ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ, ತಹಶೀಲ್ದಾರ್ ಜೊತೆ ಸಭೆ ನಡೆಸಿದ್ದ ಶಾಸಕ ಕುಮಾರಸ್ವಾಮಿ ಅವರು, ತ್ಯಾಜ್ಯ ವಿಲೇವಾರಿಗೆ ನ. 5ರೊಳಗೆ ಜಾಗ ಅಂತಿಮಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆ ಮೇರೆಗೆ, ಅಧಿಕಾರಿಗಳು ಕಡೆಗೂ ವಿಲೇವಾರಿಗೆ ಜಾಗವನ್ನು ಅಂತಿಮಗೊಳಿಸಿದ್ದು, ಇದೀಗ ಜಿಲ್ಲಾಧಿಕಾರಿಯಿಂದ ಆದೇಶವು ಹೊರಬಿದ್ದಿದೆ.