ಚನ್ನಪಟ್ಟಣ: ಭಾರತೀಯ ಜೀವವಿಮಾ ನಿಗಮ ಪ್ರತಿಯೊಬ್ಬರ ನಂಬಿಕೆಗೆ ಪಾತ್ರವಾಗಿ ಹೆಮ್ಮರವಾಗಿ ಬೆಳೆದಿದೆ ಎಂದು ಜೀವ ವಿಮಾ ನಿಗಮದ ಮಂಡ್ಯ ಶಾಖೆ ಹಿರಿಯ ಅಭಿವೃದ್ಧಿ ಅಧಿಕಾರಿ ಡಾ.ಶ್ರೀನಿವಾಸರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಜೀವಿವಿಮಾ ನಿಗಮದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿ, ನಿಗಮದ ಪಾಲಿಸಿ ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಮುಖಾಂತರ ನಿಗಮವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿಯೂ ಪ್ರತಿನಿಧಿಗಳು ಹೆಚ್ಚಿನ ಶ್ರಮ ವಹಿಸಿ ನಿಗಮದ ಯೋಜನೆಗಳನ್ನು ಪಾಲಿಸಿದಾರರಿಗೆ ತಿಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಶಾಖೆ ಮುಖ್ಯ ವ್ಯವಸ್ಥಾಪಕ ರಮೇಶ್ ಮಾತನಾಡಿ, ನಿಗಮದಲ್ಲಿ ಸಾಕಷ್ಟು ಪಾಲಿಸಿಗಳಿವೆ. ಪ್ರತಿಯೊಂದು ಪಾಲಿಸಿಗಳಲ್ಲಿ ಗ್ರಾಹಕರನ್ನು ತೊಡಗಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಹೆಚ್ಚು ಪಾಲಿಸಿಗಳನ್ನು ಮಾಡಿಸಿದ ಪ್ರತಿನಿಧಿಗಳಿಗೆ ನಿಗಮದ ಅಭಿವೃದ್ಧಿ ಅಧಿಕಾರಿ ಎಂ.ಕೆ. ಸೋಮಶೇಖರ್ ಬಹುಮಾನ ವಿತರಿಸಿದರು.
ಮಂಡ್ಯ ಶಾಖೆ ಜಡ್.ಎಂ.ಪ್ರತಿನಿಧಿ ಸ್ವರ್ಣಕುಮಾರ್, ಹಿರಿಯ ಪ್ರತಿನಿಧಿಗಳಾದ ಜಗದೀಶ್, ಮುತ್ತುರಾಜು, ಸಂತೋಷ್, ರೂಪ, ಕಲಾವತಿ ಇದ್ದರು.