ಅಂತ್ಯಕ್ರಿಯೆ ವೇಳೆ ಶಿವರಾಂ ಅವರ ಪತ್ನಿ ವಾಣಿ ಶಿವರಾಂ, ಪುತ್ರಿಯರಾದ ಇಂಚರ, ಅಂಕುರ, ನೇಸರ ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಆಪ್ತರು ಅವರನ್ನು ಸಮಾಧಾನಪಡಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಭಿಮಾನಿಗಳು, ಛಲವಾದಿ ಮಹಾಸಭಾದ ಕಾರ್ಯಕರ್ತರು, ದಲಿತ ಸಂಘಟನೆಗಳ ಕಾರ್ಯಕರ್ತರು ಸಹ ಅಗಲಿದ ನಾಯಕನಿಗೆ ಮಿಡಿದರು. ಭಾವಚಿತ್ರ ಪ್ರದರ್ಶಿಸಿ ಅಭಿಮಾನ ಮೆರೆದರು.
ರಾಮನಗರ ತಾಲ್ಲೂಕಿನ ಉರಗಹಳ್ಳಿಯಲ್ಲಿರುವ ತೋಟದ ಮನೆಗೆ ಶುಕ್ರವಾರ ರಾತ್ರಿ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ಶವವನ್ನು ತಂದಾಗ ಅಂತಿಮ ದರ್ಶನ ಪಡೆಯಲು ಮುಗಿಬಿದ್ದ ಜನ – ಪ್ರಜಾವಾಣಿ ಚಿತ್ರ
ನಾನು ಮೊದಲ ಸಲ ಶಾಸಕನಾಗಿದ್ದಾಗ ಶಿವರಾಮ್ ಅವರು ಬೆಂಗಳೂರಿನಲ್ಲಿ ಅಧಿಕಾರಿಯಾಗಿದ್ದರು. ಅಂದಿನಿಂದಲೂ ಅವರೊಂದಿಗೆ ಉತ್ತಮ ಸ್ನೇಹವಿತ್ತು. ಅವರ ಸಾವು ನೋವು ತಂದಿದೆ