<p><strong>ಮಾಗಡಿ: </strong>ಅನ್ವೇಷಣೆ ಬಹಿರ್ಮುಖವಾಗಿ ಸೃಷ್ಟಿ ರಹಸ್ಯದ ಕಡೆಗೆ ತಿರುಗಿದಾಗ ವಿಜ್ಞಾನ ಎನಿಸಿಕೊಳ್ಳುತ್ತದೆ. ಅಂತರ್ಮುಖವಾಗಿ ತಿರುಗಿದಾಗ ಧರ್ಮ ಎನಿಸಿಕೊಳ್ಳುತ್ತದೆ ಎಂದು ಸಂಸ್ಕೃತಿ ಚಿಂತಕ ಕೆ.ಎನ್.ಗಂಗರಾಜು ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಗಂಗಾಧರೇಶ್ವರ ಪ್ರೌಢಶಾಲೆ ಮಕ್ಕಳಿಗೆ ಜನ್ಮದಿನದ ಅಂಗವಾಗಿ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.</p>.<p>ವಿಜ್ಞಾನಿ ಐನ್ಸ್ಟೈನ್ ಹೇಳಿರುವಂತೆ; ಧರ್ಮವಿಲ್ಲದ ವಿಜ್ಞಾನ ಕುರುಡು. ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುಂಟು. ಮಾನವಧರ್ಮದ ಮೂಲ ಸ್ವರೂಪ ಸಾರ್ವತ್ರಿಕವಾದ ಸತ್ಯದಿಂದ ಕೂಡಿದೆ. ಸರ್ವರಿಗೂ ಒಳಿತನ್ನೇ ಬಯಸುವ ಮೂಲತತ್ವ ಒಳಗೊಂಡಂತೆ ಮಕ್ಕಳಿಗೆ ಮೌಲ್ಯ ಕಲಿಸಬೇಕೆಂದು ಕಿವಿಮಾತು ಹೇಳಿದರು.</p>.<p>ಮುಖ್ಯಶಿಕ್ಷಕ ಚನ್ನೇಗೌಡ ಮಾತನಾಡಿ, ಮನುಕುಲದ ಏಳಿಗೆಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಶಾಂತಿಪ್ರಿಯರ ಜಗತ್ತು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. </p>.<p>ಪುರಸಭೆ ಸದಸ್ಯರಾದ ರಘು, ಮೂರ್ತಿ, ಮುಖಂಡರಾದ ಮೈಕೆಲ್, ಮೀನಾ.ಟಿ, ಜಗತ್ ಪ್ರಿಯ.ಜಿ, ಹಿಮಶ್ರೀ, ಈಶ್ವರ, ಮಂಜುನಾಥ್, ಚಿಕ್ಕಣ್ಣ, ಸಿದ್ದರಾಜು, ರಾಮಣ್ಣ, ಕೆ.ಬಿ.ಬಸವರಾಜು ಮಾತನಾಡಿದರು.</p>.<p>ಕೆ.ಬಿ.ಬಸವರಾಜು, ಕೋಂಡಹಳ್ಳಿ ಶಿವಲಿಂಗಯ್ಯ, ನರಸಮ್ಮ ನರಸಯ್ಯ, ಲಕ್ಷ್ಮಮ್ಮ ಇದ್ದರು. ವಿದ್ಯಾರ್ಥಿಗಳಿಗೆ ನೆರವು ನೀಡಿದ ಕೆ.ಎನ್.ಗಂಗರಾಜು ದಂಪತಿಯನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಶಿಕ್ಷಕರಾದ ರಜನಿ, ಕುಮಾರ್, ಕಿರಣ್ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: </strong>ಅನ್ವೇಷಣೆ ಬಹಿರ್ಮುಖವಾಗಿ ಸೃಷ್ಟಿ ರಹಸ್ಯದ ಕಡೆಗೆ ತಿರುಗಿದಾಗ ವಿಜ್ಞಾನ ಎನಿಸಿಕೊಳ್ಳುತ್ತದೆ. ಅಂತರ್ಮುಖವಾಗಿ ತಿರುಗಿದಾಗ ಧರ್ಮ ಎನಿಸಿಕೊಳ್ಳುತ್ತದೆ ಎಂದು ಸಂಸ್ಕೃತಿ ಚಿಂತಕ ಕೆ.ಎನ್.ಗಂಗರಾಜು ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಗಂಗಾಧರೇಶ್ವರ ಪ್ರೌಢಶಾಲೆ ಮಕ್ಕಳಿಗೆ ಜನ್ಮದಿನದ ಅಂಗವಾಗಿ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.</p>.<p>ವಿಜ್ಞಾನಿ ಐನ್ಸ್ಟೈನ್ ಹೇಳಿರುವಂತೆ; ಧರ್ಮವಿಲ್ಲದ ವಿಜ್ಞಾನ ಕುರುಡು. ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುಂಟು. ಮಾನವಧರ್ಮದ ಮೂಲ ಸ್ವರೂಪ ಸಾರ್ವತ್ರಿಕವಾದ ಸತ್ಯದಿಂದ ಕೂಡಿದೆ. ಸರ್ವರಿಗೂ ಒಳಿತನ್ನೇ ಬಯಸುವ ಮೂಲತತ್ವ ಒಳಗೊಂಡಂತೆ ಮಕ್ಕಳಿಗೆ ಮೌಲ್ಯ ಕಲಿಸಬೇಕೆಂದು ಕಿವಿಮಾತು ಹೇಳಿದರು.</p>.<p>ಮುಖ್ಯಶಿಕ್ಷಕ ಚನ್ನೇಗೌಡ ಮಾತನಾಡಿ, ಮನುಕುಲದ ಏಳಿಗೆಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಶಾಂತಿಪ್ರಿಯರ ಜಗತ್ತು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. </p>.<p>ಪುರಸಭೆ ಸದಸ್ಯರಾದ ರಘು, ಮೂರ್ತಿ, ಮುಖಂಡರಾದ ಮೈಕೆಲ್, ಮೀನಾ.ಟಿ, ಜಗತ್ ಪ್ರಿಯ.ಜಿ, ಹಿಮಶ್ರೀ, ಈಶ್ವರ, ಮಂಜುನಾಥ್, ಚಿಕ್ಕಣ್ಣ, ಸಿದ್ದರಾಜು, ರಾಮಣ್ಣ, ಕೆ.ಬಿ.ಬಸವರಾಜು ಮಾತನಾಡಿದರು.</p>.<p>ಕೆ.ಬಿ.ಬಸವರಾಜು, ಕೋಂಡಹಳ್ಳಿ ಶಿವಲಿಂಗಯ್ಯ, ನರಸಮ್ಮ ನರಸಯ್ಯ, ಲಕ್ಷ್ಮಮ್ಮ ಇದ್ದರು. ವಿದ್ಯಾರ್ಥಿಗಳಿಗೆ ನೆರವು ನೀಡಿದ ಕೆ.ಎನ್.ಗಂಗರಾಜು ದಂಪತಿಯನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಶಿಕ್ಷಕರಾದ ರಜನಿ, ಕುಮಾರ್, ಕಿರಣ್ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>