<p><strong>ರಾಮನಗರ:</strong> ಅವಳಿ ನಗರದ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ–ಅನಿತಾ ದಂಪತಿ ತಮ್ಮ ಮಗನ ಮದುವೆ ಅಂಗವಾಗಿ ರಾಮನಗರ–ಚನ್ನಪಟ್ಟಣದ ಜನರಿಗೆ ಉಡುಗೊರೆಯೊಂದನ್ನು ನೀಡಲಿದ್ದಾರೆ. ಸದ್ಯದಲ್ಲೇ ಈ ಉಡುಗೊರೆಯು ಪ್ರತಿ ಮನೆಯ ಬಾಗಿಲು ತಲುಪಲಿದೆ.</p>.<p>ಅರ್ಚಕರಹಳ್ಳಿಯ ಜಾನಪದ ಲೋಕದ ಬಳಿ ಮೈದಾನದಲ್ಲಿ ಏಪ್ರಿಲ್ 17ರಂದು ನಿಖಿಲ್–ರೇವತಿ ವಿವಾಹ ನೆರವೇರಲಿದೆ. ಈಗಾಗಲೇ ಇದರ ಲಗ್ನಪತ್ರಿಕೆ ಮುದ್ರಣ ಕಂಡಿದ್ದು, ಎರಡೂ ವಿಧಾನಸಭಾ ಕ್ಷೇತ್ರಗಳ ಮನೆಮನೆಗೆ ಇದನ್ನು ಹಂಚಲು ಸಿದ್ಧತೆ ನಡೆದಿದೆ. ಇದರ ಜೊತೆಯಲ್ಲೇ ಮದುವೆಗಾಗಿ ಉಡುಗೊರೆಯೊಂದನ್ನು ನೀಡಲು ಕುಮಾರಸ್ವಾಮಿ ಬಯಸಿದ್ದಾರೆ.</p>.<p>ಪ್ರತಿ ಆಹ್ವಾನ ಪತ್ರಿಕೆಯ ಜೊತೆಗೆ ತಲಾ ಒಂದು ಸೀರೆ, ಶರ್ಟ್, ಪಂಚೆ, ಶಲ್ಯವನ್ನು ಒಳಗೊಂಡ ಉಡುಗೊರೆಯನ್ನು ನೀಡಲು ಸಿದ್ಧತೆ ನಡೆದಿದೆ. ಕುಮಾರಣ್ಣನ ಪರವಾಗಿ ಕಾರ್ಯಕರ್ತರೇ ಮನೆಮನೆಗೆ ತೆರಳಿ ಮದುವೆಗೆ ಆಹ್ವಾನ ನೀಡಲಿದ್ದಾರೆ.</p>.<p><strong>ಮನೆಮನೆ ಮಾಹಿತಿ:</strong> ರಾಮನಗರ ಹಾಗೂ ಚನ್ನಪಟ್ಟಣದಲ್ಲಿನ ಮನೆಗಳ ಸಂಖ್ಯೆ ಕುರಿತು ಮಾಹಿತಿ ನೀಡುವಂತೆ ಕುಮಾರಸ್ವಾಮಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅದರಂತೆ ಜೆಡಿಎಸ್ ಕಾರ್ಯಕರ್ತರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳ ಲೆಕ್ಕವನ್ನು ಒಪ್ಪಿಸಿದ್ದಾರೆ. ರಾಮನಗರದಲ್ಲಿ 68 ಸಾವಿರ ಹಾಗೂ ಚನ್ನಪಟ್ಟಣದಲ್ಲಿ 70 ಸಾವಿರ ಮನೆಗಳು ಇರುವುದಾಗಿ ಅಂದಾಜಿಸಲಾಗಿದೆ.</p>.<p>‘ಪಟ್ಟಣ ಹಾಗೂ ಹಳ್ಳಿಗಳಲ್ಲಿನ ಮನೆಗಳ ಮಾಹಿತಿಯನ್ನು ಕುಮಾರಣ್ಣ ಕೇಳಿದ್ದು, ಈಗಾಗಲೇ ಒದಗಿಸಿದ್ದೇವೆ. ಆಹ್ವಾನ ಪತ್ರಿಕೆಯ ಜೊತೆಗೆ ಸಾಂಪ್ರದಾಯಿಕವಾದ ಉಡುಗೆಗಳ ಉಡುಗೊರೆಯೂ ಇರಲಿದೆ. ಮದುವೆಗೆ ಎರಡು–ಮೂರು ವಾರ ಇರುವಾಗ ಇದನ್ನು ಹಂಚಲು ಯೋಜಿಸಿದ್ದೇವೆ’ ಎಂದು ಜೆಡಿಎಸ್ ಮುಖಂಡರೊಬ್ಬರು ಮಾಹಿತಿ ನೀಡಿದರು.</p>.<p><strong>ಅದ್ದೂರಿ ಸೆಟ್:</strong> ಮತ್ತೊಂದೆಡೆ, ‘ಸಪ್ತಪದಿ ಮಂಟಪ’ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಸುಮಾರು 20 ಎಕರೆಯಷ್ಟು ಪ್ರದೇಶದಲ್ಲಿ ಈ ಸೆಟ್ ತಲೆ ಎತ್ತಲಿದೆ. ಬೆಂಗಳೂರಿನ ಮಂಜಣ್ಣ ಎಂಬುವರು ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ನೀರಿನ ಸೌಕರ್ಯಕ್ಕಾಗಿ ಸ್ಥಳದಲ್ಲಿ ಈಗಾಗಲೇ ನಾಲ್ಕಾರು ಕೊಳವೆಬಾವಿಗಳನ್ನು ಕೊರೆಯಲಾಗಿದೆ.