ನರಸಿಂಹ (42) ಗಾಯಗೊಂಡಿರುವ ಕುರಿಗಾಹಿ. ಬಸವನಪುರದ ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಚಿರತೆ, ನರಸಿಂಹ ಮೇಲೆ ಎರಗಿ, ತಲೆ ಭಾಗದಲ್ಲಿ ಪರಚಿ ಗಾಯಗೊಳಿಸಿದೆ. ಘಟನೆಯಿಂದಾಗಿ ಸಣ್ಣಪುಟ್ಟ ತರಚಿರುವ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.