<p><strong>ಕುದೂರು(ಮಾಗಡಿ):</strong> ಗ್ರಾಮದಲ್ಲಿನ ಲಕ್ಷ್ಮೀದೇವಿ ನಗರದ24 ವರ್ಷದ ಯುವಕನಿಗೆ ಕೊರೊನಾ ಸೋಂಕು ಮಂಗಳವಾರ ದೃಢಪಟ್ಟಿದೆ.</p>.<p>ಖಾಸಗಿ ಲ್ಯಾಬ್ ಟೆಕ್ನಿಷನ್ ಆಗಿದ್ದು, ಗುಡೇಮಾರನಹಳ್ಳಿ ಮಹಿಳೆಯೊಬ್ಬಳಿಗೆ ಜೂನ್ 30 ರಂದು ರಕ್ತ ಪರೀಕ್ಷೆ ಮಾಡಿದ್ದರು. ಆ ಮಹಿಳೆಗೆ ಜುಲೈ 1ರಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಇವರನ್ನು ಜುಲೈ 2ರಂದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕಿತನ ತಾಯಿ ಮತ್ತು ಅಣ್ಣ ಸೇರಿದಂತೆ ಮೂವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.</p>.<p>ಸೋಂಕಿತನ ಮನೆ ಸುತ್ತ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಡಯಾಗ್ನಸ್ಟಿಕ್ನಲ್ಲಿ 15 ದಿನಗಳಿಂದ ಲ್ಯಾಬ್ ಪರೀಕ್ಷೆ ಮಾಡಿಸಿರುವವರು ಸ್ವಯಂಪ್ರೇರಿತವಾಗಿ ಕುದೂರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಇಲಾಖೆ ಮನವಿ ಮಾಡಿದೆ.</p>.<p>ಬಿಸಲಹಳ್ಳಿ ಗ್ರಾಮದದಲ್ಲಿ 28 ವರ್ಷದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಅನವಶ್ಯಕವಾಗಿ ಓಡಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ಟಿ.ಎಚ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು(ಮಾಗಡಿ):</strong> ಗ್ರಾಮದಲ್ಲಿನ ಲಕ್ಷ್ಮೀದೇವಿ ನಗರದ24 ವರ್ಷದ ಯುವಕನಿಗೆ ಕೊರೊನಾ ಸೋಂಕು ಮಂಗಳವಾರ ದೃಢಪಟ್ಟಿದೆ.</p>.<p>ಖಾಸಗಿ ಲ್ಯಾಬ್ ಟೆಕ್ನಿಷನ್ ಆಗಿದ್ದು, ಗುಡೇಮಾರನಹಳ್ಳಿ ಮಹಿಳೆಯೊಬ್ಬಳಿಗೆ ಜೂನ್ 30 ರಂದು ರಕ್ತ ಪರೀಕ್ಷೆ ಮಾಡಿದ್ದರು. ಆ ಮಹಿಳೆಗೆ ಜುಲೈ 1ರಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಇವರನ್ನು ಜುಲೈ 2ರಂದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕಿತನ ತಾಯಿ ಮತ್ತು ಅಣ್ಣ ಸೇರಿದಂತೆ ಮೂವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.</p>.<p>ಸೋಂಕಿತನ ಮನೆ ಸುತ್ತ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಡಯಾಗ್ನಸ್ಟಿಕ್ನಲ್ಲಿ 15 ದಿನಗಳಿಂದ ಲ್ಯಾಬ್ ಪರೀಕ್ಷೆ ಮಾಡಿಸಿರುವವರು ಸ್ವಯಂಪ್ರೇರಿತವಾಗಿ ಕುದೂರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಇಲಾಖೆ ಮನವಿ ಮಾಡಿದೆ.</p>.<p>ಬಿಸಲಹಳ್ಳಿ ಗ್ರಾಮದದಲ್ಲಿ 28 ವರ್ಷದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಅನವಶ್ಯಕವಾಗಿ ಓಡಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ಟಿ.ಎಚ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>