ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ ‘ಇದೇ ಸ್ಥಳದಲ್ಲಿ ಏಪ್ರಿಲ್ 17ರಂದು ಮದುವೆ ನಡೆಯಲಿದೆ. ಸಂಪ್ರದಾಯಬದ್ಧವಾಗಿ ಕಾರ್ಯಕ್ರಮಗಳು ನೆರವೇರಲಿದ್ದು, ಇನ್ನೆರಡು ದಿನದಲ್ಲಿ ಜ್ಯೋತಿಷಿಗಳು ಭೇಟಿ ಕೊಟ್ಟು ಸ್ಥಳ ಪರಿಶೀಲಿಸಲಿದ್ದಾರೆ. ಕಲ್ಯಾಣ ಮಂಟಪ ಸೇರಿದಂತೆ ಯಾವುದು ಎಲ್ಲಿರಬೇಕು ಎಂದು ಹೇಳಲಿದ್ದಾರೆ. ಭೋಜನಾಲಯ, ಪಾರ್ಕಿಂಗ್ಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ’ ಎಂದು ತಿಳಿಸಿದರು.