<p><strong>ರಾಮನಗರ</strong>: ಕರ್ನಾಟಕ ಜಾನಪದ ಪರಿಷತ್ತು ಲೋಕೋತ್ಸವ ಪ್ರಯುಕ್ತ ಪ್ರತಿ ವರ್ಷ ನೀಡುವ ‘ಜಾನಪದ ಲೋಕ’ ಪ್ರಶಸ್ತಿಗೆ ಈ ಸಲ ಪರಿಷತ್ತಿನ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಪ್ರೊ.ಹಿ. ಶಿ. ರಾಮಚಂದ್ರೇಗೌಡ ಸೇರಿದಂತೆ 19 ಮಂದಿ ಭಾಜನರಾಗಿದ್ದಾರೆ.</p>.<p>ಜಾನಪದ ಲೋಕದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ, ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗೆ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಹೇಳಿದರು.</p>.<p>ಈ ಸಲ ಫೆ. 7 ಮತ್ತು 8ರಂದು ಜಾನಪದ ಲೋಕದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ–2026 ಕಾರ್ಯಕ್ರಮ ನಡೆಯಲಿದೆ. 8ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.</p><p><strong>ಜಾನಪದ ಲೋಕ ದತ್ತಿ ಪ್ರಶಸ್ತಿ</strong></p><ul><li><p><strong>ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ</strong>: ಪ್ರೊ. ಹಿ.ಶಿ. ರಾಮಚಂದ್ರೇಗೌಡ ಮೈಸೂರು ಜಿಲ್ಲೆ</p></li><li><p><strong>ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ</strong>: ಪ್ರೊ. ಕೆ. ಚಿನ್ನಪ್ಪಗೌಡ ದಕ್ಷಿಣ ಕನ್ನಡ ಜಿಲ್ಲೆ</p></li><li><p><strong>ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ</strong>: ಗಣೆ ವಾದನ ಕಲಾವಿದ ಚಿಕ್ಕಣ್ಣ ತುಮಕೂರು ಜಿಲ್ಲೆ </p></li><li><p><strong>ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ</strong>: ಛಾಯಾಗ್ರಾಹಕ ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ ಬೆಂಗಳೂರು </p></li><li><p><strong>ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ:</strong> ಪೂಜಾ ಕುಣಿತ ಕಲಾವಿದ ಶಿವಮಾದಯ್ಯ ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದ ಬೈರಪ್ಪ (ಗಂಗಣ್ಣ) ಬೆಂಗಳೂರು ದಕ್ಷಿಣ ಜಿಲ್ಲೆ</p></li><li><p><strong>ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ:</strong> ‘ಸ್ವಾತಂತ್ರ್ಯದ ಕಿಡಿಗಳು’ ಗ್ರಂಥಕ್ಕಾಗಿ ಲೇಖಕ ಹೂಲಿ ಶೇಖರ್ ಬೆಂಗಳೂರು </p></li></ul>.