<p><strong>ಕನಕಪುರ</strong>: ಯಶಸ್ಸು ಹುಟ್ಟಿನಿಂದ ಬರುವುದಿಲ್ಲ. ಸಂದರ್ಭ ಮತ್ತು ಸಮಾಜದಲ್ಲಿ ಆಗುವ ಅಪಮಾನಗಳು, ಕಠಿಣ ನಿರ್ಧಾರಗಳು ನಮ್ಮನ್ನು ಯಶಸ್ಸಿನ ಕಡೆ ಕರೆದುಕೊಂಡು ಹೋಗುತ್ತವೆ ಎಂದು ತುಮಕೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಗೌಡ ಹೇಳಿದರು.</p>.<p>ಇಲ್ಲಿನ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2019-20ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.<br />‘ಸಮಾಜದಲ್ಲಿ ಯಶಸ್ಸು ಗಳಿಸಿರುವ ಅಥವಾ ಉನ್ನತ ಸಾಧನೆ ಮಾಡಿರುವವರ ಹಿನ್ನೆಲೆಯನ್ನು ನೀವು ತಿಳಿದುಕೊಂಡಾಗ ಇದು ಗೊತ್ತಾಗುತ್ತದೆ. ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಅತ್ಯಂತ ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಅವರು ಜೀವಮಾನದ ಸಾಧನೆಯನ್ನು ಮಾಡಿರುತ್ತಾರೆ’ ಎಂದರು.<br />ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ ಯುವತಿಯರು ಹೆಚ್ಚು ಮೊಬೈಲ್ಗೆ ದಾಸರಾಗಿದ್ದಾರೆ. ಅವರಿಗೆ ಹೆತ್ತ ತಂದೆ ತಾಯಿ ಬಂಧು ಬಳಗಕ್ಕಿಂತ ಮೊಬೈಲ್ ದೇವರಾಗಿದೆ. ಸದಾ ಮೊಬೈಲ್ ವೀಕ್ಷಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ, ಮೊಬೈಲ್ನಿಂದ ಸಂಬಂಧಗಳು ಜಾಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಜೀವನ ನೀವೆಂದುಕೊಂಡಷ್ಟು ಸುಲಭವಾಗಿಲ್ಲ. ನಿಮ್ಮ ತಂದೆ ತಾಯಿ ಯಾವುದಕ್ಕೂ ನೋಯಿಸದೆ ಕೇಳುವುದಕ್ಕೂ ಮೊದಲೇ ಎಲ್ಲವನ್ನೂ ಪೂರೈಸುತ್ತಿದ್ದಾರೆ. ನಿಮ್ಮ ಭವಿಷ್ಯ ರೂಪಿಸುವುದರಲ್ಲಿ ತಮ್ಮ ಭವಿಷ್ಯವನ್ನೇ ಮರೆತಿದ್ದಾರೆ. ನಾಳೆ ನೀವೇ ತಂದೆ ತಾಯಿ ಆದಾಗ ನಿಜವಾದ ಜೀವನ ನಿಮಗೆ ಅರ್ಥವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಕಾಲೇಜು ದಿನಗಳು ಎಂಬುದು ಬಣ್ಣದ ಕನಸಿನ ದಿನಗಳಲ್ಲ, ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಮುಂದಿನ ಜೀವನದ ಗುರಿಗೆ ಅಡಿಪಾಯ ಹಾಕಿಕೊಳ್ಳುವ ದಿನಗಳಾಗಿದ್ದು, ಇನ್ನು ಮುಂದಾದರು ಒಳ್ಳೆಯ ಆಲೋಚನೆಯೊಂದಿಗೆ ಅಚಲ ಗುರಿಯೊಂದಿಗೆ ನಿಮ್ಮ ಬದುಕನ್ನು ನೀವು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.</p>.<p>ಆರ್ಇಎಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಹಿರಿಯ ವಕೀಲ ಟಿ.ವಿ.ತಾಜ್ಪೀರ್ ಸಾಬ್ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ; ಎಲ್ಲ ಅವಕಾಶಗಳಿವೆ. ನಮ್ಮ ಕಾಲದಲ್ಲಿ ಹತ್ತಾರು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಿತ್ತು, ಯಾವುದೆ ಸಾರಿಗೆ ವ್ಯವಸ್ಥೆಯಾಗಲಿ, ಅನುಕೂಲಗಳಾಗಲಿ ಇರಲಿಲ್ಲ. ಸ್ಥಿತಿವಂತರಿಗೆ ಮಾತ್ರ ಶಿಕ್ಷಣ ದೊರೆಯುತ್ತಿದ್ದ ಕಾಲವದು’ ಎಂದರು.