</p>.<p>ಮದುವೆಗೆ ಸುಮಾರು 7ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಇವರೆಲ್ಲರಿಗೆ ಊಟೋಪಚಾರದ ವ್ಯವಸ್ಥೆಯನ್ನು ಬೆಂಗಳೂರಿನ ಬಳೆಪೇಟೆ ಬಳಿಯ ಬಾಣಸಿಗರ ತಂಡವೊಂದು ಮಾಡಲಿದೆ. ಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಭೋಜನ ವ್ಯವಸ್ಥೆಗೆಂದೇ ಹತ್ತಾರು ಎಕರೆ ಪ್ರದೇಶವನ್ನು ಸಮತಟ್ಟು ಮಾಡುವ ಕಾರ್ಯ ನಡೆದಿದೆ.</p>.<p>**</p>.<p>ನಿಖಿಲ್ಮದುವೆ ಸರಳವಾಗಿಯೇ ನಡೆಯಲಿದೆ. ಬಂದವರೆಲ್ಲರನ್ನೂ ಹಾಗೆಯೇ ಕಳಿಸಲು ಆಗದು. ಊಟೋಪಚಾರವೂ ಸರಳವಾಗಿರಲಿದೆ.<br /><em><strong>-ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ</strong></em></p>.<p><em><strong>**</strong></em></p>.<p>ಇದು ಕಾರ್ಯಕರ್ತರೆಲ್ಲರೂ ಸೇರಿ ಮಾಡುತ್ತಿರುವ ಮದುವೆ. ಜನರ ಆಹ್ವಾನ, ಉಡುಗೊರೆ ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ.<br /><em><strong>-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಅವಳಿ ನಗರದ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ–ಅನಿತಾ ದಂಪತಿ ತಮ್ಮ ಮಗನ ಮದುವೆ ಅಂಗವಾಗಿ ರಾಮನಗರ–ಚನ್ನಪಟ್ಟಣದ ಜನರಿಗೆ ಉಡುಗೊರೆಯೊಂದನ್ನು ನೀಡಲಿದ್ದಾರೆ. ಸದ್ಯದಲ್ಲೇ ಈ ಉಡುಗೊರೆಯು ಪ್ರತಿ ಮನೆಯ ಬಾಗಿಲು ತಲುಪಲಿದೆ.</p>.<p>ಅರ್ಚಕರಹಳ್ಳಿಯ ಜಾನಪದ ಲೋಕದ ಬಳಿ ಮೈದಾನದಲ್ಲಿ ಏಪ್ರಿಲ್ 17ರಂದು ನಿಖಿಲ್–ರೇವತಿ ವಿವಾಹ ನೆರವೇರಲಿದೆ. ಈಗಾಗಲೇ ಇದರ ಲಗ್ನಪತ್ರಿಕೆ ಮುದ್ರಣ ಕಂಡಿದ್ದು, ಎರಡೂ ವಿಧಾನಸಭಾ ಕ್ಷೇತ್ರಗಳ ಮನೆಮನೆಗೆ ಇದನ್ನು ಹಂಚಲು ಸಿದ್ಧತೆ ನಡೆದಿದೆ. ಇದರ ಜೊತೆಯಲ್ಲೇ ಮದುವೆಗಾಗಿ ಉಡುಗೊರೆಯೊಂದನ್ನು ನೀಡಲು ಕುಮಾರಸ್ವಾಮಿ ಬಯಸಿದ್ದಾರೆ.</p>.<p>ಪ್ರತಿ ಆಹ್ವಾನ ಪತ್ರಿಕೆಯ ಜೊತೆಗೆ ತಲಾ ಒಂದು ಸೀರೆ, ಶರ್ಟ್, ಪಂಚೆ, ಶಲ್ಯವನ್ನು ಒಳಗೊಂಡ ಉಡುಗೊರೆಯನ್ನು ನೀಡಲು ಸಿದ್ಧತೆ ನಡೆದಿದೆ. ಕುಮಾರಣ್ಣನ ಪರವಾಗಿ ಕಾರ್ಯಕರ್ತರೇ ಮನೆಮನೆಗೆ ತೆರಳಿ ಮದುವೆಗೆ ಆಹ್ವಾನ ನೀಡಲಿದ್ದಾರೆ.</p>.