<p><strong>ಜಾನಪದ ಲೋಕ ಪ್ರಶಸ್ತಿ</strong></p><ul><li><p>ಚಿನ್ನಮ್ಮ ಜೋಗುಳಪದ ಹಾಡುಗಾರ್ತಿ ಚಾಮರಾಜನಗರ ಜಿಲ್ಲೆ</p></li><li><p>ದೇವರಾಜು ಪೂಜಾ ಕುಣಿತ ಕಲಾವಿದ ಮಂಡ್ಯ ಜಿಲ್ಲೆ</p></li><li><p>ನಾರಾಯಣಪ್ಪ ಮಾಡಶಿರಾವಾರ ತತ್ವಪದ ಕಲಾವಿದ ರಾಯಚೂರು ಜಿಲ್ಲೆ</p></li><li><p>ಎಂ. ತಂಬೂರಿ ಸಿದ್ದರಾಜು ತಂಬೂರಿ ಕಲಾವಿದ ಬೆಂಗಳೂರು</p></li><li><p>ಮುತ್ತಪ್ಪ ಬಸವಂತಪ್ಪ ದಾತನಾಳ ಸಾಹಸ ಕಲಾವಿದ ಧಾರವಾಡ ಜಿಲ್ಲೆ</p></li><li><p>ಚನಿಯಪ್ಪ ನಾಯ್ಕ ಯಕ್ಷಗಾನ ವೇಷಧಾರಿ ಕಲಾವಿದ ಕಾಸರಗೋಡು ಕೇರಳ</p></li><li><p>ಶಾರದಮ್ಮ ಸೋಬಾನೆ ಹಾಡುಗಾರ್ತಿ ಚಿಕ್ಕಮಗಳೂರು ಜಿಲ್ಲೆ</p></li><li><p>ಭಾರತಿಬಾಯಿ ಲಂಬಾಣಿ ನೃತ್ಯ ಕಲಾವಿದೆ ಬೀದರ್ ಜಿಲ್ಲೆ</p></li><li><p>ಬಿ.ಎಸ್. ಗೌಡ (ಬೀರಪ್ಪ ಶಿವು ಗೌಡ) ಯಕ್ಷಗಾನ ಕಲಾವಿದ ಉತ್ತರ ಕನ್ನಡ ಜಿಲ್ಲೆ</p></li><li><p>ಡಾ. ಎಸ್. ರತ್ನಮ್ಮ ಸೋಲಿಗ ಕಲಾವಿದೆ ಚಾಮರಾಜನಗರ ಜಿಲ್ಲೆ</p></li><li><p>ಗಂಗಪ್ಪ ಮಹಾಲಿಂಗಪ್ಪ ಕರಡಿ ಕರಡಿ ಮಜಲು ಕಲಾವಿದ ಬಾಗಲಕೋಟೆ ಜಿಲ್ಲೆ</p></li><li><p>ಎಂ. ಬಸವರಾಜು ಗೊರವ ಕುಣಿತ ಕಲಾವಿದ ಬೆಂಗಳೂರು ಉತ್ತರ ಜಿಲ್ಲೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಕರ್ನಾಟಕ ಜಾನಪದ ಪರಿಷತ್ತು ಲೋಕೋತ್ಸವ ಪ್ರಯುಕ್ತ ಪ್ರತಿ ವರ್ಷ ನೀಡುವ ‘ಜಾನಪದ ಲೋಕ’ ಪ್ರಶಸ್ತಿಗೆ ಈ ಸಲ ಪರಿಷತ್ತಿನ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಪ್ರೊ.ಹಿ. ಶಿ. ರಾಮಚಂದ್ರೇಗೌಡ ಸೇರಿದಂತೆ 19 ಮಂದಿ ಭಾಜನರಾಗಿದ್ದಾರೆ.</p>.<p>ಜಾನಪದ ಲೋಕದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ, ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗೆ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಹೇಳಿದರು.</p>.<p>ಈ ಸಲ ಫೆ. 7 ಮತ್ತು 8ರಂದು ಜಾನಪದ ಲೋಕದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ–2026 ಕಾರ್ಯಕ್ರಮ ನಡೆಯಲಿದೆ. 8ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.</p><p><strong>ಜಾನಪದ ಲೋಕ ದತ್ತಿ ಪ್ರಶಸ್ತಿ</strong></p><ul><li><p><strong>ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ</strong>: ಪ್ರೊ. ಹಿ.