ಜಾತಿ ಮತ್ತು ಧರ್ಮ ಮನೆಗಷ್ಟೇ ಸೀಮಿತವಾಗಬೇಕು. ಹೊರಗೆ ಬಂದಾಗ ನಮ್ಮದು ಮಾನವ ಧರ್ಮ ಮತ್ತು ಜಾತಿಯಾಗಬೇಕು. ದೇವರು ತನ್ನ ಸ್ವರೂಪದಲ್ಲಿ ಮನುಷ್ಯನನ್ನು ಸೃಷ್ಟಿಸಿದ್ದಾನೆ. ಕರುಣೆ ಪ್ರೀತಿ ಅಹಿಂಸೆ ರೂಪದಲ್ಲಿ ನೆಲೆಸಿದ್ದಾನೆ
– ಘನ ಸ್ಯಾಮ್ಸನ್ ಕ್ರೈಸ್ತ ಸಭಾ ಪಾಲಕರು ರಾಮನಗರ–ಚನ್ನಪಟ್ಟಣ
ಮನಸ್ಸಿನಲ್ಲಿರುವ ಕೆಟ್ಟ ಗುಣಗಳನ್ನು ನಾವು ವಿರೋಧಿಸಿದರೆ ಬೇರೆಯವರನ್ನು ದ್ವೇಷಿಸುವ ಪ್ರಮೇಯವೇ ಬರುವುದಿಲ್ಲ. ಭೂಮಿ ಮೇಲಿರುವವರೆಲ್ಲರೂ ನಮ್ಮವರೇ. ಎಲ್ಲಾ ಧರ್ಮಗಳ ಸಾರವೂ ಒಂದೇ ಎಂಬ ಅರಿವು ಎಲ್ಲರಲ್ಲೂ ಮೂಡಲಿ
– ಭಂತೆ ಬೋಧಿದತ್ತ ಥೇರೊ ಮುಖ್ಯಸ್ಥರು ನಳಂದ ವಿಶ್ವವಿದ್ಯಾಲಯ ಚಾಮರಾಜನಗರ