<br />‘ಅಂತಹ ವಿಚಾರಗಳನ್ನು ತಿಳಿಸಿದರೆ ಯಾರೋ ತಲೆತಿನ್ನುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆ. ಒಮ್ಮೆ ಪೋಷಕರ ಶೈಕ್ಷಣಿಕ ವಿದ್ಯಾರ್ಹತೆ, ಪಡುವ ಕಷ್ಟವನ್ನು ತಿಳಿದುಕೊಳ್ಳಿ, ನಿಮ್ಮನ್ನು ಈ ಮಟ್ಟಕ್ಕೆ ತರಲು, ಉನ್ನತ ವ್ಯಾಸಂಗ ಮಾಡಿಸಲು ಅವರು ಎಷ್ಟು ಪರಿಶ್ರಮ ಪಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಜೀವನ ಅರ್ಥವಾಗುತ್ತದೆ’ ಎಂದರು.</p>.<p>ಉನ್ನತ ವ್ಯಸಂಗ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಪೋಷಕರ ಆಸೆಯನ್ನು ಈಡೇರಿಸಿ ಎಂದು ಸಲಹೆ ನೀಡಿದರು.<br />ಆರ್ಇಎಸ್ ಅಧ್ಯಕ್ಷ ಕೆ.ಬಿ.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಪ್ರಾಂಶುಪಾಲ ಕೆ.ರುದ್ರೇಶ್ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ.ಕೆ.ಎಸ್, ಉಸ್ಮಾಬಾನು ಗಣ್ಯರ ಪರಿಚಯ ಮಾಡಿಕೊಟ್ಟರು.<br />ಶಿಕ್ಷಕಿ ನಂದಿನಿ ವಾರ್ಷಿಕ ವರದಿ ಮಂಡಿಸಿದರು. ಜ್ಞಾನಯೋಗಿ ತಂಡದವರು ನಾಡಗೀತೆ ಮತ್ತು ಸ್ಮರಣಗೀತೆಯನ್ನು ಹಾಡಿದರು. ಐಶ್ವರ್ಯ ಮತ್ತು ಶರಣ್ಯ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.<br />ಕನ್ನಡ ಉಪನ್ಯಾಸಕಿ ಎಚ್.ಕೆ.ಪಾರ್ವತಮ್ಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಎಲ್.ಶಿವಕುಮಾರ್, ಕಾರ್ಯದರ್ಶಿ.ಸಿ.ರಮೇಶ್, ನಿರ್ದೇಶಕ ಕೆ.ಎಲ್.ಪುಟ್ಟಸ್ವಾಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಯಶಸ್ಸು ಹುಟ್ಟಿನಿಂದ ಬರುವುದಿಲ್ಲ. ಸಂದರ್ಭ ಮತ್ತು ಸಮಾಜದಲ್ಲಿ ಆಗುವ ಅಪಮಾನಗಳು, ಕಠಿಣ ನಿರ್ಧಾರಗಳು ನಮ್ಮನ್ನು ಯಶಸ್ಸಿನ ಕಡೆ ಕರೆದುಕೊಂಡು ಹೋಗುತ್ತವೆ ಎಂದು ತುಮಕೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಗೌಡ ಹೇಳಿದರು.</p>.<p>ಇಲ್ಲಿನ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2019-20ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.<br />‘ಸಮಾಜದಲ್ಲಿ ಯಶಸ್ಸು ಗಳಿಸಿರುವ ಅಥವಾ ಉನ್ನತ ಸಾಧನೆ ಮಾಡಿರುವವರ ಹಿನ್ನೆಲೆಯನ್ನು ನೀವು ತಿಳಿದುಕೊಂಡಾಗ ಇದು ಗೊತ್ತಾಗುತ್ತದೆ. ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಅತ್ಯಂತ ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಅವರು ಜೀವಮಾನದ ಸಾಧನೆಯನ್ನು ಮಾಡಿರುತ್ತಾರೆ’ ಎಂದರು.<br />ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ ಯುವತಿಯರು ಹೆಚ್ಚು ಮೊಬೈಲ್ಗೆ ದಾಸರಾಗಿದ್ದಾರೆ. ಅವರಿಗೆ ಹೆತ್ತ ತಂದೆ ತಾಯಿ ಬಂಧು ಬಳಗಕ್ಕಿಂತ ಮೊಬೈಲ್ ದೇವರಾಗಿದೆ. ಸದಾ ಮೊಬೈಲ್ ವೀಕ್ಷಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ, ಮೊಬೈಲ್ನಿಂದ ಸಂಬಂಧಗಳು ಜಾಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಜೀವನ ನೀವೆಂದುಕೊಂಡಷ್ಟು