ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಂದರಜೋಗಿ’ಗೆ ಹೊಸ ರೂಪ!

Last Updated 4 ಜನವರಿ 2021, 2:52 IST
ಅಕ್ಷರ ಗಾತ್ರ

ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕೃತಿ`ಬೊಮ್ಮನಹಳ್ಳಿ ಕಿಂದರಿಜೋಗಿ' ಕವನ ಸಂಕಲನ ಹೊಸ ವೇಷದಲ್ಲಿ ಹೊರಬಂದಿದೆ.

ಪಟ್ಟಣದ ಸೇಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಆರ್.ವಿ.ಅಚಲ, ಕಿರುಬೆರಳಿನಲ್ಲಿ ಎತ್ತಿ ಹಿಡಿಯಬಹುದಾದಷ್ಟು ಚಿಕ್ಕ ಗಾತ್ರದಲ್ಲಿ ಕಿಂದರಜೋಗಿ ಕವನ ಸಂಕಲನವನ್ನು ಹೊರತಂದಿದ್ದಾಳೆ.ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ವಿಶೇಷವಾಗಿಕೇವಲ 1 ಸೆಂ.ಮೀ x 1 ಸೆಂ.ಮೀ. ಅಳತೆಯಲ್ಲಿ `ಬೊಮ್ಮನಹಳ್ಳಿ ಕಿಂದರಿಜೋಗಿ' ಕವನ ಸಂಕಲನವನ್ನು ಕೈಯಿಂದ ಬರೆದಿದ್ದಾಳೆ.

28 ದೊಡ್ಡ ಪುಟದಲ್ಲಿದ್ದ 4229 ಅಕ್ಷರಗಳನ್ನು 32 ಪುಟ್ಟ ಪುಟದಲ್ಲಿ ಕೇವಲ 12 ಗಂಟೆಗಳ ಅವಧಿಯಲ್ಲಿ ಪೆನ್ಸಿಲ್ನಲ್ಲಿ ಬರೆದಿದ್ದಾಳೆ. ಈ ಪುಸ್ತಕದ ತೂಕ ಕೇವಲ 0.210 ಮಿಲಿ ಗ್ರಾಂ.

ತಾಲ್ಲೂಕಿನ ರಾಂಪುರ ಗ್ರಾಮದ ಅಚಲ, ಸರ್ಕಾರ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಓದುವ ಬೆಳಕು ಯೋಜನೆಯ ಅಭಿಯಾನ ಕೈಗೊಂಡಿದ್ದಾಳೆ.

ಈಕೆಯ ತಂದೆ ವಿಜಯ್ ರಾಂಪುರ ಸಹ ಪೋಸ್ಟ್ ಕಾರ್ಡ್ ನ ಒಂದು ಬದಿಯಲ್ಲಿ `ಇಂಡಿಯಾ' ಎಂದು 59,325 ಆಂಗ್ಲ ಪದಗಳನ್ನು ಬರೆದು ದಾಖಲೆ ನಿರ್ಮಿಸಿದ್ದರು. ಇದು ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT