ಸಮಿತಿ ಭೇಟಿ: ಕಳೆದ ಎರಡು ವಾರಗಳ ಹಿಂದೆ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ತಾಲೂಕುಗಳಿಗೆ ತಾಂತ್ರಿಕ ಸಲಹ ಸಮಿತಿ ಭೇಟಿ ನೀಡಿತ್ತು. ಈ ವೇಳೆ ಕೆಲವು ಭಾಗದಲ್ಲಿ ಮಾವಿಗೆ ಕೀಟಬಾಧೆ ಕಾಣಿಸಿಕೊಂಡರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ಸಮಿತಿಯು ಸಲಹೆಗಳನ್ನು ನೀಡಿದೆ. ಡಿಸೆಂಬರ್ ಎರಡನೇ ವಾರದೊಳಗೆ ಬೂರ್ಫೋಜನ್,ಥಯೋಮೆಥಾಕ್ಸಾಮ್, ಕಾರ್ಬನ್ ಡೈಜಿಮ್, ಕ್ಲೋರೋಥೋನಿಯಲ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಿಸುವುದರಿಂದ ಕುಡಿ ಕೊರಕ, ಜಿಗಿ ಹುಳು ಇತರೆ ಶಿಲೀಂದ್ರ ರೋಗಗಳಿಂದ ಮಾವು ಬೆಳೆ ಸಂರಕ್ಷಿಸಬಹುದಾಗಿದೆ.