ಹಾಲಿ ಸದಸ್ಯರು ಆಗಿರುವ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಅ. ದೇವೇಗೌಡ, ಕಾಂಗ್ರೆಸ್ನ ರಾಮೋಜಿಗೌಡ, ಪಕ್ಷೇತರರಾಗಿ ಸವಾಲೊಡ್ಡುತ್ತಿರುವ ಆರ್.ಎಸ್. ಉದಯ್ ಸಿಂಗ್, ಪುಟ್ಟಸ್ವಾಮಿ, ನೀಲಕಂಠಗೌಡ ಶಾಲಾ–ಕಾಲೇಜುಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಾಲೀಕರಿಂದಿಡಿದು ಅಲ್ಲಿನ ಬೋಧಕರ ಬೆಂಬಲ ಕೋರುತ್ತಿದ್ದಾರೆ.