<p><strong>ಹಾರೋಹಳ್ಳಿ:</strong> ಭೂಮಿ ತಾಯಿ ನಂಬಿ ನಿತ್ಯ ಹೊಲದಲ್ಲಿ ಶ್ರಮವಹಿಸಿ ಕೆಲಸ ಮಾಡುವವರಿಗೆ ಒಂದಿಲ್ಲೊಂದು ರೀತಿ ಲಾಭ ಕಟ್ಟಿಟ್ಟ ಬುತ್ತಿ. ಅದರಂತೆ ಸಮಗ್ರ ಕೃಷಿಯಲ್ಲಿ ತೊಡಗಿರುವ ರೈತರೊಬ್ಬರದ್ದು ಮಾದರಿ ನಡೆ.</p>.<p>ತಾಲ್ಲೂಕಿನ ಚಿಕ್ಕದೇವರಹಳ್ಳಿ ಮುದ್ದುವೀರಪ್ಪ ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್ ಓದಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಅವರು, ಈಗ ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. </p>.<p>ಮೂರು ಎಕರೆ ಜಮೀನು ಹೊಂದಿರುವ ಅವರು, ಹಲವು ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ರೈತರು ಅಚ್ಚರಿಪಡುವ ರೀತಿಯಲ್ಲಿ ಕೃಷಿಯಲ್ಲಿ ಹಲವು ರೀತಿಯ ಪ್ರಯೋಗ ಕೈಗೊಂಡಿದ್ದಾರೆ.</p>.<p>ಲಾಭದಾಯಕ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಅದರಲ್ಲಿ ಲಾಭ ಗಳಿಸುತ್ತಿದ್ದಾರೆ. 6 ಗುಂಟೆ ಜಾಗದಲ್ಲಿ 10 ಕ್ವಿಂಟಲ್ ಶುಂಠಿ ಹಾಗೂ 5 ಎಕರೆ ಜಾಗದಲ್ಲಿ 10 ಕ್ವಿಂಟಲ್ ಅರಿಸಿನ ಬೆಳೆದಿದ್ದಾರೆ. </p>.<p><strong>ಸಮಗ್ರ ಕೃಷಿ:</strong> ಸುಮಾರು 70 ತೆಂಗಿನ ಮರ, ಕರಿಬೇವು, ನುಗ್ಗೆ, ಭತ್ತ 25 ಕ್ವಿಂಟಲ್, ರಾಗಿ 10 ಕ್ವಿಂಟಲ್,ಮುಸುಕಿನ ಜೋಳ, ತೊಗರಿ, ಶೇಂಗಾ ಅವರೆ ಸಮಗ್ರ ಕೃಷಿಯಲ್ಲಿ ಲಾಭ ಗಳಿಸಿದ್ದಾರೆ.</p>.<p><strong>ಸಾವಯವ ಗೊಬ್ಬರ ಬಳಕೆ:</strong> ಹೊಂಗೆ, ಬೇವಿನ ಬೀಜ ಸಂಗ್ರಹಿಸಿ ಸಗಣಿ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಳಸುತ್ತಿದ್ದಾರೆ.</p>.<p><strong>ಅಧುನಿಕ ಕೃಷಿ ಪದ್ಧತಿ:</strong> ಆಧುನಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಕೃಷಿಯಲ್ಲಿ ಹೊಸತನ ಮೆರೆದಿದ್ದಾರೆ.</p>.<p>ಭೂಮಿ ಅಗತ್ಯತೆ ಅರಿತು ಪೋಷಕಾಂಶ, ಗೊಬ್ಬರ ನೀಡುತ್ತಾರೆ. ಕಾಲ ಕಾಲಕ್ಕೆ ಪ್ರತಿ ವರ್ಷ ಮಣ್ಣು ಪರೀಕ್ಷೆ ನಡೆಸಿ ಪೋಷಕಾಂಶ ಒದಗಿಸುತ್ತಾರೆ. ಎಲ್ಲವೂ ಸರಿ ಇದ್ದರೆ ಮಾತ್ರ ಉತ್ತಮ ಬೆಳೆ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಮುದ್ದುವೀರಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೋಹಳ್ಳಿ:</strong> ಭೂಮಿ ತಾಯಿ ನಂಬಿ ನಿತ್ಯ ಹೊಲದಲ್ಲಿ ಶ್ರಮವಹಿಸಿ ಕೆಲಸ ಮಾಡುವವರಿಗೆ ಒಂದಿಲ್ಲೊಂದು ರೀತಿ ಲಾಭ ಕಟ್ಟಿಟ್ಟ ಬುತ್ತಿ. ಅದರಂತೆ ಸಮಗ್ರ ಕೃಷಿಯಲ್ಲಿ ತೊಡಗಿರುವ ರೈತರೊಬ್ಬರದ್ದು ಮಾದರಿ ನಡೆ.