಿನ ರೈತರಿಗೆ ರಸ್ತೆ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿದ್ದರು.</p>.<p>ಸರ್ಕಾರಿ ಗೋಮಾಳ ಸರ್ವೆ ನಂ. 72ರಲ್ಲಿ 2 ಎಕರೆ ಜಮೀನು ಮಂಜೂರಾತಿ ಪಡೆದಿರುವ ರೈತ, ಸರ್ವೆ ನಂ. 231ರಲ್ಲಿ ಎರಡು ಎಕರೆಗೂ ಹೆಚ್ಚು ಜಮೀನು ಒತ್ತುವರಿ ಮಾಡಿಕೊಂಡು ರಸ್ತೆಗೆ ಅವಕಾಶ ಕೊಡದಂತೆ ತೊಂದರೆ ನೀಡಿದ್ದರು ಎಂಬ ಆರೋಪವಿದೆ.</p>.<p>ಈ ಜಮೀನಿನ ಮುಂದೆ ಬರುವ ಜಮೀನುಗಳಿಗೆ ಗೋಮಾಳ ಸರ್ವೆ ನಂ. 231ರಲ್ಲಿಯೇ ಹೋಗಬೇಕು. ಆದರೆ, ಅದರಲ್ಲಿ ಜಮೀನು ಮಾಡಿರುವ ರೈತ ತಮ್ಮ ಜಮೀನಿನಲ್ಲಿ ಜನರು ಓಡಾಡಲು ಅಡ್ಡಿಪಡಿಸುತ್ತಿರುವುದರಿಂದ ಸಮಸ್ಯೆ ಉಲ್ಬಣವಾಗಿತ್ತು.</p>.<p>ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಆರ್. ವಿಶ್ವನಾಥ್ ಅವರ ಸೂಚನೆ ಮೇರೆಗೆ ಆರ್.ಐ. ತಂಗರಾಜು, ವಿ.ಎ. ರವಿಕುಮಾರ್ ಮತ್ತು ಗ್ರಾಮ ಸಹಾಯಕರೊಂದಿಗೆ ಸ್ಥಳ ಪರಿಶೀಲನೆಗೆ ಮುಂದಾದಾಗ, ಸಾಗುವಳಿ ಮಾಡಿದ ರೈತ ವಿರೋಧ ವ್ಯಕ್ತಪಡಿಸಿದ್ದಾರೆ.</p>.<p>‘ನನ್ನ ಜಮೀನಿಗೆ ಬರಲು ನೀವ್ಯಾರು’ ಎಂದು ಅಧಿಕಾರಿಗಳನ್ನೇ ರೈತ ಬೆದರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ.</p>.<p>ಸಾಗುವಳಿ ಮಾಡಿರುವ ರೈತ ಅಧಿಕಾರಿಗಳನ್ನೇ ಬೆದರಿಸುತ್ತಾರೆ. ನಮ್ಮನ್ನೂ ಓಡಾಡಲು ಬಿಡುತ್ತಿಲ್ಲ. 30ಕ್ಕೂ ಹೆಚ್ಚು ರೈತರಿಗೆ ಈ ರಸ್ತೆಯ ಅಗತ್ಯವಿದ್ದು, ನಮಗೆ ರಸ್ತೆ ಮಾಡಿಸಿ ಕೊಡಬೇಕು ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.</p>.<p>ರೈತರಾದ ನಾರಾಯಣ್, ಶ್ರೀನಿವಾಸ್, ರಾಮಕೃಷ್ಣ, ಸುಜಾತ ಮುತ್ತೇಗೌಡ, ಶಿವಾನಂದ, ಮರಿಗೌಡ, ಮುದ್ದೇಗೌಡ, ಮಾರೇಗೌಡ, ದೇವಮ್ಮ, ಶಿವರಾಜು, ನಾಗರಾಜು, ತಿಮ್ಮಪ್ಪ, ಪಾರ್ಥ, ಪ್ರಕಾಶ್, ರವಿ, ದಾಸೇಗೌಡ, ವೆಂಕಟೇಗೌಡ, ಶ್ರೀನಿವಾಸ, ನಾಗರಾಜು, ಅಶ್ವಥ್, ಶಿವರಾಮು, ರವೀಂದ್ರ, ಉಮೇಶ್, ತಿಮ್ಮಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ತಹಶೀಲ್ದಾರ್ ನಿರ್ದೇಶನದಂತೆ ಸ್ಥಳ ಪರಿಶೀಲನೆಗೆ ಬಂದ ಕಂದಾಯ ಅಧಿಕಾರಿಗಳಿಗೆ ಪರಿಶೀಲನೆಗೆ ರೈತರೊಬ್ಬರು ಅವಕಾಶ ನೀಡದೆ ವಾಪಸ್ ಕಳಿಸಿದ ಪ್ರಸಂಗ ತಾಮಸಂದ್ರ ಸರ್ಕಲ್ ಬಳಿ ನಡೆಯಿತು.</p>.