ಸುಲಭವಾಗಿಲ್ಲ. ನಿಮ್ಮ ತಂದೆ ತಾಯಿ ಯಾವುದಕ್ಕೂ ನೋಯಿಸದೆ ಕೇಳುವುದಕ್ಕೂ ಮೊದಲೇ ಎಲ್ಲವನ್ನೂ ಪೂರೈಸುತ್ತಿದ್ದಾರೆ. ನಿಮ್ಮ ಭವಿಷ್ಯ ರೂಪಿಸುವುದರಲ್ಲಿ ತಮ್ಮ ಭವಿಷ್ಯವನ್ನೇ ಮರೆತಿದ್ದಾರೆ. ನಾಳೆ ನೀವೇ ತಂದೆ ತಾಯಿ ಆದಾಗ ನಿಜವಾದ ಜೀವನ ನಿಮಗೆ ಅರ್ಥವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಕಾಲೇಜು ದಿನಗಳು ಎಂಬುದು ಬಣ್ಣದ ಕನಸಿನ ದಿನಗಳಲ್ಲ, ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಮುಂದಿನ ಜೀವನದ ಗುರಿಗೆ ಅಡಿಪಾಯ ಹಾಕಿಕೊಳ್ಳುವ ದಿನಗಳಾಗಿದ್ದು, ಇನ್ನು ಮುಂದಾದರು ಒಳ್ಳೆಯ ಆಲೋಚನೆಯೊಂದಿಗೆ ಅಚಲ ಗುರಿಯೊಂದಿಗೆ ನಿಮ್ಮ ಬದುಕನ್ನು ನೀವು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.</p>.<p>ಆರ್ಇಎಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಹಿರಿಯ ವಕೀಲ ಟಿ.ವಿ.ತಾಜ್ಪೀರ್ ಸಾಬ್ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ; ಎಲ್ಲ ಅವಕಾಶಗಳಿವೆ. ನಮ್ಮ ಕಾಲದಲ್ಲಿ ಹತ್ತಾರು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಿತ್ತು, ಯಾವುದೆ ಸಾರಿಗೆ ವ್ಯವಸ್ಥೆಯಾಗಲಿ, ಅನುಕೂಲಗಳಾಗಲಿ ಇರಲಿಲ್ಲ. ಸ್ಥಿತಿವಂತರಿಗೆ ಮಾತ್ರ ಶಿಕ್ಷಣ ದೊರೆಯುತ್ತಿದ್ದ ಕಾಲವದು’ ಎಂದರು.<br />‘ಅಂತಹ ವಿಚಾರಗಳನ್ನು ತಿಳಿಸಿದರೆ ಯಾರೋ ತಲೆತಿನ್ನುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆ. ಒಮ್ಮೆ ಪೋಷಕರ ಶೈಕ್ಷಣಿಕ ವಿದ್ಯಾರ್ಹತೆ, ಪಡುವ ಕಷ್ಟವನ್ನು ತಿಳಿದುಕೊಳ್ಳಿ, ನಿಮ್ಮನ್ನು ಈ ಮಟ್ಟಕ್ಕೆ ತರಲು, ಉನ್ನತ ವ್ಯಾಸಂಗ ಮಾಡಿಸಲು ಅವರು ಎಷ್ಟು ಪರಿಶ್ರಮ ಪಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಜೀವನ ಅರ್ಥವಾಗುತ್ತದೆ’ ಎಂದರು.</p>.<p>ಉನ್ನತ ವ್ಯಸಂಗ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಪೋಷಕರ ಆಸೆಯನ್ನು ಈಡೇರಿಸಿ ಎಂದು ಸಲಹೆ ನೀಡಿದರು.<br />ಆರ್ಇಎಸ್ ಅಧ್ಯಕ್ಷ ಕೆ.ಬಿ.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಪ್ರಾಂಶುಪಾಲ ಕೆ.ರುದ್ರೇಶ್ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ.ಕೆ.ಎಸ್, ಉಸ್ಮಾಬಾನು ಗಣ್ಯರ ಪರಿಚಯ ಮಾಡಿಕೊಟ್ಟರು.<br />ಶಿಕ್ಷಕಿ ನಂದಿನಿ ವಾರ್ಷಿಕ ವರದಿ ಮಂಡಿಸಿದರು. ಜ್ಞಾನಯೋಗಿ ತಂಡದವರು ನಾಡಗೀತೆ ಮತ್ತು ಸ್ಮರಣಗೀತೆಯನ್ನು ಹಾಡಿದರು. ಐಶ್ವರ್ಯ ಮತ್ತು ಶರಣ್ಯ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.<br />ಕನ್ನಡ ಉಪನ್ಯಾಸಕಿ ಎಚ್.ಕೆ.ಪಾರ್ವತಮ್ಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಎಲ್.ಶಿವಕುಮಾರ್, ಕಾರ್ಯದರ್ಶಿ.ಸಿ.ರಮೇಶ್, ನಿರ್ದೇಶಕ ಕೆ.ಎಲ್.ಪುಟ್ಟಸ್ವಾಮಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>