</p>.<p>ತಾಲ್ಲೂಕಿನ ಚಿಕ್ಕದೇವರಹಳ್ಳಿ ಮುದ್ದುವೀರಪ್ಪ ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್ ಓದಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಅವರು, ಈಗ ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. </p>.<p>ಮೂರು ಎಕರೆ ಜಮೀನು ಹೊಂದಿರುವ ಅವರು, ಹಲವು ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ರೈತರು ಅಚ್ಚರಿಪಡುವ ರೀತಿಯಲ್ಲಿ ಕೃಷಿಯಲ್ಲಿ ಹಲವು ರೀತಿಯ ಪ್ರಯೋಗ ಕೈಗೊಂಡಿದ್ದಾರೆ.</p>.<p>ಲಾಭದಾಯಕ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಅದರಲ್ಲಿ ಲಾಭ ಗಳಿಸುತ್ತಿದ್ದಾರೆ. 6 ಗುಂಟೆ ಜಾಗದಲ್ಲಿ 10 ಕ್ವಿಂಟಲ್ ಶುಂಠಿ ಹಾಗೂ 5 ಎಕರೆ ಜಾಗದಲ್ಲಿ 10 ಕ್ವಿಂಟಲ್ ಅರಿಸಿನ ಬೆಳೆದಿದ್ದಾರೆ. </p>.<p><strong>ಸಮಗ್ರ ಕೃಷಿ:</strong> ಸುಮಾರು 70 ತೆಂಗಿನ ಮರ, ಕರಿಬೇವು, ನುಗ್ಗೆ, ಭತ್ತ 25 ಕ್ವಿಂಟಲ್, ರಾಗಿ 10 ಕ್ವಿಂಟಲ್,ಮುಸುಕಿನ ಜೋಳ, ತೊಗರಿ, ಶೇಂಗಾ ಅವರೆ ಸಮಗ್ರ ಕೃಷಿಯಲ್ಲಿ ಲಾಭ ಗಳಿಸಿದ್ದಾರೆ.</p>.<p><strong>ಸಾವಯವ ಗೊಬ್ಬರ ಬಳಕೆ:</strong> ಹೊಂಗೆ, ಬೇವಿನ ಬೀಜ ಸಂಗ್ರಹಿಸಿ ಸಗಣಿ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಳಸುತ್ತಿದ್ದಾರೆ.</p>.<p><strong>ಅಧುನಿಕ ಕೃಷಿ ಪದ್ಧತಿ:</strong> ಆಧುನಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಕೃಷಿಯಲ್ಲಿ ಹೊಸತನ ಮೆರೆದಿದ್ದಾರೆ.</p>.<p>ಭೂಮಿ ಅಗತ್ಯತೆ ಅರಿತು ಪೋಷಕಾಂಶ, ಗೊಬ್ಬರ ನೀಡುತ್ತಾರೆ. ಕಾಲ ಕಾಲಕ್ಕೆ ಪ್ರತಿ ವರ್ಷ ಮಣ್ಣು ಪರೀಕ್ಷೆ ನಡೆಸಿ ಪೋಷಕಾಂಶ ಒದಗಿಸುತ್ತಾರೆ. ಎಲ್ಲವೂ ಸರಿ ಇದ್ದರೆ ಮಾತ್ರ ಉತ್ತಮ ಬೆಳೆ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಮುದ್ದುವೀರಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>