‘ಸುರೇಶ್ ಅವರು ಸಂಸದರಾಗಲು ನಾನು ನೆರವಾಗಿದ್ದೆ’ ಎಂಬ ಯೋಗೇಶ್ವರ್ ಅವರ ಹೇಳಿಕೆಗೆ, ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಯೋಗೇಶ್ವರ್ ಹಿಂದಿನ ಚುನಾವಣೆಗಳಲ್ಲಷ್ಟೇ ಅಲ್ಲದೆ, ಈಗಲೂ ನನಗೆ ಸಹಾಯ ಮಾಡಿದ್ದಾರೆ. ನಿಜವಾಗಿಯೂ ನನ್ನನ್ನು ಸೋಲಿಸುವ ಉದ್ದೇಶ ಅವರಿಗಿದ್ದಿದ್ದರೆ, ಡಾ. ಸಿ.ಎನ್. ಮಂಜುನಾಥ್ ಅವರ ಬದಲಿಗೆ ತಾವೇ ಸ್ಪರ್ಧಿಸುತ್ತಿದ್ದರು’ ಎಂದು ತಿರುಗೇಟು ನೀಡಿದರು.