ಭಾನುವಾರ ಸಹೋದರನ ಅಂತ್ಯಕ್ರಿಯೆ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ಅವರು 'ಐ.ಟಿ. ಅಧಿಕಾರಿ ಬಂದಿರುವುದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ. ವಿಚಾರಣೆ ನಡೆಸಿಲ್ಲ ಅಂತ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಐ.ಟಿ. ದಾಳಿ ಆದಾಗಿನಿಂದ ಸಹೋದರ ನನ್ನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪರಮೇಶ್ವರ್ ಅವರಮನೆಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಐ.ಟಿ. ಕಿರುಕುಳವೇ ಕಾರಣ' ಎಂದು ದೂರಿದರು.