<p>ಕಸಬಾ ಹೋಬಳಿ ರಾಮನಗರ ರಸ್ತೆಯ ತಾಮಸಂದ್ರ ಸರ್ಕಲ್ ಬಳಿ ರೈತರ ಜಮೀನುಗಳಿಗೆ ಹೋಗುವ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿರುವ ರೈತರೊಬ್ಬರು, ಮುಂದಿನ ಜಮೀನಿನ ರೈತರಿಗೆ ರಸ್ತೆ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿದ್ದರು.</p>.<p>ಸರ್ಕಾರಿ ಗೋಮಾಳ ಸರ್ವೆ ನಂ. 72ರಲ್ಲಿ 2 ಎಕರೆ ಜಮೀನು ಮಂಜೂರಾತಿ ಪಡೆದಿರುವ ರೈತ, ಸರ್ವೆ ನಂ. 231ರಲ್ಲಿ ಎರಡು ಎಕರೆಗೂ ಹೆಚ್ಚು ಜಮೀನು ಒತ್ತುವರಿ ಮಾಡಿಕೊಂಡು ರಸ್ತೆಗೆ ಅವಕಾಶ ಕೊಡದಂತೆ ತೊಂದರೆ ನೀಡಿದ್ದರು ಎಂಬ ಆರೋಪವಿದೆ.</p>.<p>ಈ ಜಮೀನಿನ ಮುಂದೆ ಬರುವ ಜಮೀನುಗಳಿಗೆ ಗೋಮಾಳ ಸರ್ವೆ ನಂ. 231ರಲ್ಲಿಯೇ ಹೋಗಬೇಕು. ಆದರೆ, ಅದರಲ್ಲಿ ಜಮೀನು ಮಾಡಿರುವ ರೈತ ತಮ್ಮ ಜಮೀನಿನಲ್ಲಿ ಜನರು ಓಡಾಡಲು ಅಡ್ಡಿಪಡಿಸುತ್ತಿರುವುದರಿಂದ ಸಮಸ್ಯೆ ಉಲ್ಬಣವಾಗಿತ್ತು.</p>.<p>ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಆರ್. ವಿಶ್ವನಾಥ್ ಅವರ ಸೂಚನೆ ಮೇರೆಗೆ ಆರ್.ಐ. ತಂಗರಾಜು, ವಿ.ಎ. ರವಿಕುಮಾರ್ ಮತ್ತು ಗ್ರಾಮ ಸಹಾಯಕರೊಂದಿಗೆ ಸ್ಥಳ ಪರಿಶೀಲನೆಗೆ ಮುಂದಾದಾಗ, ಸಾಗುವಳಿ ಮಾಡಿದ ರೈತ ವಿರೋಧ ವ್ಯಕ್ತಪಡಿಸಿದ್ದಾರೆ.</p>.<p>‘ನನ್ನ ಜಮೀನಿಗೆ ಬರಲು ನೀವ್ಯಾರು’ ಎಂದು ಅಧಿಕಾರಿಗಳನ್ನೇ ರೈತ ಬೆದರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ.</p>.<p>ಸಾಗುವಳಿ ಮಾಡಿರುವ ರೈತ ಅಧಿಕಾರಿಗಳನ್ನೇ ಬೆದರಿಸುತ್ತಾರೆ. ನಮ್ಮನ್ನೂ ಓಡಾಡಲು ಬಿಡುತ್ತಿಲ್ಲ. 30ಕ್ಕೂ ಹೆಚ್ಚು ರೈತರಿಗೆ ಈ ರಸ್ತೆಯ ಅಗತ್ಯವಿದ್ದು, ನಮಗೆ ರಸ್ತೆ ಮಾಡಿಸಿ ಕೊಡಬೇಕು ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.</p>.<p>ರೈತರಾದ ನಾರಾಯಣ್, ಶ್ರೀನಿವಾಸ್, ರಾಮಕೃಷ್ಣ, ಸುಜಾತ ಮುತ್ತೇಗೌಡ, ಶಿವಾನಂದ, ಮರಿಗೌಡ, ಮುದ್ದೇಗೌಡ, ಮಾರೇಗೌಡ, ದೇವಮ್ಮ, ಶಿವರಾಜು, ನಾಗರಾಜು, ತಿಮ್ಮಪ್ಪ, ಪಾರ್ಥ, ಪ್ರಕಾಶ್, ರವಿ, ದಾಸೇಗೌಡ, ವೆಂಕಟೇಗೌಡ, ಶ್ರೀನಿವಾಸ, ನಾಗರಾಜು, ಅಶ್ವಥ್, ಶಿವರಾಮು, ರವೀಂದ್ರ, ಉಮೇಶ್, ತಿಮ್ಮಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>