<p><strong>ಮನೆಮನೆ ಮಾಹಿತಿ:</strong> ರಾಮನಗರ ಹಾಗೂ ಚನ್ನಪಟ್ಟಣದಲ್ಲಿನ ಮನೆಗಳ ಸಂಖ್ಯೆ ಕುರಿತು ಮಾಹಿತಿ ನೀಡುವಂತೆ ಕುಮಾರಸ್ವಾಮಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅದರಂತೆ ಜೆಡಿಎಸ್ ಕಾರ್ಯಕರ್ತರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳ ಲೆಕ್ಕವನ್ನು ಒಪ್ಪಿಸಿದ್ದಾರೆ. ರಾಮನಗರದಲ್ಲಿ 68 ಸಾವಿರ ಹಾಗೂ ಚನ್ನಪಟ್ಟಣದಲ್ಲಿ 70 ಸಾವಿರ ಮನೆಗಳು ಇರುವುದಾಗಿ ಅಂದಾಜಿಸಲಾಗಿದೆ.</p>.<p>‘ಪಟ್ಟಣ ಹಾಗೂ ಹಳ್ಳಿಗಳಲ್ಲಿನ ಮನೆಗಳ ಮಾಹಿತಿಯನ್ನು ಕುಮಾರಣ್ಣ ಕೇಳಿದ್ದು, ಈಗಾಗಲೇ ಒದಗಿಸಿದ್ದೇವೆ. ಆಹ್ವಾನ ಪತ್ರಿಕೆಯ ಜೊತೆಗೆ ಸಾಂಪ್ರದಾಯಿಕವಾದ ಉಡುಗೆಗಳ ಉಡುಗೊರೆಯೂ ಇರಲಿದೆ. ಮದುವೆಗೆ ಎರಡು–ಮೂರು ವಾರ ಇರುವಾಗ ಇದನ್ನು ಹಂಚಲು ಯೋಜಿಸಿದ್ದೇವೆ’ ಎಂದು ಜೆಡಿಎಸ್ ಮುಖಂಡರೊಬ್ಬರು ಮಾಹಿತಿ ನೀಡಿದರು.</p>.<p><strong>ಅದ್ದೂರಿ ಸೆಟ್:</strong> ಮತ್ತೊಂದೆಡೆ, ‘ಸಪ್ತಪದಿ ಮಂಟಪ’ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಸುಮಾರು 20 ಎಕರೆಯಷ್ಟು ಪ್ರದೇಶದಲ್ಲಿ ಈ ಸೆಟ್ ತಲೆ ಎತ್ತಲಿದೆ. ಬೆಂಗಳೂರಿನ ಮಂಜಣ್ಣ ಎಂಬುವರು ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ನೀರಿನ ಸೌಕರ್ಯಕ್ಕಾಗಿ ಸ್ಥಳದಲ್ಲಿ ಈಗಾಗಲೇ ನಾಲ್ಕಾರು ಕೊಳವೆಬಾವಿಗಳನ್ನು ಕೊರೆಯಲಾಗಿದೆ.</p>.<p>ಮದುವೆಗೆ ಸುಮಾರು 7ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಇವರೆಲ್ಲರಿಗೆ ಊಟೋಪಚಾರದ ವ್ಯವಸ್ಥೆಯನ್ನು ಬೆಂಗಳೂರಿನ ಬಳೆಪೇಟೆ ಬಳಿಯ ಬಾಣಸಿಗರ ತಂಡವೊಂದು ಮಾಡಲಿದೆ. ಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಭೋಜನ ವ್ಯವಸ್ಥೆಗೆಂದೇ ಹತ್ತಾರು ಎಕರೆ ಪ್ರದೇಶವನ್ನು ಸಮತಟ್ಟು ಮಾಡುವ ಕಾರ್ಯ ನಡೆದಿದೆ.</p>.<p>**</p>.<p>ನಿಖಿಲ್ಮದುವೆ ಸರಳವಾಗಿಯೇ ನಡೆಯಲಿದೆ. ಬಂದವರೆಲ್ಲರನ್ನೂ ಹಾಗೆಯೇ ಕಳಿಸಲು ಆಗದು. ಊಟೋಪಚಾರವೂ ಸರಳವಾಗಿರಲಿದೆ.<br /><em><strong>-ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ</strong></em></p>.<p><em><strong>**</strong></em></p>.<p>ಇದು ಕಾರ್ಯಕರ್ತರೆಲ್ಲರೂ ಸೇರಿ ಮಾಡುತ್ತಿರುವ ಮದುವೆ. ಜನರ ಆಹ್ವಾನ, ಉಡುಗೊರೆ ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ.<br /><em><strong>-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>