<p><strong>ರಾಮನಗರ</strong>: ಮದ್ಯದ ಅಮಲಿನಲ್ಲಿ ಶಾಸಕರ ಕಚೇರಿಗೆ ಕಲ್ಲು ತೂರಿ, ಕಿಟಕಿ ಗಾಜು ಒಡೆದು ಹಾಕಿದ ಕಾರ್ಮಿಕನೊಬ್ಬ ಐಜೂರು ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಟ್ರೂಪ್ಲೈನ್ನ ಮುತ್ತುರಾಜು ಬಂಧಿತ ಕಾರ್ಮಿಕ.</p>.<p>ಪೇಂಟಿಂಗ್ ಕೆಲಸ ಮಾಡುವ ಮುತ್ತುರಾಜು ಇತ್ತೀಚೆಗೆ ಶಾಸಕರ ಕಚೇರಿಗೆ ಹೋಗಿ ದುಡ್ಡು ಕೇಳಿದ್ದ. ಆಗ ಅಲ್ಲಿದ್ದವರು ಹಣ ನೀಡಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಆತ ಆ. 22ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿದ್ದ.</p>.<p>ಕಚೇರಿಯ ಎರಡು ಕಿಟಕಿಗಳಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದು ಹಾಕಿ, ₹4 ಸಾವಿರ ನಷ್ಟ ಉಂಟುಮಾಡಿದ್ದ. ಆತನ ಕೃತ್ಯವನ್ನು ಸ್ಥಳದಲ್ಲಿದ್ದ ಒಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದರು. ಅದನ್ನು ಶಾಸಕರ ಆಪ್ತ ಸಹಾಯಕ ಶಶಿಧರ್ ಅವರಿಗೆ ಕಳಿಸಿದ್ದರು ಎಂದು ಪೊಲೀಸರು ತಿಳಿಸಿದರು.</p>.<p>ಚಿತ್ರದಲ್ಲಿ ವ್ಯಕ್ತಿ ಮುತ್ತುರಾಜು ಎಂಬುದು ಗೊತ್ತಾಗುತ್ತಿದ್ದಂತೆ ಆತನ ವಿರುದ್ಧ ಶಶಿಧರ್ ಠಾಣೆಗೆ ದೂರು ಕೊಟ್ಟಿದ್ದರು. ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ಆರೋಪದ ಮೇಲೆ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಮದ್ಯದ ಅಮಲಿನಲ್ಲಿ ಶಾಸಕರ ಕಚೇರಿಗೆ ಕಲ್ಲು ತೂರಿ, ಕಿಟಕಿ ಗಾಜು ಒಡೆದು ಹಾಕಿದ ಕಾರ್ಮಿಕನೊಬ್ಬ ಐಜೂರು ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಟ್ರೂಪ್ಲೈನ್ನ ಮುತ್ತುರಾಜು ಬಂಧಿತ ಕಾರ್ಮಿಕ.</p>.<p>ಪೇಂಟಿಂಗ್ ಕೆಲಸ ಮಾಡುವ ಮುತ್ತುರಾಜು ಇತ್ತೀಚೆಗೆ ಶಾಸಕರ ಕಚೇರಿಗೆ ಹೋಗಿ ದುಡ್ಡು ಕೇಳಿದ್ದ. ಆಗ ಅಲ್ಲಿದ್ದವರು ಹಣ ನೀಡಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಆತ ಆ. 22ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿದ್ದ.</p>.<p>ಕಚೇರಿಯ ಎರಡು ಕಿಟಕಿಗಳಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದು ಹಾಕಿ, ₹4 ಸಾವಿರ ನಷ್ಟ ಉಂಟುಮಾಡಿದ್ದ. ಆತನ ಕೃತ್ಯವನ್ನು ಸ್ಥಳದಲ್ಲಿದ್ದ ಒಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದರು. ಅದನ್ನು ಶಾಸಕರ ಆಪ್ತ ಸಹಾಯಕ ಶಶಿಧರ್ ಅವರಿಗೆ ಕಳಿಸಿದ್ದರು ಎಂದು ಪೊಲೀಸರು ತಿಳಿಸಿದರು.</p>.<p>ಚಿತ್ರದಲ್ಲಿ ವ್ಯಕ್ತಿ ಮುತ್ತುರಾಜು ಎಂಬುದು ಗೊತ್ತಾಗುತ್ತಿದ್ದಂತೆ ಆತನ ವಿರುದ್ಧ ಶಶಿಧರ್ ಠಾಣೆಗೆ ದೂರು ಕೊಟ್ಟಿದ್ದರು. ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ಆರೋಪದ ಮೇಲೆ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>