ಶಿ. ರಾಮಚಂದ್ರೇಗೌಡ ಮೈಸೂರು ಜಿಲ್ಲೆ</p></li><li><p><strong>ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ</strong>: ಪ್ರೊ. ಕೆ. ಚಿನ್ನಪ್ಪಗೌಡ ದಕ್ಷಿಣ ಕನ್ನಡ ಜಿಲ್ಲೆ</p></li><li><p><strong>ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ</strong>: ಗಣೆ ವಾದನ ಕಲಾವಿದ ಚಿಕ್ಕಣ್ಣ ತುಮಕೂರು ಜಿಲ್ಲೆ </p></li><li><p><strong>ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ</strong>: ಛಾಯಾಗ್ರಾಹಕ ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ ಬೆಂಗಳೂರು </p></li><li><p><strong>ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ:</strong> ಪೂಜಾ ಕುಣಿತ ಕಲಾವಿದ ಶಿವಮಾದಯ್ಯ ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದ ಬೈರಪ್ಪ (ಗಂಗಣ್ಣ) ಬೆಂಗಳೂರು ದಕ್ಷಿಣ ಜಿಲ್ಲೆ</p></li><li><p><strong>ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ:</strong> ‘ಸ್ವಾತಂತ್ರ್ಯದ ಕಿಡಿಗಳು’ ಗ್ರಂಥಕ್ಕಾಗಿ ಲೇಖಕ ಹೂಲಿ ಶೇಖರ್ ಬೆಂಗಳೂರು </p></li></ul>.<p><strong>ಜಾನಪದ ಲೋಕ ಪ್ರಶಸ್ತಿ</strong></p><ul><li><p>ಚಿನ್ನಮ್ಮ ಜೋಗುಳಪದ ಹಾಡುಗಾರ್ತಿ ಚಾಮರಾಜನಗರ ಜಿಲ್ಲೆ</p></li><li><p>ದೇವರಾಜು ಪೂಜಾ ಕುಣಿತ ಕಲಾವಿದ ಮಂಡ್ಯ ಜಿಲ್ಲೆ</p></li><li><p>ನಾರಾಯಣಪ್ಪ ಮಾಡಶಿರಾವಾರ ತತ್ವಪದ ಕಲಾವಿದ ರಾಯಚೂರು ಜಿಲ್ಲೆ</p></li><li><p>ಎಂ. ತಂಬೂರಿ ಸಿದ್ದರಾಜು ತಂಬೂರಿ ಕಲಾವಿದ ಬೆಂಗಳೂರು</p></li><li><p>ಮುತ್ತಪ್ಪ ಬಸವಂತಪ್ಪ ದಾತನಾಳ ಸಾಹಸ ಕಲಾವಿದ ಧಾರವಾಡ ಜಿಲ್ಲೆ</p></li><li><p>ಚನಿಯಪ್ಪ ನಾಯ್ಕ ಯಕ್ಷಗಾನ ವೇಷಧಾರಿ ಕಲಾವಿದ ಕಾಸರಗೋಡು ಕೇರಳ</p></li><li><p>ಶಾರದಮ್ಮ ಸೋಬಾನೆ ಹಾಡುಗಾರ್ತಿ ಚಿಕ್ಕಮಗಳೂರು ಜಿಲ್ಲೆ</p></li><li><p>ಭಾರತಿಬಾಯಿ ಲಂಬಾಣಿ ನೃತ್ಯ ಕಲಾವಿದೆ ಬೀದರ್ ಜಿಲ್ಲೆ</p></li><li><p>ಬಿ.ಎಸ್. ಗೌಡ (ಬೀರಪ್ಪ ಶಿವು ಗೌಡ) ಯಕ್ಷಗಾನ ಕಲಾವಿದ ಉತ್ತರ ಕನ್ನಡ ಜಿಲ್ಲೆ</p></li><li><p>ಡಾ. ಎಸ್. ರತ್ನಮ್ಮ ಸೋಲಿಗ ಕಲಾವಿದೆ ಚಾಮರಾಜನಗರ ಜಿಲ್ಲೆ</p></li><li><p>ಗಂಗಪ್ಪ ಮಹಾಲಿಂಗಪ್ಪ ಕರಡಿ ಕರಡಿ ಮಜಲು ಕಲಾವಿದ ಬಾಗಲಕೋಟೆ ಜಿಲ್ಲೆ</p></li><li><p>ಎಂ. ಬಸವರಾಜು ಗೊರವ ಕುಣಿತ ಕಲಾವಿದ ಬೆಂಗಳೂರು ಉತ್ತರ ಜಿಲ್ಲೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>