‘ಚುನಾವಣೆಯಲ್ಲಿ ನಾನು ಗೆದ್ದರೆ, ಮಾದೇಶ್ವರನ ಸನ್ನಿಧಿಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಬಿಡದಿ ಹೋಬಳಿಯ ಮುಖಂಡರು ಹಾಗೂ ಕಾರ್ಯಕರ್ತರು ಹರಕೆ ಹೊತ್ತಿದ್ದರು. ಅದರಂತೆ, ಇಂದು ಅಲ್ಲಿನ ಮುಖಂಡರೊಂದಿಗೆ ಸಂಕ್ರಾಂತಿಯಂದು ಪಾದಯಾತ್ರೆ ಕೈಗೊಂಡು, ದೇವರ ದರ್ಶನ ಪಡೆದಿದ್ದೇನೆ. ರಾಜ್ಯದಲ್ಲಿ ಮಳೆ–ಬೆಳೆ ಚನ್ನಾಗಿ ಬಂದು, ರಾಜ್ಯ ಸುಭಿಕ್ಷವಾಗಿರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ’ ಎಂದು ದೇವರ ದರ್ಶನದ ಬಳಿಕ ಶಾಸಕ ಬಾಲಕೃಷ್ಣ ಹೇಳಿದರು.